ಪುತ್ರಿ ಜೊತೆ ಯುದ್ಧ ಟ್ಯಾಂಕರ್‌ನಲ್ಲಿ ಸವಾರಿ ಮಾಡಿದ ಕಿಮ್

ಪುತ್ರಿ ಜೊತೆ ಯುದ್ಧ ಟ್ಯಾಂಕರ್‌ನಲ್ಲಿ ಸವಾರಿ ಮಾಡಿದ ಕಿಮ್

ಮಧ್ಯಪ್ರಾಚ್ಯ ಯುದ್ಧದ ನಡುವೆ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ (kim jong un) ಇದೀಗ ಪುತ್ರಿ ಜೊತೆ ಯುದ್ಧ ಟ್ಯಾಂಕರ್‌ನಲ್ಲಿ ಸವಾರಿ ಮಾಡಿದ್ದಾರೆ. ಹೌದು, ಇತ್ತೀಚಿಗಷ್ಟೇ ಪುತ್ರಿ ಜೊತೆ ಕ್ರೂಸ್ ಕ್ಷಿಪಣಿ ಪರೀಕ್ಷಿಸಿ, ಶೂಟಿಂಗ್ ಮಾಡಿದ್ದರು. ಇದೀಗ ಮತ್ತೆ ಹೊಸ ಪ್ರಯತ್ನ ಮಾಡಿದ್ದಾರೆ. ಪ್ಯೊಂಗ್ಯಾಂಗ್ ನಲ್ಲಿರುವ ೬೦ನೇ ತರಬೇತಿ ನೆಲೆಗೆ ಭೇಟಿ ನೀಡಿದಾಗ ಕಿಮ್ ಮತ್ತು ಜು ಏ ಸಮರಾಭ್ಯಾಸ ವೀಕ್ಷಿಸಿ, ಒಂದೇ ತರಹದ ಉಡುಗೆ ಧರಿಸಿ, ಯುದ್ಧ ಟ್ಯಾಂಕರ್‌ನಲ್ಲಿ ಸವಾರಿ ಮಾಡಿದ್ದಾರೆ. ಈ ಕುರಿತು ಉತ್ತರ ಕೊರಿಯಾದ ಅಧಿಕೃತ ಸುದ್ದಿಸಂಸ್ಥೆ `ಕೆಸಿಎನ್‌ಎ’ ಫೋಟೋಗಳನ್ನು ಬಿಡುಗಡೆ ಮಾಡಿದೆ. `ಕೆಸಿಎನ್‌ಎ’ ಪ್ರಕಾರ, ಯುದ್ಧ ಟ್ಯಾಂಕರ್‌ಗಳು ಕ್ಷಿಪಣಿ ಮತ್ತು ಡ್ರೋನ್‌ಗಳ ವಿರುದ್ಧ ರಕ್ಷಣೆ ಮಾಡುವುದು, ಫೈರ್‌ಪವರ್ ಮತ್ತು ರಕ್ಷಣಾತ್ಮಕ ವ್ಯವಸ್ಥೆಗಳನ್ನು ಹೊಂದಿದೆ. ಟ್ಯಾಂಕರ್‌ಗಳ ಚಲನಶೀಲತೆ, ಅವುಗಳು ಅಬ್ಬರಿಸುವ ರೀತಿ ಎಲ್ಲವನ್ನು ನೋಡಿದ ಕಿಮ್ ಜಾಂಗ್ ಉನ್ ಅವರು ಸಂತೋಷ ವ್ಯಕ್ತಪಡಿಸಿದ್ದಾರೆ. ಜೊತೆಗೆ ಟ್ಯಾಂಕರ್‌ಗಳ ಅದ್ಭುತ ಪ್ರದರ್ಶನವು ನಮ್ಮ ಸೈನ್ಯದ ಶೌರ್ಯವನ್ನು ಪ್ರತಿಬಿಂಬಿಸುತ್ತಿದೆ...

ದೇಶದಾದ್ಯಂತ ೩೨ ವಿಶ್ವವಿದ್ಯಾಲಯಗಳು ನಕಲಿ: ಕರ್ನಾಟಕದಲ್ಲೂ ೨ ಫೇಕ್ ಯೂನಿವರ್ಸಿಟಿ ಪತ್ತೆ!

ದೇಶದಾದ್ಯಂತ ೩೨ ವಿಶ್ವವಿದ್ಯಾಲಯಗಳು ನಕಲಿ: ಕರ್ನಾಟಕದಲ್ಲೂ ೨ ಫೇಕ್ ಯೂನಿವರ್ಸಿಟಿ ಪತ್ತೆ!

ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ೧೨ ರಾಜ್ಯಗಳಲ್ಲಿ ಬರೋಬ್ಬರಿ ೩೨ ನಕಲಿ ವಿಶ್ವವಿದ್ಯಾಲಯಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ನಮ್ಮ ರಾಜ್ಯದಲ್ಲೂ ಎರಡು ನಕಲಿ ವಿಶ್ವವಿದ್ಯಾಲಯ ಪತ್ತೆಯಾಗಿವೆ. ಈ ನಕಲಿ ವಿಶ್ವವಿದ್ಯಾಲಯಗಳ ಪೈಕಿ ದೆಹಲಿ ೧ನೇ ಸ್ಥಾನದಲ್ಲಿದ್ದರೆ, ಉತ್ತರ ಪ್ರದೇಶ ಎರಡನೇ ಸ್ಥಾನದಲ್ಲಿದೆ. ಇಂತಹ ವಿಶ್ವವಿದ್ಯಾಲಯಗಳಲ್ಲಿ ದಾಖಲಾದ ನಂತರ ಪಡೆದ ಪದವಿಗಳು ನಿಷ್ಪ್ರಯೋಜಕವಾಗುತ್ತವೆ ಎಂದು ಯುಜಿಸಿ ಸ್ಪಷ್ಟವಾಗಿ ಎಚ್ಚರಿಸಿದೆ. ಜೊತೆಗೆ ಈ ವಿಶ್ವವಿದ್ಯಾಲಯಗಳಿಂದ ಪದವಿಗಳನ್ನು ಉದ್ಯೋಗಕ್ಕಾಗಿ ಮಾನ್ಯತೆ ನೀಡಬಾರದು ಎಂದಿದೆ. ಕೇಂದ್ರ ಸರ್ಕಾರವು ನಿರಂತರವಾಗಿ ನಕಲಿ ವಿಶ್ವವಿದ್ಯಾಲಯಗಳ ವಿರುದ್ಧ ಕ್ರಮ ಕೈಗೊಳ್ಳುತ್ತದೆ. ಇತ್ತೀಚೆಗೆ, ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ನಕಲಿ ವಿಶ್ವವಿದ್ಯಾಲಯಗಳ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಎರಡು ವರ್ಷಗಳ ಹಿಂದೆ, ಎಂಟು ರಾಜ್ಯಗಳಲ್ಲಿ ಸುಮಾರು ೨೦ ಇದ್ದವು, ಆದರೆ ಈಗ ಅವು ವಿಸ್ತರಿಸಿವೆ. ಕರ್ನಾಟಕದಲ್ಲಿ ಯಾವುದು? ನಕಲಿ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಕರ್ನಾಟಕದ ತುಮಕೂರಿನ ಸರ್ವ ಭಾರತಿ ಶಿಕ್ಷಾ ಪೀಠ, ಬೆಂಗಳೂರಿನ ಗ್ಲೋಬಲ್ ಹ್ಯೂಮನ್ ಪೀಸ್ ವಿಶ್ವವಿದ್ಯಾಲಯ ಕಂಡು ಬಂದಿದೆ. ದೆಹಲಿಯ ಆಲ್...

ಪುದೀನಾ ಸೊಂಪಾಗಿ ಬೆಳೆಯಬೇಕೇ?

ಪುದೀನಾ ಸೊಂಪಾಗಿ ಬೆಳೆಯಬೇಕೇ?

ಪುದೀನಾ ಸಾಮಾನ್ಯವಾಗಿ ಸೂರ್ಯನ ಬೆಳಕನ್ನು ಇಷ್ಟಪಡುವ ಗಿಡ. ಆದರೆ ಬೇಸಿಗೆಯ ತೀವ್ರ ಬಿಸಿಲು ಇದಕ್ಕೆ ಮಾರಕವಾಗಬಹುದು. ಸರಿಯಾದ ಗೊಬ್ಬರ, ನೀರು ಮತ್ತು ಬಿಸಿಲಿನ ನಿರ್ವಹಣೆ ಮಾಡಿದರೆ ನಿಮ್ಮ ಮನೆಯ ಪುದೀನಾ ಗಿಡವು ವರ್ಷಪೂರ್ತಿ ತಾಜಾ ಎಲೆಗಳನ್ನು ನೀಡುತ್ತದೆ. ಮೇ ಮತ್ತು ಜೂನ್ ತಿಂಗಳಲ್ಲಿ ತಾಪಮಾನ ೪೦-೪೫ ಡಿಗ್ರಿ ತಲುಪಿದಾಗ, ಪುದೀನಾ ಗಿಡವನ್ನು ದಿನವಿಡೀ ಬಿಸಿಲಿನಲ್ಲಿ ಬಿಡಬೇಡಿ. ಬೆಳಗಿನ ೩-೪ ಗಂಟೆಗಳ ಕಾಲ ಮಾತ್ರ ಹಗುರವಾದ ಬಿಸಿಲು ತಗುಲುವಂತೆ ನೋಡಿಕೊಳ್ಳಿ. ಅತಿಯಾದ ಬಿಸಿಲು ಎಲೆಗಳನ್ನು ಸುಡುತ್ತದೆ ಮತ್ತು ಅವುಗಳ ಸುವಾಸನೆಯನ್ನು ಕಡಿಮೆ ಮಾಡುತ್ತದೆ. ಪಾಟ್: ನಿಮ್ಮ ಪುದೀನಾ ಪಾಟ್‌ನಲ್ಲಿದ್ದರೆ ಬಿಸಿಲು ಹೆಚ್ಚಾದಾಗ ಅದನ್ನು ಬಾಲ್ಕನಿ ಅಥವಾ ಕಿಟಕಿಯ ಹತ್ತಿರ ತಂಪಾದ ಜಾಗಕ್ಕೆ ಶಿಫ್ಟ್ ಮಾಡಿ. ಟೆರೇಸ್ ಗಾರ್ಡನ್: ಒಂದು ವೇಳೆ ನೀವು ಟೆರೇಸ್ ಗಾರ್ಡನ್ ಮಾಡುತ್ತಿದ್ದರೆ ಗಿಡದ ಮೇಲೆ ‘ಗ್ರೀನ್ ನೆಟ್’ಹಾಕುವುದರಿಂದ ಬಿಸಿಲಿನ ತಾಪವನ್ನು ೫೦% ಕಡಿಮೆ ಮಾಡಬಹುದು. ಪುದೀನಾ ವೇಗವಾಗಿ ಬೆಳೆಯಲು ಮಣ್ಣು ಸಡಿಲವಾಗಿರಬೇಕು. ಕುಂಡದಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಿ. ಅಂತಹ...

ಕುಂಭಮೇಳ ಮೊನಾಲಿಸಾ ಕಣ್ಣೀರು

ಕುಂಭಮೇಳ ಮೊನಾಲಿಸಾ ಕಣ್ಣೀರು

ಕುಂಭಮೇಳದಲ್ಲಿ ‘ರುದ್ರಾಕ್ಷಿ ಲೇಡಿ’ ಎಂದು ವೈರಲ್ ಆಗಿದ್ದ ಮೊನಾಲಿಸಾ, ಮುಸ್ಲಿಂ ಯುವಕ ಫರ್ಮಾನ್ ಖಾನ್ ಅವರನ್ನು ವಿವಾಹವಾಗಿದ್ದು, ಇದು ‘ಲವ್ ಜಿಹಾದ್’ ಚರ್ಚೆಗೆ ಕಾರಣವಾಗಿದೆ. ಜೀವ ಬೆದರಿಕೆ ಎದುರಿಸುತ್ತಿರುವ ದಂಪತಿ ರಕ್ಷಣೆ ಕೋರಿದ್ದಾರೆ. ಕುಂಭಮೇಳದಲ್ಲಿ ರುದ್ರಾಕ್ಷಿ ಮಾರುತ್ತಾ ಕಣ್ಣುಗಳಿಂದಲೇ ವೈರಲ್ ಆಗಿ ಇಡೀ ದೇಶದಲ್ಲಿ ಹಲ್‌ಚಲ್ ಸೃಷ್ಟಿಸಿದ್ದ ಮೊನಾಲಿಸಾ  ಇದೀಗ ಮತ್ತೊಮ್ಮೆ ಸದ್ದು ಮಾಡುತ್ತಿದ್ದಾರೆ. ಮುಸ್ಲಿಂ ಯುವಕನನ್ನು ಪ್ರೀತಿಸಿ ಮದುವೆಯಾಗಿರೋ ಮೋನಿ ಬಗ್ಗೆ ಇದಾಗಲೇ ವಾದ-ಪ್ರತಿವಾದ-ವಿವಾದ ಎಲ್ಲವೂ ಶುರುವಾಗಿಬಿಟ್ಟಿದೆ. ಫರ್ಮಾನ್ ಖಾನ್ ಎನ್ನುವ ನಟನನ್ನು ಪ್ರೀತಿಸಿ ಮದುವೆಯಾಗಿರುವ ಮೊನಾಲಿಸಾದ್ದು ಲವ್ ಜಿಹಾದ್ ಎಂದು ಬಹುದೊಡ್ಡ ಚರ್ಚೆಯಾಗುತ್ತಿದೆ. ಅಷ್ಟಕ್ಕೂ ಇದಾಗಲೇ ಈ ದಂಪತಿ ಈ ಬಗ್ಗೆ ಸ್ಪಷ್ಟಪಡಿಸಿದ್ದೂ ಆಗಿದೆ. ಮೊನಾಲಿಸಾ ತಾನೇ ಖುದ್ದಾಗಿ ಲವ್ ಮಾಡಿ, ಮದುವೆಗೆ ಒತ್ತಾಯಿಸಿದ್ದು, ಇದರಲ್ಲಿ ತಮ್ಮ ಪತಿಯ ತಪ್ಪಿಲ್ಲ ಎಂದಿದ್ದಾರೆ. ಇದೀಗ ಮದುವೆಯಾದ ವಾರದಲ್ಲಿಯೇ ಜೋಡಿ ಲೈವ್‌ಗೆ ಬಂದಿದೆ. ಮೊನಾಲಿಸಾ ಜೀವ ರಕ್ಷಣೆ ಕೋರಿದ್ದಾರೆ. ನಮ್ಮನ್ನು ಕಾಪಾಡಿ. ಸಾರ್ವಜನಿಕರಿಂದ ನಮಗೆ ಜೀವ ಭಯ ಉಂಟಾಗಿದೆ. ಸೋಷಿಯಲ್ ಮೀಡಿಯಾಗಳಲ್ಲಿ,...

ಕಿಮ್ ಪರ ೯೯.೯೩% ಮತ ಬಿದ್ದರೂ ೦.೦೭% ಹೋಗಿದ್ದು ಯಾರಿಗೆ

ಕಿಮ್ ಪರ ೯೯.೯೩% ಮತ ಬಿದ್ದರೂ ೦.೦೭% ಹೋಗಿದ್ದು ಯಾರಿಗೆ

ಉತ್ತರ ಕೊರಿಯಾ ಸಂಸತ್ ಚುನಾವಣೆಯಲ್ಲಿ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅವರ ವರ್ಕರ್ಸ್ ಪಾರ್ಟಿ ಆಫ್ ಕೊರಿಯಾ ಮತ್ತು ಮಿತ್ರ ಗುಂಪುಗಳು ೯೯.೯೩% ಮತ ಪಡೆದು  ಭರ್ಜರಿ ಜಯಗಳಿಸಿದ್ದರೂ ೦.೦೭% ಮತ ಹೋಗಿದ್ದು ಯಾರಿಗೆ? –  ವಿಶ್ವಾದ್ಯಂತ ಭಾರೀ ಸದ್ದು ಮಾಡಿದ್ದ ಈ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಮಾರ್ಚ್ ೧೫ ರಂದು ೧೫ ನೇ ಸುಪ್ರೀಂ ಪೀಪಲ್ಸ್ ಅಸೆಂಬಿ ಸದಸ್ಯರನ್ನು ಆಯ್ಕೆ ಮಾಡಲು ನಡೆದ ಚುನಾವಣೆಯಲ್ಲಿ ಆಡಳಿತ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಪ್ರತಿಯೊಂದು ಸ್ಥಾನವನ್ನು ಗೆದ್ದಿದ್ದಾರೆ ಎಂದು ಸರ್ಕಾರಿ ಮಾಧ್ಯಮ ಕೊರಿಯನ್ ಸೆಂಟ್ರಲ್ ನ್ಯೂಸ್ ಏಜೆನ್ಸಿ ತಿಳಿಸಿದೆ. ನೋಂದಾಯಿತ ಮತದಾರರಲ್ಲಿ ಕೇವಲ ೦.೦೦೩೭ ಪ್ರತಿಶತದಷ್ಟು ಜನರು ವಿದೇಶದಲ್ಲಿ ಅಥವಾ ಸಮುದ್ರದಲ್ಲಿ ಕೆಲಸ ಮಾಡುತ್ತಿದ್ದರಿಂದ ಅವರಿಗೆ ಮತವನ್ನು ಚಲಾಯಿಸಲು ಸಾಧ್ಯವಾಗಲಿಲ್ಲ. ಆದರೆ ಅತ್ಯಂತ ಕಡಿಮೆ ಸಂಖ್ಯೆಯ ಸುಮಾರು ೦.೦೦೦೦೩ ಪ್ರತಿಶತದಷ್ಟು ಜನರು ಮತದಾನ ಪ್ರಕ್ರಿಯೆಯಿಂದ ದೂರವಿದ್ದರು ಎಂದು ಹೇಳಿಕೊಂಡಿದೆ. ಈ ಚುನಾವಣೆಯಲ್ಲಿ ಯಾವುದೇ ವಿರೋಧ ಪಕ್ಷದ ಅಭ್ಯರ್ಥಿಗಳು ಇರದ ಕಾರಣ ಪ್ರತಿಸ್ಪರ್ಧಿಗೆ...

`ಸರ್ಸೆ ಸೆರಗ ಸರ್ಸೆ’ ಹಿಂದಿ ಹಾಡು ವಿವಾದ– ನಟಿ ನೋರಾ ಫತೇಹಿ ವಿರುದ್ಧ ಫತ್ವಾ

`ಸರ್ಸೆ ಸೆರಗ ಸರ್ಸೆ’ ಹಿಂದಿ ಹಾಡು ವಿವಾದ– ನಟಿ ನೋರಾ ಫತೇಹಿ ವಿರುದ್ಧ ಫತ್ವಾ

ಕೆಡಿ ಸಿನಿಮಾದ ವಿವಾದಿತ `ಸರ್ಸೆ ಸೆರಗ ಸರ್ಸೆ’ ಹಾಡಿಗೆ ನೃತ್ಯ ಮಾಡಿದ್ದಕ್ಕೆ ನೋರಾ ಫತೇಹಿ ವಿರುದ್ಧ ಇಸ್ಲಾಂ ಧರ್ಮದ ಮುಖಂಡರು ಫತ್ವಾ ಹೊರಡಿಸಿದ್ದಾರೆ. ಉತ್ತರ ಪ್ರದೇಶದ ಆಲಿಗಢದ ಮುಸ್ಲಿಂ ದಾರುಲ್ ಇಫ್ತಾದಿಂದ ಮುಖಂಡರು `ಸರ್ಸೆ ಸೆರಗ ಸರ್ಸೆ’ ನೃತ್ಯ ಮಾಡಿದ್ದಕ್ಕೆ ನೋರಾ ಫತೇಹಿ ವಿರುದ್ಧ ಫತ್ವಾ ಜಾರಿ ಮಾಡಿದ್ದಾರೆ. ಈ ಹಾಡು ಆಕ್ಷೇಪಾರ್ಹವಾಗಿದ್ದು, ಇಸ್ಲಾಮಿಕ್ ಬೋಧನೆಗಳಿಗೆ ವಿರುದ್ಧವೆಂದು ಪರಿಗಣಿಸುವ ವಿಷಯಗಳನ್ನು ಹೊಂದಿದೆ. ಹೀಗಾಗಿ ಈ ಹಾಡಿಗೆ ನೃತ್ಯ ಮಾಡಿದ್ದಕ್ಕಾಗಿ ಫತ್ವಾ ಜಾರಿ ಮಾಡಿದೆ. ನಟಿ ನೋರಾ ಫತೇಹಿ ಕೆನಡಾ ಮೂಲದವರಾಗಿದ್ದು, ಕೆಲ ವರ್ಷಗಳಿಂದ ಭಾರತದಲ್ಲಿ ವಾಸಿಸುತ್ತಿದ್ದಾರೆ. ಹಿಂದಿ, ತೆಲುಗು ಹಾಗೂ ಮಲಯಾಳಂನ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇತ್ತೀಚಿಗಷ್ಟೇ ನಟಿ ಈ ಬಗ್ಗೆ ಮಾತನಾಡಿ, ಮೂರು ವರ್ಷಗಳ ಹಿಂದೆ ಈ ಹಾಡನ್ನು ಕನ್ನಡದಲ್ಲಿ ಚಿತ್ರೀಕರಿಸಿದ್ದರು. ಈ ಹಾಡನ್ನು ಹೇಗೆ ಅಳವಡಿಸಿಕೊಳ್ಳಲಾಗುತ್ತದೆ ಎಂಬುದರ ಬಗ್ಗೆ ತಿಳಿದಿರಲಿಲ್ಲ. ಈ ಹಾಡನ್ನು ವಿರೋಧಿಸಿದ್ದಕ್ಕೆ ಧನ್ಯವಾದಗಳು. ಈ ಹಾಡನ್ನು ಅನುವಾದಿಸಿದಾಗ ನನಗೆ ಏನೂ ಅನುಚಿತ ಅಥವಾ ಅಸಭ್ಯ ಗೊತ್ತಾಗಲಿಲ್ಲ....

ಉದ್ಯೋಗ ನೇಮಕಾತಿಗೂ AI ಸಂಕಷ್ಟ

ಉದ್ಯೋಗ ನೇಮಕಾತಿಗೂ AI ಸಂಕಷ್ಟ

ಇಂದಿನ ತಂತ್ರಜ್ಞಾನದ ಯುಗದಲ್ಲಿ ಉದ್ಯೋಗ ಹುಡುಕುತ್ತಿರುವವರಿಗೆ ಎಐ (AI) ಅಂದರೆ ಕೃತಕ ಬುದ್ಧಿಮತ್ತೆ ಕಂಟಕ ತರಬಹುದು ಎಂಬ ಆತಂಕದ ಜೊತೆಗೆ ಉದ್ಯೋಗಿಗಳ ಕೆಲಸವನ್ನೂ ಕಸಿದುಕೊಳ್ಳಬಹುದೆಂಬ ಭಯ ಈಗಾಗಲೇ ಸೃಷ್ಟಿಯಾಗಿದೆ. ಇದರ ಜೊತೆಗೆ ಎಐನಿಂದ ನೇಮಕಾತಿ ಪ್ರಕ್ರಿಯೆಯೂ ದಿನದಿಂದ ದಿನಕ್ಕೆ ಕಷ್ಟಕರವಾಗುತ್ತಿದೆ ಎಂಬ ಅಭಿಪ್ರಾಯಗಳು ಹರಿದಾಡಿದ್ದು, ಈ ಬಗ್ಗೆ ಬೆಂಗಳೂರು ಮೂಲದ ಟೇಕ್ ಯು ಫಾರ್ವರ್ಡ್ ಸಂಸ್ಥೆಯ ಸಂಸ್ಥಾಪಕ ರಾಜ್ ವಿಕ್ರಮಾದಿತ್ಯ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.  ಇತ್ತೀಚೆಗೆ ಯೂಸರ್ ಎಕ್ಸ್ಪೀರಿಯನ್ಸ್ ಹುದ್ದೆಗೆ ನಡೆದ ನೇಮಕಾತಿ ಪ್ರಕ್ರಿಯೆಯನ್ನು ಉದಾಹರಿಸಿ ಮಾತನಾಡಿದ ಅವರು, ಹೆಚ್ಚಿನ ಅಭ್ಯರ್ಥಿಗಳ ಅರ್ಜಿಗಳು AI ಮೂಲಕ ತಯಾರಿಸಲಾಗಿವೆ. ಅಲ್ಲದೆ ಅವುಗಳು ಕೇವಲ ತಾಂತ್ರಿಕತೆಯನ್ನು ಹೊಂದಿದ್ದು, ಅರ್ಜಿಯನ್ನು ಉತ್ತಮಗೊಳಿಸುವ ಕನಿಷ್ಠ ಪ್ರಯತ್ನವೂ ಕಂಡುಬಂದಿಲ್ಲವೆಂದು ಬರೆದುಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅರ್ಜಿಗಳ ಸಂಖ್ಯೆ ಹೆಚ್ಚಾಗಿದೆ, ಆದರೆ ಗುಣಮಟ್ಟದ ಅಭ್ಯರ್ಥಿಗಳು ಕಡಿಮೆಯಾಗುತ್ತಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.  ೩೫ ಅಭ್ಯರ್ಥಿಗಳನ್ನು ಶಾರ್ಟ್ಲಿಸ್ಟ್ ಮಾಡಿದ ಬಳಿಕ ನಡೆದ ಮೊದಲ ಹಂತದ ಮೌಲ್ಯಮಾಪನದಲ್ಲಿ ಬಹುತೇಕರು ಕಾಪಿ-ಪೇಸ್ಟ್ ಅಥವಾ AI...

KGF ನಂತಹ ಅದ್ಭುತ ಸ್ಕ್ರಿಪ್ಟ್‌ಗಾಗಿ ಕಾಯುತ್ತಿದ್ದೇನೆ: ಕೊರಿಯನ್ ಸ್ಟಾರ್

KGF ನಂತಹ ಅದ್ಭುತ ಸ್ಕ್ರಿಪ್ಟ್‌ಗಾಗಿ ಕಾಯುತ್ತಿದ್ದೇನೆ: ಕೊರಿಯನ್ ಸ್ಟಾರ್

ಇತ್ತೀಚೆಗೆ ಭಾರತೀಯ ಚಿತ್ರರಂಗವನ್ನು ಉದ್ದೇಶಿಸಿ ಮಾತನಾಡಿದ ಕೊರಿಯನ್ ಸ್ಟಾರ್ ನಟ ವೈ ಹಾ ಜೂನ್, ಯಶ್ ಮತ್ತು ಕೆಜಿಎಫ್ ಗುಣಗಾನ ಮಾಡಿದ್ದಾರೆ. ‘ಅಣ್ತಮ್ಮಾ, ಇಲ್ಲಿ ಯಾರೂ ಹೀರೋಗಳನ್ನು ಹುಟ್ಟಾಕಲ್ಲ, ನಮಗೆ ನಾವೇ ಹೀರೋ ಆಗಬೇಕು’ ಅಂತಾ ರಾಜಾಹುಲಿ ಸಿನಿಮಾದಲ್ಲಿ ಡೈಲಾಗ್ ಹೊಡೆದಿದ್ದ ಯಶ್ ಅವರೀಗ ಕೇವಲ ಸ್ಯಾಂಡಲ್‌ವುಡ್‌ನ ರಾಕಿಂಗ್ ಸ್ಟಾರ್ ಮಾತ್ರವಲ್ಲ, ಇಂಟರ್‌ನ್ಯಾಷನಲ್ ಸೂಪರ್ ಸ್ಟಾರ್. ಏಕೆಂದರೆ, ಯಶ್ ಮತ್ತು ಕೆಜಿಎಫ್ ಪ್ಯಾನ್ ವರ್ಲ್ಡ್ ಲೆವೆಲ್‌ನಲ್ಲಿ ಸದ್ದಾದ ಹೆಸರುಗಳು. ಪ್ರೇಕ್ಷಕರು ಮಾತ್ರವಲ್ಲದೇ ಈಗಾಗಲೇ ಭಾರತೀಯ ಸಿನಿಮಾ ದಿಗ್ಗಜರಿಂದಲೂ ಪ್ರಶಂಸೆ ಸ್ವೀಕರಿಸಿರುವ ಯಶ್ ಅವರನ್ನು ಇದೀಗ ಕೊರಿಯನ್ ಸೂಪರ್ ಸ್ಟಾರ್ ಹಾಡಿ ಹೊಗಳಿದ್ದಾರೆ. ಗ್ಲೋಬಲ್ ಲೆವೆಲ್‌ನಲ್ಲಿ ಸದ್ದು ಮಾಡಿರುವ ವೆಬ್ ಸೀರಿಸ್ ‘ಸ್ಕ್ವಿಡ್ ಗೇಮ್’ನಲ್ಲಿನ ಪಾತ್ರಕ್ಕೆ ಹೆಸರುವಾಸಿಯಾಗಿರುವ ದಕ್ಷಿಣ ಕೊರಿಯಾದ ಜನಪ್ರಿಯ ನಟ ವೈ ಹಾ ಜೂನ್, ಯಶ್ ಅವರ ಬ್ಲಾಕ್‌ಬಸ್ಟರ್ ಚಿತ್ರ ಕೆಜಿಎಫ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಚಿತ್ರದ ಹೈ ಆ್ಯಕ್ಟೇನ್ ಆ್ಯಕ್ಷನ್ ಮತ್ತು ಸಿನಿಮೀಯ ಪ್ರಮಾಣವನ್ನು ಎತ್ತಿ ಹಿಡಿದಿದ್ದಾರೆ.  ...

ಏ. ೨ರಂದು ಹನುಮ ಜನ್ಮೋತ್ಸವ

ಏ. ೨ರಂದು ಹನುಮ ಜನ್ಮೋತ್ಸವ

-ಗುರುರಾಜ ಮ. ದೇಶಕುಲಕರ್ಣಿ ಅಚಲ ಭಕ್ತಿ, ಶಕ್ತಿಗೆ ಹೆಸರು ಹನುಮಂತ ರಾಮನ ಮೇಲಿಟ್ಟ ಭಕ್ತಿ, ಲಂಕೆಗೆ ಏಕಾಂಗಿಯ ಹೋಗಿ ಲಂಕಾದಹನ ಮಾಡಿದ ಪರಾಕ್ರಮಿ, ಗಟ್ಟಿ ಮುಟ್ಟಾದ ದೇಹವನ್ನು ಹೊಂದಿರುವ ಆಂಜನೇಯನ ಜನ್ಮವನ್ನು ಸ್ಮರಿಸಲು ಆಚರಿಸಲಾಗುವ ಹಬ್ಬವೇ ಹನುಮ ಜನ್ಮೋತ್ಸವ. ಹನುಮಂತನ ಜನನ: ಒಂದು ದಿನ ಪಾರ್ವತಿ, ಪರಮೇಶ್ವರರು ಕೈಲಾಸ ಪರ್ವತದಲ್ಲಿದ್ದಾಗ ಒಂದು ವಾನರಯುಗ್ಮವನ್ನು ಕಂಡರು. ಪಾರ್ವತಿ ಶಿವನೊಂದಿಗೆ ಕಲೆತು ಗರ್ಭವನ್ನು ಧರಿಸಿ ಅದನ್ನು ತಾಳಲಾರದೇ ಶಿವನಲ್ಲಿ ಮನವಿ ಮಾಡಿದಾಗ ಶಿವ ಆ ಗರ್ಭವನ್ನು ಪಾರ್ವತಿಯ ನಾಭಿಯಿಂದ ಹೊರಬೀಳುವಂತೆ ಮಾಡಿದ. ಭೂದೇವಿ ಅದನ್ನು ಧರಿಸಲಾರದೇ ಕಂಗೆಟ್ಟಳು. ಅದೇ ಸಮಯದಲ್ಲಿ ಗೌತಮನ ಪುತ್ರಿ, ಕೇಸರಿಯ ಪತಿ ಆಂಜನೆ ಪುತ್ರಕಾಂಕ್ಷೆಯಿAದ ತೀವ್ರವಾದ ಜಪ, ತಪ ಕೈಗೊಂಡಿದ್ದಳು. ಆಗ ವಾಯುದೇವ ಆಕೆಯ ರೂಪಕ್ಕೆ ಮರುಳಾಗಿ, ಆ ಗರ್ಭವನ್ನು ತೆಗೆದುಕೊಂಡು ಆಕೆಯ ಅಂಗೈಯಲ್ಲಿಟ್ಟ. ಆಕೆ ಅದನ್ನು ನುಂಗಿದಳು. ನವಮಾಸಗಳು ತುಂಬಿದ ಬಳಿಕ ಒಬ್ಬ ವಟು ಜನಿಸಿದ. ಜನಿಸಿದ ವಟುವೇ ಆಂಜನೇಯ. ಈ ವಟು ಸೂರ್ಯನನ್ನು ನೋಡಿ ಸೂರ್ಯನನ್ನೇ ನುಂಗಲು...

ಜಗತ್ತಿನಾದ್ಯಂತ ಬಳಕೆಯಲ್ಲಿರುವ ವಿವಿಧ ಕ್ಯಾಲೆಂಡರ್‌ಗಳು

ಜಗತ್ತಿನಾದ್ಯಂತ ಬಳಕೆಯಲ್ಲಿರುವ ವಿವಿಧ ಕ್ಯಾಲೆಂಡರ್‌ಗಳು

ಕ್ಯಾಲೆಂಡರ್‌ಗಳು ಕೇವಲ ದಿನಾಂಕ ಪಟ್ಟಿಗಳಲ್ಲ; ಅವು ಧರ್ಮ, ನಂಬಿಕೆಗಳು, ಹಬ್ಬಗಳು ಮತ್ತು ಸೂರ್ಯ-ಚಂದ್ರರ ಚಲನೆಯನ್ನು ಆಧರಿಸಿದ ವಿಜ್ಞಾನದ ಪ್ರತಿಬಿಂಬಗಳಾಗಿವೆ. ಜಗತ್ತಿನ ೪೦ಕ್ಕೂ ಹೆಚ್ಚು ಕ್ಯಾಲೆಂಡರ್‌ಗಳಲ್ಲಿ ೧೧ ಪ್ರಮುಖವಾಗಿವೆ. ಹಿಂದೂ ಪಂಚಾoಗ, ಗ್ರೆಗೋರಿಯನ್, ಹಿಜ್ರಿ, ಚೈನೀಸ್, ಹೀಬ್ರೂ ಮತ್ತು ಬೌದ್ಧ ಕ್ಯಾಲೆಂಡರ್‌ಗಳು ವಿಭಿನ್ನವಾಗಿ ಕಾಲವನ್ನು ಅಳೆಯುವ ವಿಧಾನಗಳನ್ನು ಹೊಂದಿದೆ. ಕ್ಯಾಲೆಂಡರ್‌ಗಳು ಕೇವಲ ದಿನ, ತಿಂಗಳು ಮತ್ತು ವರ್ಷವನ್ನು ತಿಳಿಸುವ ಸಾಧನಗಳಲ್ಲ; ಅವು ಆಯಾ ಧರ್ಮದ ನಂಬಿಕೆಗಳು, ಹಬ್ಬಗಳು, ಶುಭ-ಅಶುಭ ಮುಹೂರ್ತಗಳು ಮತ್ತು ಸೂರ್ಯ-ಚಂದ್ರರ ಚಲನೆಯನ್ನು ಆಧರಿಸಿದ ವಿಜ್ಞಾನದ ಪ್ರತಿಬಿಂಬಗಳಾಗಿವೆ. ಜಗತ್ತಿನಾದ್ಯಂತ ಸುಮಾರು ೪೦ಕ್ಕೂ ಹೆಚ್ಚು ವಿಭಿನ್ನ ಕ್ಯಾಲೆಂಡರ್‌ಗಳು ಬಳಕೆಯಲ್ಲಿದ್ದರೂ, ಅವುಗಳಲ್ಲಿ ೧೧ ಕ್ಯಾಲೆಂಡರ್‌ಗಳು ಹೆಚ್ಚು ಪ್ರಸಿದ್ಧವಾಗಿವೆ. ಹಿಂದೂ ಪಂಚಾಂಗ: ಭಾರತೀಯ ಸಂಸ್ಕೃತಿಯಲ್ಲಿ ‘ಹಿಂದೂ ಪಂಚಾAಗ’ಕ್ಕೆ ಅತ್ಯಂತ ಮಹತ್ವದ ಸ್ಥಾನವಿದೆ. ಸೌರ ಮತ್ತು ಚಂದ್ರ ಚಕ್ರಗಳೆರಡನ್ನೂ ಆಧರಿಸಿದ ಈ ಪಂಚಾಂಗವು ಸಮಯವನ್ನು ಅಳೆಯುವ ಅದ್ಭುತ ಸಾಧನವಾಗಿದೆ. ಇದರಲ್ಲಿ ಒಂದು ತಿಂಗಳನ್ನು ಶುಕ್ಲ ಪಕ್ಷ ಮತ್ತು ಕೃಷ್ಣ ಪಕ್ಷ ಎಂದು ಎರಡು ಭಾಗಗಳಾಗಿ ವಿಂಗಡಿಸಲಾಗಿದ್ದು, ಒಟ್ಟು...