ಇಂದಿನ ತಂತ್ರಜ್ಞಾನದ ಯುಗದಲ್ಲಿ ಉದ್ಯೋಗ ಹುಡುಕುತ್ತಿರುವವರಿಗೆ ಎಐ (AI) ಅಂದರೆ ಕೃತಕ ಬುದ್ಧಿಮತ್ತೆ ಕಂಟಕ ತರಬಹುದು ಎಂಬ ಆತಂಕದ ಜೊತೆಗೆ ಉದ್ಯೋಗಿಗಳ ಕೆಲಸವನ್ನೂ ಕಸಿದುಕೊಳ್ಳಬಹುದೆಂಬ ಭಯ ಈಗಾಗಲೇ ಸೃಷ್ಟಿಯಾಗಿದೆ. ಇದರ ಜೊತೆಗೆ ಎಐನಿಂದ ನೇಮಕಾತಿ ಪ್ರಕ್ರಿಯೆಯೂ ದಿನದಿಂದ ದಿನಕ್ಕೆ ಕಷ್ಟಕರವಾಗುತ್ತಿದೆ ಎಂಬ ಅಭಿಪ್ರಾಯಗಳು ಹರಿದಾಡಿದ್ದು, ಈ ಬಗ್ಗೆ ಬೆಂಗಳೂರು ಮೂಲದ ಟೇಕ್ ಯು ಫಾರ್ವರ್ಡ್ ಸಂಸ್ಥೆಯ ಸಂಸ್ಥಾಪಕ ರಾಜ್ ವಿಕ್ರಮಾದಿತ್ಯ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಇತ್ತೀಚೆಗೆ ಯೂಸರ್ ಎಕ್ಸ್ಪೀರಿಯನ್ಸ್ ಹುದ್ದೆಗೆ ನಡೆದ ನೇಮಕಾತಿ ಪ್ರಕ್ರಿಯೆಯನ್ನು ಉದಾಹರಿಸಿ ಮಾತನಾಡಿದ ಅವರು, ಹೆಚ್ಚಿನ ಅಭ್ಯರ್ಥಿಗಳ ಅರ್ಜಿಗಳು AI ಮೂಲಕ ತಯಾರಿಸಲಾಗಿವೆ. ಅಲ್ಲದೆ ಅವುಗಳು ಕೇವಲ ತಾಂತ್ರಿಕತೆಯನ್ನು ಹೊಂದಿದ್ದು, ಅರ್ಜಿಯನ್ನು ಉತ್ತಮಗೊಳಿಸುವ ಕನಿಷ್ಠ ಪ್ರಯತ್ನವೂ ಕಂಡುಬಂದಿಲ್ಲವೆಂದು ಬರೆದುಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅರ್ಜಿಗಳ ಸಂಖ್ಯೆ ಹೆಚ್ಚಾಗಿದೆ, ಆದರೆ ಗುಣಮಟ್ಟದ ಅಭ್ಯರ್ಥಿಗಳು ಕಡಿಮೆಯಾಗುತ್ತಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ೩೫ ಅಭ್ಯರ್ಥಿಗಳನ್ನು ಶಾರ್ಟ್ಲಿಸ್ಟ್ ಮಾಡಿದ ಬಳಿಕ ನಡೆದ ಮೊದಲ ಹಂತದ ಮೌಲ್ಯಮಾಪನದಲ್ಲಿ ಬಹುತೇಕರು ಕಾಪಿ-ಪೇಸ್ಟ್ ಅಥವಾ AI...
KGF ನಂತಹ ಅದ್ಭುತ ಸ್ಕ್ರಿಪ್ಟ್ಗಾಗಿ ಕಾಯುತ್ತಿದ್ದೇನೆ: ಕೊರಿಯನ್ ಸ್ಟಾರ್
ಇತ್ತೀಚೆಗೆ ಭಾರತೀಯ ಚಿತ್ರರಂಗವನ್ನು ಉದ್ದೇಶಿಸಿ ಮಾತನಾಡಿದ ಕೊರಿಯನ್ ಸ್ಟಾರ್ ನಟ ವೈ ಹಾ ಜೂನ್, ಯಶ್ ಮತ್ತು ಕೆಜಿಎಫ್ ಗುಣಗಾನ ಮಾಡಿದ್ದಾರೆ. ‘ಅಣ್ತಮ್ಮಾ, ಇಲ್ಲಿ ಯಾರೂ ಹೀರೋಗಳನ್ನು ಹುಟ್ಟಾಕಲ್ಲ, ನಮಗೆ ನಾವೇ ಹೀರೋ ಆಗಬೇಕು’ ಅಂತಾ ರಾಜಾಹುಲಿ ಸಿನಿಮಾದಲ್ಲಿ ಡೈಲಾಗ್ ಹೊಡೆದಿದ್ದ ಯಶ್ ಅವರೀಗ ಕೇವಲ ಸ್ಯಾಂಡಲ್ವುಡ್ನ ರಾಕಿಂಗ್ ಸ್ಟಾರ್ ಮಾತ್ರವಲ್ಲ, ಇಂಟರ್ನ್ಯಾಷನಲ್ ಸೂಪರ್ ಸ್ಟಾರ್. ಏಕೆಂದರೆ, ಯಶ್ ಮತ್ತು ಕೆಜಿಎಫ್ ಪ್ಯಾನ್ ವರ್ಲ್ಡ್ ಲೆವೆಲ್ನಲ್ಲಿ ಸದ್ದಾದ ಹೆಸರುಗಳು. ಪ್ರೇಕ್ಷಕರು ಮಾತ್ರವಲ್ಲದೇ ಈಗಾಗಲೇ ಭಾರತೀಯ ಸಿನಿಮಾ ದಿಗ್ಗಜರಿಂದಲೂ ಪ್ರಶಂಸೆ ಸ್ವೀಕರಿಸಿರುವ ಯಶ್ ಅವರನ್ನು ಇದೀಗ ಕೊರಿಯನ್ ಸೂಪರ್ ಸ್ಟಾರ್ ಹಾಡಿ ಹೊಗಳಿದ್ದಾರೆ. ಗ್ಲೋಬಲ್ ಲೆವೆಲ್ನಲ್ಲಿ ಸದ್ದು ಮಾಡಿರುವ ವೆಬ್ ಸೀರಿಸ್ ‘ಸ್ಕ್ವಿಡ್ ಗೇಮ್’ನಲ್ಲಿನ ಪಾತ್ರಕ್ಕೆ ಹೆಸರುವಾಸಿಯಾಗಿರುವ ದಕ್ಷಿಣ ಕೊರಿಯಾದ ಜನಪ್ರಿಯ ನಟ ವೈ ಹಾ ಜೂನ್, ಯಶ್ ಅವರ ಬ್ಲಾಕ್ಬಸ್ಟರ್ ಚಿತ್ರ ಕೆಜಿಎಫ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಚಿತ್ರದ ಹೈ ಆ್ಯಕ್ಟೇನ್ ಆ್ಯಕ್ಷನ್ ಮತ್ತು ಸಿನಿಮೀಯ ಪ್ರಮಾಣವನ್ನು ಎತ್ತಿ ಹಿಡಿದಿದ್ದಾರೆ. ...
ಏ. ೨ರಂದು ಹನುಮ ಜನ್ಮೋತ್ಸವ
-ಗುರುರಾಜ ಮ. ದೇಶಕುಲಕರ್ಣಿ ಅಚಲ ಭಕ್ತಿ, ಶಕ್ತಿಗೆ ಹೆಸರು ಹನುಮಂತ ರಾಮನ ಮೇಲಿಟ್ಟ ಭಕ್ತಿ, ಲಂಕೆಗೆ ಏಕಾಂಗಿಯ ಹೋಗಿ ಲಂಕಾದಹನ ಮಾಡಿದ ಪರಾಕ್ರಮಿ, ಗಟ್ಟಿ ಮುಟ್ಟಾದ ದೇಹವನ್ನು ಹೊಂದಿರುವ ಆಂಜನೇಯನ ಜನ್ಮವನ್ನು ಸ್ಮರಿಸಲು ಆಚರಿಸಲಾಗುವ ಹಬ್ಬವೇ ಹನುಮ ಜನ್ಮೋತ್ಸವ. ಹನುಮಂತನ ಜನನ: ಒಂದು ದಿನ ಪಾರ್ವತಿ, ಪರಮೇಶ್ವರರು ಕೈಲಾಸ ಪರ್ವತದಲ್ಲಿದ್ದಾಗ ಒಂದು ವಾನರಯುಗ್ಮವನ್ನು ಕಂಡರು. ಪಾರ್ವತಿ ಶಿವನೊಂದಿಗೆ ಕಲೆತು ಗರ್ಭವನ್ನು ಧರಿಸಿ ಅದನ್ನು ತಾಳಲಾರದೇ ಶಿವನಲ್ಲಿ ಮನವಿ ಮಾಡಿದಾಗ ಶಿವ ಆ ಗರ್ಭವನ್ನು ಪಾರ್ವತಿಯ ನಾಭಿಯಿಂದ ಹೊರಬೀಳುವಂತೆ ಮಾಡಿದ. ಭೂದೇವಿ ಅದನ್ನು ಧರಿಸಲಾರದೇ ಕಂಗೆಟ್ಟಳು. ಅದೇ ಸಮಯದಲ್ಲಿ ಗೌತಮನ ಪುತ್ರಿ, ಕೇಸರಿಯ ಪತಿ ಆಂಜನೆ ಪುತ್ರಕಾಂಕ್ಷೆಯಿAದ ತೀವ್ರವಾದ ಜಪ, ತಪ ಕೈಗೊಂಡಿದ್ದಳು. ಆಗ ವಾಯುದೇವ ಆಕೆಯ ರೂಪಕ್ಕೆ ಮರುಳಾಗಿ, ಆ ಗರ್ಭವನ್ನು ತೆಗೆದುಕೊಂಡು ಆಕೆಯ ಅಂಗೈಯಲ್ಲಿಟ್ಟ. ಆಕೆ ಅದನ್ನು ನುಂಗಿದಳು. ನವಮಾಸಗಳು ತುಂಬಿದ ಬಳಿಕ ಒಬ್ಬ ವಟು ಜನಿಸಿದ. ಜನಿಸಿದ ವಟುವೇ ಆಂಜನೇಯ. ಈ ವಟು ಸೂರ್ಯನನ್ನು ನೋಡಿ ಸೂರ್ಯನನ್ನೇ ನುಂಗಲು...
ಜಗತ್ತಿನಾದ್ಯಂತ ಬಳಕೆಯಲ್ಲಿರುವ ವಿವಿಧ ಕ್ಯಾಲೆಂಡರ್ಗಳು
ಕ್ಯಾಲೆಂಡರ್ಗಳು ಕೇವಲ ದಿನಾಂಕ ಪಟ್ಟಿಗಳಲ್ಲ; ಅವು ಧರ್ಮ, ನಂಬಿಕೆಗಳು, ಹಬ್ಬಗಳು ಮತ್ತು ಸೂರ್ಯ-ಚಂದ್ರರ ಚಲನೆಯನ್ನು ಆಧರಿಸಿದ ವಿಜ್ಞಾನದ ಪ್ರತಿಬಿಂಬಗಳಾಗಿವೆ. ಜಗತ್ತಿನ ೪೦ಕ್ಕೂ ಹೆಚ್ಚು ಕ್ಯಾಲೆಂಡರ್ಗಳಲ್ಲಿ ೧೧ ಪ್ರಮುಖವಾಗಿವೆ. ಹಿಂದೂ ಪಂಚಾoಗ, ಗ್ರೆಗೋರಿಯನ್, ಹಿಜ್ರಿ, ಚೈನೀಸ್, ಹೀಬ್ರೂ ಮತ್ತು ಬೌದ್ಧ ಕ್ಯಾಲೆಂಡರ್ಗಳು ವಿಭಿನ್ನವಾಗಿ ಕಾಲವನ್ನು ಅಳೆಯುವ ವಿಧಾನಗಳನ್ನು ಹೊಂದಿದೆ. ಕ್ಯಾಲೆಂಡರ್ಗಳು ಕೇವಲ ದಿನ, ತಿಂಗಳು ಮತ್ತು ವರ್ಷವನ್ನು ತಿಳಿಸುವ ಸಾಧನಗಳಲ್ಲ; ಅವು ಆಯಾ ಧರ್ಮದ ನಂಬಿಕೆಗಳು, ಹಬ್ಬಗಳು, ಶುಭ-ಅಶುಭ ಮುಹೂರ್ತಗಳು ಮತ್ತು ಸೂರ್ಯ-ಚಂದ್ರರ ಚಲನೆಯನ್ನು ಆಧರಿಸಿದ ವಿಜ್ಞಾನದ ಪ್ರತಿಬಿಂಬಗಳಾಗಿವೆ. ಜಗತ್ತಿನಾದ್ಯಂತ ಸುಮಾರು ೪೦ಕ್ಕೂ ಹೆಚ್ಚು ವಿಭಿನ್ನ ಕ್ಯಾಲೆಂಡರ್ಗಳು ಬಳಕೆಯಲ್ಲಿದ್ದರೂ, ಅವುಗಳಲ್ಲಿ ೧೧ ಕ್ಯಾಲೆಂಡರ್ಗಳು ಹೆಚ್ಚು ಪ್ರಸಿದ್ಧವಾಗಿವೆ. ಹಿಂದೂ ಪಂಚಾಂಗ: ಭಾರತೀಯ ಸಂಸ್ಕೃತಿಯಲ್ಲಿ ‘ಹಿಂದೂ ಪಂಚಾAಗ’ಕ್ಕೆ ಅತ್ಯಂತ ಮಹತ್ವದ ಸ್ಥಾನವಿದೆ. ಸೌರ ಮತ್ತು ಚಂದ್ರ ಚಕ್ರಗಳೆರಡನ್ನೂ ಆಧರಿಸಿದ ಈ ಪಂಚಾಂಗವು ಸಮಯವನ್ನು ಅಳೆಯುವ ಅದ್ಭುತ ಸಾಧನವಾಗಿದೆ. ಇದರಲ್ಲಿ ಒಂದು ತಿಂಗಳನ್ನು ಶುಕ್ಲ ಪಕ್ಷ ಮತ್ತು ಕೃಷ್ಣ ಪಕ್ಷ ಎಂದು ಎರಡು ಭಾಗಗಳಾಗಿ ವಿಂಗಡಿಸಲಾಗಿದ್ದು, ಒಟ್ಟು...
ಆರ್ಸಿಬಿ Team ಗೆ ವಿರಾಟ್ ವಾರ್ನಿಂಗ್
ಐಪಿಎಲ್ ೨೦೨೬ ಸೀಸನ್ ಆರಂಭಕ್ಕೂ ಮುನ್ನವೇ ಆರ್ಸಿಬಿ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ (ತಂಡದ ಆಟಗಾರರಿಗೆ ಕಠಿಣ ಎಚ್ಚರಿಕೆ ನೀಡಿದ್ದಾರೆ. ತಂಡದ ತರಬೇತಿ ಶಿಬಿರದಲ್ಲಿ ಮಾತನಾಡಿದ ಕೊಹ್ಲಿ, ಈ ಸೀಸನ್ ಇನ್ನಷ್ಟು ಕಠಿಣವಾಗಲಿದೆ ಎಂದು ತಿಳಿಸಿದ್ದಾರೆ. ಮಾರ್ಚ್ ೨೮ರಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಐಪಿಎಲ್ ೨೦೨೬ ಆರಂಭವಾಗಲಿದ್ದು, ಆರ್ಸಿಬಿ ಮೊದಲ ಪಂದ್ಯವನ್ನು ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಆಡಲಿದೆ. ಈ ಹಿನ್ನೆಲೆ ಈಗಾಗಲೇ ತಂಡ ತಯಾರಿ ಆರಂಭಿಸಿದ್ದು, ಕೊಹ್ಲಿಯ ಭರ್ಜರಿ ಬ್ಯಾಟಿಂಗ್ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ತಂಡದ ಸಹ ಆಟಗಾರರೊಂದಿಗೆ ಮಾತನಾಡಿದ ಕೊಹ್ಲಿ, ಕಳೆದ ೨-೩ ಸೀಸನ್ಗಳಲ್ಲಿ ನಾವು ತುಂಬಾ ಕಷ್ಟಪಟ್ಟಿದ್ದೇವೆ. ಕಳೆದ ವರ್ಷ ಸಾಧನೆ ಮಾಡಿದ್ದೇವೆ. ಆದರೆ ಈಗ ಇನ್ನಷ್ಟು ಕಷ್ಟವಾಗಲಿದೆ. ಇತರ ತಂಡಗಳು ನಮ್ಮ ವಿರುದ್ಧ ಇನ್ನಷ್ಟು ಆಕ್ರಮಣಕಾರಿ ಆಟ ಆಡಲಿವೆ ಎಂದು ಹೇಳಿದ್ದಾರೆ. ಒಂದು ನಿಮಿಷವೂ ವ್ಯರ್ಥ ಮಾಡಬಾರದು. ಪ್ರತಿಯೊಂದು ಸೆಷನ್ಗೂ ೧೨೦ ಪರ್ಸೆಂಟ್ ಕೊಡುಗೆ ನೀಡಬೇಕು. ಈ ಎರಡೂವರೆ ತಿಂಗಳು ನಮ್ಮ ಪಾಲಿಗೆ ಬಹಳ...
ಮೀನುಗಾರಿಕೆಗೂತಟ್ಟಿದಮಧ್ಯಪ್ರಾಚ್ಯಯುದ್ಧದಬಿಸಿ;
ಇಂಧನ ಸಂಕಷ್ಟ, ಆಳ ಸಮುದ್ರ ಮೀನುಗಾರಿಕೆಗೆ ಆತಂಕ ಕರಾವಳಿ ಆರ್ಥಕತೆ ಜೀವಾಳವೇ ಮೀನುಗಾರಿಕೆ. ಮಧ್ಯಪ್ರಾಚ್ಯದ ಯುದ್ಧದ ಬಿಸಿ ಮೀನುಗಾರಿಕೆಗೂ (fishing) ತಟ್ಟಿದೆ. ಕರಾವಳಿಯಲ್ಲಿ ಮೀನುಗಾರಿಕೆಗೆ ದೊಡ್ಡ ಸಂಕಷ್ಟ ಎದುರಾಗಿದೆ. ಡೀಸೆಲ್ ಕೊರತೆಯಿಂದಾಗಿ ಆಳ ಸಮುದ್ರ ಮೀನುಗಾರಿಕೆ ತೀವ್ರ ಆತಂಕಕ್ಕೆ ಒಳಗಾಗಿದೆ. ಪ್ರತಿದಿನ ಲಕ್ಷಾಂತರ ಲೀಟರ್ ಡೀಸೆಲ್ ಅವಲಂಬಿಸಿರುವ ಮೀನುಗಾರರು ಈಗ ಸಂಕಷ್ಟದ ಅಂಚಿನಲ್ಲಿದ್ದಾರೆ. ಕರಾವಳಿಯ ಆಳ ಸಮುದ್ರ ಮೀನುಗಾರಿಕೆ ಸಂಪೂರ್ಣವಾಗಿ ಡೀಸೆಲ್ ಪೂರೈಕೆಯನ್ನು ಅವಲಂಬಿಸಿದೆ. ಉಡುಪಿ-ಮಂಗಳೂರು ಭಾಗದಲ್ಲಿ ಪ್ರತಿದಿನ ೧೦ ರಿಂದ ೧೨ ಲಕ್ಷ ಲೀಟರ್ ಡೀಸೆಲ್ ಬಳಕೆಯಾಗುತ್ತಿದೆ. ಪ್ರತಿ ಬೋಟಿಗೆ ಸುಮಾರು ಸಾವಿರ ಲೀಟರ್ ಡೀಸೆಲ್ ಅಗತ್ಯವಿದೆ. ಆದರೆ ಇತ್ತೀಚೆಗೆ ಉಂಟಾದ ಡೀಸೆಲ್ ಕೊರತೆಯ ಸಮಸ್ಯೆ ಮೀನುಗಾರರ ಬದುಕಿನ ಮೇಲೆ ಬಿಸಿ ತಟ್ಟಲು ಆರಂಭಿಸಿದೆ. ಒಂದುವರೆ ಸಾವಿರಕ್ಕೂ ಅಧಿಕ ಬೋಟುಗಳು ಈ ಡೀಸೆಲ್ ಪೂರೈಕೆಯ ಮೇಲೆ ಅವಲಂಬಿತವಾಗಿವೆ. ಡೀಸೆಲ್ ಇಲ್ಲದೆ ಸಮುದ್ರಕ್ಕೆ ಹೋಗೋದು ಅಸಾಧ್ಯ. ಸಬ್ಸಿಡಿ ಸಿಗದಿದ್ದರೂ ಪರವಾಗಿಲ್ಲ. ನಮಗೆ ಡೀಸೆಲ್ ಬೇಕು ಡಿಸೇಲ್ ಸಿಕ್ರೆ ಸಾಕು ಅನ್ನುವ ಅಭಿಪ್ರಾಯ...
ವಿಶ್ವದಅತಿದೊಡ್ಡಐಓಉಘಟಕದುರಸ್ತಿಗೆ೫ವರ್ಷಬೇಕು!
ಇರಾನ್ ಕ್ಷಿಪಣಿ ದಾಳಿಯಿಂದ ಹಾನಿಗೆ ಒಳಗಾಗಿರುವ ಕತಾರ್ನ ರಾಸ್ ಲಫಾನ್ ಘಟಕ ದುರಸ್ತಿಯಾಗಲು ೩ ರಿಂದ ೫ ವರ್ಷ ತಗಲುವ ಸಾಧ್ಯತೆಯಿದೆ. ಕತಾರ್ನ ಉತ್ತರ ದೋಹಾದಿಂದ ೮೦ ಕಿ.ಮೀ. ದೂರದ ರಾಸ್ ಲಫಾನ್ ಕೈಗಾರಿಕಾ ನಗರದಲ್ಲಿದ್ದ ಎಲ್ಎನ್ಜಿ ಘಟಕದ ಮೇಲೆ ಇರಾನ್ ಮಾರ್ಚ್ ೧೮, ೧೯ರಂದು ೨ ದಿನ ಬ್ಯಾಕ್ ಟು ಬ್ಯಾಕ್ ಮಿಸೈಲ್ ಅಟ್ಯಾಕ್ ಮಾಡಿದೆ. ಇದರಿಂದಾಗಿ ಆ ಪ್ರದೇಶದಲ್ಲಿ ಎಲ್ಎನ್ಜಿ (LNG) ಉತ್ಪಾದನೆ ಸ್ಥಗಿತವಾಗಿದ್ದು, ಜಾಗತಿಕ ಇಂಧನ ಪೂರೈಕೆಯಲ್ಲಿ ಭಾರಿ ವ್ಯತ್ಯಯ ಆಗಿದೆ. ಎಲ್ಎನ್ಜಿ ರಫ್ತಿನಲ್ಲಿ ಶೇ.೧೭ರಷ್ಟು ಕುಸಿತವಾಗಿದೆ. ಇದು ಕತಾರ್ನಿಂದ ಎಲ್ಎನ್ಜಿ ಆಮದು ಮಾಡಿಕೊಳ್ಳುವ ಭಾರತದಂಥಹ ರಾಷ್ಟ್ರಗಳಿಗೆ ದೊಡ್ಡ ಹೊಡತವೇ ಆಗಿದ್ದು, ಆತಂಕ ಎದುರಾಗಿದೆ. ವಿಶ್ವಕ್ಕೆ ರಾಸ್ ಲಫಾನ್ ಆಘಾತ ಏನು: ದುರಸ್ತಿಗೆ ಬೇಕಿದೆ ಕನಿಷ್ಠ ೩ ರಿಂದ ೫ ವರ್ಷ ಆಗತ್ಯವಿದ್ದು ದೀರ್ಘಾವಧಿ ಎಲ್ಎನ್ಜಿ ಪೂರೈಕೆ, ಒಪ್ಪಂದದಲ್ಲಿ ಬಿಕ್ಕಟ್ಟು ಎದುರಾರಾಗಿದೆ. ವಾರ್ಷಿಕ ಆದಾಯದಲ್ಲಿ ೨೦ ಮಿಲಿಯನ್ ಡಾಲರ್ (೧.೮೭ ಲಕ್ಷ ಕೋಟಿ ರೂ.) ನಷ್ಟವಾಗಲಿದೆ ಎಂದು...
ಮಧ್ಯಪ್ರಾಚ್ಯಸಂಘರ್ಷ: ಭಾರತದಪ್ರವಾಸೋದ್ಯಮ, ವಿಮಾನಯಾನಕ್ಷೇತ್ರಕ್ಕೆಆತಂಕ
ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಇತ್ತೀಚಿನ ಯುದ್ಧ ಪರಿಸ್ಥಿತಿ ಮತ್ತು ಉದ್ವಿಗ್ನತೆ ಜಾಗತಿಕ ವಿಮಾನಯಾನ ಮತ್ತು ಪ್ರವಾಸೋದ್ಯಮ ಕ್ಷೇತ್ರದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಹಲವಾರು ದೇಶಗಳ ವಾಯುಪ್ರದೇಶಗಳಲ್ಲಿ ನಿರ್ಬಂಧಗಳು, ವಿಮಾನ ಮಾರ್ಗ ಬದಲಾವಣೆಗಳು ಹಾಗೂ ಅಚಾನಕ್ ವಿಮಾನ ರದ್ಧತಿಗಳು ಹೆಚ್ಚುತ್ತಿರುವುದರಿಂದ ಜಾಗತಿಕ ವಿಮಾನ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗಿದೆ. ಇದರ ಪರಿಣಾಮವಾಗಿ ಯುರೋಪ್, ಏಷ್ಯಾ ಮತ್ತು ಆಫ್ರಿಕಾ ನಡುವಿನ ಹಲವಾರು ವಿಮಾನ ಮಾರ್ಗಗಳಲ್ಲಿ ಪ್ರಯಾಣದ ವೆಚ್ಚವೂ ಗಣನೀಯವಾಗಿ ಏರಿಕೆಯಾಗಿದೆ. ಭಾರತದ ದೃಷ್ಟಿಯಿಂದ ಈ ಪರಿಸ್ಥಿತಿ ವಿಶೇಷವಾಗಿ ಗಂಭೀರವಾಗಿದೆ. ಭಾರತದಿಂದ ವಿಶ್ವದ ಅನೇಕ ದೇಶಗಳಿಗೆ ಹೋಗುವ ವಿಮಾನ ಸಂಚಾರವು ಬಹುಪಾಲು ಮಧ್ಯಪ್ರಾಚ್ಯದ ಪ್ರಮುಖ ಹಬ್ಗಳಾದ ದುಬೈ, ದೋಹಾ ಮತ್ತು ಅಬುಧಾಬಿ ಮೂಲಕ ಸಾಗುತ್ತದೆ. ಈ ಮಾರ್ಗಗಳಲ್ಲಿ ಉಂಟಾಗಿರುವ ವ್ಯತ್ಯಯಗಳಿಂದ ವಿಮಾನ ಸೇವೆಗಳ ವೇಳಾಪಟ್ಟಿಯಲ್ಲಿ ಬದಲಾವಣೆಗಳು ಕಂಡುಬರುತ್ತಿದ್ದು, ಪ್ರಯಾಣ ವೆಚ್ಚ ಹೆಚ್ಚಳದಿಂದ ಅನೇಕರು ತಮ್ಮ ಪ್ರಯಾಣವನ್ನು ಮುಂದೂಡಲು ಅಥವಾ ರದ್ದುಗೊಳಿಸಲು ಮುಂದಾಗುತ್ತಿದ್ದಾರೆ. ಸಾಮಾನ್ಯವಾಗಿ ಅರಬ್ ರಾಷ್ಟ್ರಗಳು ಮತ್ತು ಮಧ್ಯಪ್ರಾಚ್ಯ ದೇಶಗಳಿಂದ ಪ್ರತಿದಿನವೂ ಸುಮಾರು ೨೫ ರಿಂದ ೩೦...
ಹಾರ್ಮುಜ್ಜಲಸಂಧಿಏಕೆಮುಖ್ಯ?
ಇದರಿಂದಾಗಿ ಕೇವಲ ಹಾರ್ಮುಜ್ ಜಲಸಂಧಿಗಳು ಮಾತ್ರ ಮುಚ್ಚಿಲ್ಲ. ಈ ಪ್ರದೇಶದ ಪ್ರಮುಖ ರಸಗೊಬ್ಬರ ಉತ್ಪಾದನಾ ಘಟಕಗಳು ಉತ್ಪಾದನೆಯನ್ನು ಸ್ಥಗಿತಗೊಳಿಸಿವೆ. ವಿಶೇಷವಾಗಿ ಉತ್ತರ ದೇಶಗಳಲ್ಲಿನ ರೈತರು ತಮ್ಮ ಬೆಳೆಗಳನ್ನು ಬಿತ್ತಲು ಸಿದ್ಧರಾಗುತ್ತಿರುವ ಸಮಯದಲ್ಲಿ ಈ ಅಡಚಣೆ ಉಂಟಾಗಿದೆ. ಕತಾರ್ನಲ್ಲಿ ’ಕತಾರ್ ಎನರ್ಜಿ’ ನಡೆಸುತ್ತಿರುವ ವಿಶ್ವದ ಅತಿದೊಡ್ಡ ಏಕತಾಣ ಯೂರಿಯಾ ಸ್ಥಾವರವು ನೈಸರ್ಗಿಕ ಅನಿಲದ ಕೊರತೆಯಿಂದಾಗಿ ಉತ್ಪಾದನೆ ಸ್ಥಗಿತಗೊಳಿಸಿದೆ. ಈ ಪ್ರದೇಶದಲ್ಲಿನ ಅನೇಕ ನೈಸರ್ಗಿಕ ಅನಿಲ ಅಥವಾ ಎಲ್ಎನ್ಜಿ ಸ್ಥಾವರಗಳು ಸಹ ಹಾನಿಗೊಂಡಿದ್ದು, ಇದು ತೈಲ ಮತ್ತು ಅನಿಲ ಆರ್ಥಿಕತೆಯ ಸಂಪೂರ್ಣ ಅಡ್ಡಿಗೆ ಕಾರಣವಾಗಿದೆ. ಸಾರಜನಕ ಗೊಬ್ಬರದ ಉತ್ಪಾದನಾ ವೆಚ್ಚ ಸುಮಾರು ಶೇ೬೦ರಿಂದ ೮೦ರಷ್ಟಿದೆ. ಇದಲ್ಲದೇ, ಮಧ್ಯಪ್ರಾಚ್ಯದ ಅನೇಕ ಭಾಗಗಳಲ್ಲಿ ಗಂಧಕದAತಹ ಪ್ರಮುಖ ನಿರ್ಣಾಯಕ ಖನಿಕ ಪೂರೈಕೆಗಳು ಕಡಿತಗೊಂಡಿವೆ. ಇದು ಜಾಗತಿಕ ಗಂಧಕದ ವ್ಯಾಪಾರದ ಸರಿಸುಮಾರು ಶೇ೪೫ರಷ್ಟು ಪರಿಣಾಮ ಬೀರುತ್ತದೆ. ಜಾಗತಿಕವಾಗಿ ಫಾಸ್ಫೇಟ್ ಉತ್ಪಾದನೆಗೂ ಸಹ ತೊಂದರೆಯಾಗಬಹುದು. ಇದರ ಉತ್ಪಾದನೆ ಹೊರತಾಗಿ, ಜಾಗತಿಕ ಹಡಗು ಮಾರ್ಗಗಳ ಮೇಲೆ ಪರಿಣಾಮ ಬೀರಿದೆ. ಅನೇಕ ಹಡಗುಗಳು ತಮ್ಮ...
ಭಾರತೀಯಷೇರುಮಾರುಕಟ್ಟೆಗಳಲ್ಲಿತಲ್ಲಣ
ಭಾರತೀಯ ಷೇರುಪೇಟೆಯಲ್ಲಿ ಇಂದು ತೀವ್ರ ಕುಸಿತ ಕಂಡುಬAದಿದೆ. ಸೆನ್ಸೆಕ್ಸ್ ೧,೭೦೦ ಪಾಯಿಂಟ್ ಹಾಗೂ ನಿಫ್ಟಿ ಫಿಫ್ಟಿ ೪೧೨ ಪಾಯಿಂಟ್ಗಳ ಕುಸಿತ ಅನುಭವಿಸಿವೆ. ಎರಡು ದಿನಗಳ ರಜೆ ನಂತರ ಸೋಮವಾರ ಮಾರುಕಟ್ಟೆ ಓಪನ್ ಆಯಿತು. ಮಾರುಕಟ್ಟೆ ತೆರೆಯಲು ಬ್ಲಡ್ ಬಾತ್ ಮುಂದುವರಿದಿದೆ. ಸೆನ್ಸೆಕ್ಸ್ ೧,೭೮೬.೮೭ ಪಾಯಿಂಟ್ ಅಥವಾ ೨.೪೭% ಕುಸಿದು ೭೨,೭೨೨.೭೩ಕ್ಕೆ ತಲುಪಿದೆ. ನಿಫ್ಟಿ ೫೮೦.೫೫ ಪಾಯಿಂಟ್ಗಳು ಅಥವಾ ೨.೫೧% ಕುಸಿದು ೨೨,೫೩೦.೫೫ ಕ್ಕೆ ತಲುಪಿದೆ. ಆರಂಭಿಕ ವಹಿವಾಟಿನಲ್ಲಿ ಯುಎಸ್ಡಿ ಡಾಲರ್ ವಿರುದ್ಧ ರೂಪಾಯಿ ಮೌಲ್ಯ ೩೩ ಪೈಸೆ ಕುಸಿದು ೯೩.೮೬ ಕ್ಕೆ ತಲುಪಿ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಹೋಗಿದೆ. ರೂಪಾಯಿ ಮೌಲ್ಯ ಕುಸಿಯುತ್ತಿರುವ ಹಿನ್ನೆಲೆ ಮಾರುಕಟ್ಟೆಯಿಂದ ವಿದೇಶಿ ಹೂಡಿಕೆದಾರರು ನಿರ್ಗಮಿಸುತ್ತಿದ್ದಾರೆ. ಇತ್ತ ಯುದ್ಧದ ಭೀತಿ, ಕಚ್ಚಾತೈಲ, ಗ್ಯಾಸ್ ಕೊರತೆ ಹಿನ್ನೆಲೆ ದೇಶಿಯ ಹೂಡಿಕೆದಾರರಿಗೂ ಆತಂಕ ಎದುರಾಗಿದೆ. ಪರಿಣಾಮ ಮಾರುಕಟ್ಟೆ ನಿರಂತರವಾಗಿ ಕುಸಿಯುತ್ತಿದೆ.









