ಚಿಕಿತ್ಸೆ -ಆರೋಗ್ಯ – ಏನಿದು? ಕಪ್ಪಿಂಗ್ ಥೆರಪಿ

ಚಿಕಿತ್ಸೆ -ಆರೋಗ್ಯ – ಏನಿದು? ಕಪ್ಪಿಂಗ್ ಥೆರಪಿ

ಕಪ್ಪಿಂಗ್ ಥೆರಪಿಯು ಕುತ್ತಿಗೆ ನೋವು, ಬೆನ್ನು ನೋವು ಹಾಗೂ ಭುಜದ ಒತ್ತಡವನ್ನು ಸುಲಭವಾಗಿ ನಿವಾರಿಸಲು ಸಾಧ್ಯವಾಗುತ್ತದೆ. ಎಲ್ಲರೂ ಈ  ಚಿಕಿತ್ಸೆಯನ್ನು ಮಾಡಿಸಬಾರದು. ಅನೇಕ ಜನರು ಇತ್ತೀಚಿನ ದಿನಗಳಲ್ಲಿ ದೇಹದ ನೋವು ಹಾಗೂ ಸ್ನಾಯು ಸೆಳೆತವನ್ನು ನಿವಾರಿಸಲು ಕಪ್ಪಿಂಗ್ ಥೆರಪಿ ಚಿಕಿತ್ಸೆಯನ್ನು ಬಯಸುತ್ತಾರೆ. ಇದು ಆಧುನಿಕ ಚಿಕಿತ್ಸೆಯಲ್ಲ, ಪ್ರಾಚೀನ ಈಜಿಪ್ಟ್ ಮತ್ತು ಚೀನಾದಲ್ಲಿ ಸಾವಿರಾರು ವರ್ಷಗಳಿಂದ ಬಳಸಲಾಗುತ್ತಿರುವ ಪ್ರಾಚೀನ ಥೆರಪಿಯಾಗಿದೆ. ಅತಿಯಾದ ಪರಿಶ್ರಮ ಇಲ್ಲವೇ ದೀರ್ಘಕಾಲ ಕುಳಿತುಕೊಳ್ಳುವುದರಿಂದ ಉಂಟಾಗುವ ಬೆನ್ನು ಮತ್ತು ಕುತ್ತಿಗೆ ನೋವಿಗೆ ಚಿಕಿತ್ಸೆ ನೀಡಲು ಇದನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ. ಈ ಚಿಕಿತ್ಸೆಯ ಆಧಾರವೆಂದರೆ ಚರ್ಮಕ್ಕೆ ವಿಶೇಷ ಕಪ್‌ಗಳನ್ನು ಅನ್ವಯಿಸುವುದು, ಇದು ಒಂದು ರೀತಿಯ ಒತ್ತಡವನ್ನು (ಹೀರುವಿಕೆ) ಸೃಷ್ಟಿಸುತ್ತದೆ. ಥೆರಪಿಯು ಸ್ನಾಯುಗಳ ಒತ್ತಡವನ್ನು ಕಡಿಮೆ ಮಾಡಲು ಹಾಗೂ ರಕ್ತ ಪರಿಚಲನೆ ಸುಧಾರಿಸಲು ಸಹಾಯವಾಗುತ್ತದೆ. ನೋವು ಹಾಗೂ ಆಯಾಸ ನಿವಾರಿಸಲು ಇಂದು ಅನೇಕ ಜನರು ಈ ಥೆರಪಿ ವಿಧಾನವನ್ನು ಬಳಸುತ್ತಾರೆ. ಈ ವಿಧಾನದಿಂದ ಯಾರಿಗೆ ಹೆಚ್ಚು ಪ್ರಯೋಜನ ಲಭಿಸುತ್ತದೆ ಹಾಗೂ ಯಾರಿಗೆ ಹಾನಿಯಾಗುತ್ತದೆ...

ತಿರುಪತಿ: ತುಪ್ಪ ಕ್ವಾಲಿಟಿ ಪರೀಕ್ಷೆಗೆ ಇ-ಟಂಗ್, ಇ-ನೋಸ್ ಲ್ಯಾಬ್ ಬಳಕೆ

ತಿರುಪತಿ: ತುಪ್ಪ ಕ್ವಾಲಿಟಿ ಪರೀಕ್ಷೆಗೆ ಇ-ಟಂಗ್, ಇ-ನೋಸ್ ಲ್ಯಾಬ್ ಬಳಕೆ

ತಿರುಮಲ ತಿರುಪತಿ ದೇವಸ್ಥಾನದಲ್ಲಿ ಪ್ರಸಾದವಾಗಿ ನೀಡಲಾಗುವ ಶ್ರೀವಾರಿ ಲಡ್ಡು ತಯಾರಿಕೆಗೆ ಬಳಸುವ ತುಪ್ಪದ ಗುಣಮಟ್ಟದ ವಿಷಯದಲ್ಲಿ ವಿವಾದಗಳಿರುವ ಹೊತ್ತಿನಲ್ಲಿ, ಅದರ ಪರೀಕ್ಷೆಗೆಂದು ‘ಇ-ಟಂಗ್ ಮತ್ತು ಇ-ನೋಸ್’ ಎಂಬ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಪ್ರಯೋಗಾಲಯವನ್ನು ಸ್ಥಾಪಿಸುವುದಾಗಿ ಟಿಟಿಡಿ ಘೋಷಿಸಿದೆ. ತಿರುಮಲ ತಿರುಪತಿ ದೇವಸ್ಥಾನದಲ್ಲಿ ಪ್ರಸಾದವಾಗಿ ನೀಡಲಾಗುವ ಶ್ರೀವಾರಿ ಲಡ್ಡು ತಯಾರಿಕೆಗೆ ಬಳಸುವ ತುಪ್ಪದ ಗುಣಮಟ್ಟದ ವಿಷಯದಲ್ಲಿ ವಿವಾದಗಳಿರುವ ಹೊತ್ತಿನಲ್ಲಿ, ಅದರ ಪರೀಕ್ಷೆಗೆಂದು ‘ಇ-ಟಂಗ್ ಮತ್ತು ಇ-ನೋಸ್’ ಎಂಬ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಪ್ರಯೋಗಾಲಯವನ್ನು ಸ್ಥಾಪಿಸುವುದಾಗಿ ಟಿಟಿಡಿ ಘೋಷಿಸಿದೆ. ಪತ್ರಿಕಾಪ್ರಕಟಣೆ ಮೂಲಕ ಆಂಧ್ರ ಆರೋಗ್ಯ ಸಚಿವ ಸತ್ಯಕುಮಾರ್ ಯಾದವ್ ಮಾಹಿತಿ ನೀಡಿದ್ದು, ‘ಫ್ರಾನ್ಸ್ನಿಂದ ತರಿಸಲಾಗುತ್ತಿರುವ ಇ-ಟಂಗ್ ವ್ಯವಸ್ಥೆಯು ತುಪ್ಪದ ರುಚಿ ನೋಡಿ ಗುಣಮಟ್ಟ ಪತ್ತೆ ಮಾಡಲಿದೆ. ಅಂತೆಯೇ ಇ-ನೋಸ್‌ನಿಂದ ಘಮವನ್ನು ಆಘ್ರಾಣಿಸಿ ಕಲಬೆರಕೆಯನ್ನು ಪತ್ತೆಹಚ್ಚಲಾಗುವುದು. ಈ ಎಲೆಕ್ಟ್ರಾನಿಕ್ ಉಪಕರಣಗಳಿಂದ, ತುಪ್ಪದ ಗುಣಮಟ್ಟದಲ್ಲಿ ಸಣ್ಣ ಕೊರತೆಯಾದರೂ ತಿಳಿಯುತ್ತದೆ’ ಎಂದಿದ್ದಾರೆ. ೨೫ ಕೋಟಿ ರು. ವೆಚ್ಚದಲ್ಲಿ ಸ್ಥಾಪನೆಯಾಗಲಿರುವ ಈ ಲ್ಯಾಬ್ ಮುಂದಿನ ತಿಂಗಳಿಂದ ಕಾರ್ಯಾಚರಿಸಲಿದ್ದು, ತುಪ್ಪ, ಒಣಹಣ್ಣು ಸೇರಿ ಪ್ರಸಾದಕ್ಕೆ...

ಸಂಶೋಧನೆ

ಸಂಶೋಧನೆ

ಗಗನಯಾನಕ್ಕೆ ಮೈಲಿಗಲ್ಲು: DRDO Parachute ಯಶಸ್ವಿ ಪರೀಕ್ಷೆ ಭಾರತದ ಬಾಹ್ಯಾಕಾಶ ಕನಸಿಗೆ ಬಲ: ಗಗನಯಾನ ಪ್ಯಾರಾಚೂಟ್ ವಿನ್ಯಾಸ ಯಶಸ್ವಿ ಪರೀಕ್ಷೆ ಭಾರತದ ಮಾನವ ಬಾಹ್ಯಾಕಾಶ ಹಾರಾಟ ಯೋಜನೆ ಗಗನಯಾನ ಮತ್ತೊಂದು ಮಹತ್ವದ ಮೈಲಿಗಲ್ಲು ಸಾಧಿಸಿದೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಚಂಡೀಗಢದಲ್ಲಿರುವ ಟರ್ಮಿನಲ್ ಬ್ಯಾಲಿಸ್ಟಿಕ್ಸ್ ರಿಸರ್ಚ್ ಲ್ಯಾಬೊರೇಟರಿ (TBRL) ಯಲ್ಲಿ ಡ್ರೋಗ್ (ಡ್ರ‍್ಯಾಗ್) ಪ್ಯಾರಾಚೂಟ್‌ಗಾಗಿ ಯಶಸ್ವಿ ಅರ್ಹತಾ ಮಟ್ಟದ ಲೋಡ್ ಪರೀಕ್ಷೆ ನಡೆಸಿದೆ. ಈ ಪರೀಕ್ಷೆಯನ್ನು TBRL ನಲ್ಲಿರುವ ರೈಲ್ ಟ್ರ‍್ಯಾಕ್ ರಾಕೆಟ್ ಸ್ಲೆಡ್ (RTRS) ಸೌಲಭ್ಯದಲ್ಲಿ ಫೆಬ್ರವರಿ ೧೮, ೨೦೨೬ ರಂದು ಯಶಸ್ವಿಯಾಗಿ ನಡೆಸಲಾಯಿತು. ಖಖಿಖS ಒಂದು ವಿಶೇಷ ಡೈನಾಮಿಕ್ ಪರೀಕ್ಷಾ ವೇದಿಕೆಯಾಗಿ, ಹೈ-ಸ್ಪೀಡ್ ವಾಯುಬಲವೈಜ್ಞಾನಿಕ ಹಾಗೂ ಬ್ಯಾಲಿಸ್ಟಿಕ್ ಮೌಲ್ಯಮಾಪನಗಳಿಗಾಗಿ ಬಳಸಲಾಗುತ್ತದೆ. ಈ ಮಹತ್ವದ ಪರೀಕ್ಷೆಯಲ್ಲಿ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರ (VSSC), ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO), ವೈಮಾನಿಕ ವಿತರಣಾ ಸಂಶೋಧನೆ ಮತ್ತು ಅಭಿವೃದ್ಧಿ ಸ್ಥಾಪನೆ (ADRDE) ಹಾಗೂ TBRL ನ ಸಮರ್ಪಿತ ವಿಜ್ಞಾನಿಗಳು ಮತ್ತು...

ಇನ್ನು ೩ ವರ್ಷದಲ್ಲಿ ಆಕಾಶದಲ್ಲೂ ಎಐ ಕೆಲಸ: ಎಲಾನ್ ಮಸ್ಕ್

ಇನ್ನು ೩ ವರ್ಷದಲ್ಲಿ ಆಕಾಶದಲ್ಲೂ ಎಐ ಕೆಲಸ: ಎಲಾನ್ ಮಸ್ಕ್

ಭೂಮಿಯಲ್ಲಿ ಸೌರಫಲಕಗಳ ಮೇಲೆ ಶೇ.೧೦೦ಕ್ಕಿಂತ ಹೆಚ್ಚು ತೆರಿಗೆ ವಿಧಿಸಲಾಗುತ್ತಿದೆ. ಇದರಿಂದ ಸೋಲಾರ್ ಪಾರ್ಕ್ ನಿರ್ಮಾಣ ದುಬಾರಿಯಾಗುತ್ತದೆ. ಇದನ್ನು ತಪ್ಪಿಸಲು ವಿಂಡ್ ಮಿಲ್‌ಗಳನ್ನು ಸ್ಥಾಪಿಸಿದರೆ, ಇವುಗಳ ಭವಿಷ್ಯವಿರುವುದು ೨೦೩೦ರ ವರೆಗೆ ಮಾತ್ರ. ಭೂಮಿಯಲ್ಲಿ ಸೌರಫಲಕಗಳ ಮೇಲೆ ಶೇ.೧೦೦ಕ್ಕಿಂತ ಹೆಚ್ಚು ತೆರಿಗೆ ವಿಧಿಸಲಾಗುತ್ತಿದೆ. ಇದರಿಂದ ಸೋಲಾರ್ ಪಾರ್ಕ್ ನಿರ್ಮಾಣ ದುಬಾರಿಯಾಗುತ್ತದೆ. ಇದನ್ನು ತಪ್ಪಿಸಲು ವಿಂಡ್ ಮಿಲ್‌ಗಳನ್ನು ಸ್ಥಾಪಿಸಿದರೆ, ಇವುಗಳ ಭವಿಷ್ಯವಿರುವುದು ೨೦೩೦ರ ವರೆಗೆ ಮಾತ್ರ. ಪ್ರಸ್ತುತ ಜಗತ್ತಿನಲ್ಲಿ ಅವುಗಳಿಗೆ ಬೇಕಾಗುವ ಬೃಹತ್ ರೆಕ್ಕೆ ಸೇರಿದಂತೆ ಇತರೆ ಭಾಗಗಳನ್ನು ತಯಾರಿಸುವ ಕೇವಲ ೩ ಕಂಪನಿಗಳಿವೆ. ಅವುಗಳಿಂದ ಒಮ್ಮೆಲೆ ಅಧಿಕ ಸಂಖ್ಯೆಯಲ್ಲಿ ವಿಂಡ್‌ಮಿಲ್ ಉತ್ಪಾದನೆ ಕಷ್ಟಸಾಧ್ಯ. ಇಂದಿನಿAದ ೩ ವರ್ಷಕ್ಕೆ ಸರಿಯಾಗಿ ಬಾಹ್ಯಾಕಾಶದಲ್ಲಿ ಕೃತಕ ಬುದ್ಧಿಮತ್ತೆ(ಎಐ) ಡೇಟಾ ಸೆಂಟರ್ ತಲೆಯೆತ್ತಲಿದೆ. ಇದು ವಿಚಿತ್ರವೆನಿಸಿದರೂ ಅತಿಶಯೋಕ್ತಿ ಅಲ್ಲ. ಏಕೆಂದು ವಿವರಿಸುತ್ತೇನೆ. ಎಐ ಅಭಿವೃದ್ಧಿಗೆ ಡೇಟಾ ಸೆಂಟರ್ ಅಗತ್ಯ. ಅದರ ಕಾರ್ಯನಿರ್ವಹಣೆಗೆ ನಿರಂತರ ವಿದ್ಯುತ್ ಪೂರೈಕೆ ಅತ್ಯಗತ್ಯ. ಇಂದು ಚೀನಾದಲ್ಲಿ ಬಿಟ್ಟರೆ ಜಗತ್ತಿನಲ್ಲಿ ಬೇರೆಲ್ಲೂ ಈ ಸೌಲಭ್ಯ ಲಭ್ಯವಿಲ್ಲ. ಹೀಗಿರುವಾಗ,...

ವಸಾಹತುಶಾಹಿ ವಿರುದ್ಧ ಕೇಂದ್ರದ ಸಮರ

ವಸಾಹತುಶಾಹಿ ವಿರುದ್ಧ ಕೇಂದ್ರದ ಸಮರ

 ಲುಟ್ಯೆನ್ಸ್ ಪ್ರತಿಮೆ ತೆಗೆದು ರಾಜಗೋಪಾಲಾಚಾರಿ ಪುತ್ಥಳಿ ಅನಾವರಣ  ಬ್ರಿಟಿಷ್ ಆಡಳಿತವು ಭಾರತದಲ್ಲಿ ಬೆಳೆಸಿರುವ ಗುಲಾಮಗಿರಿ ಸ್ಥಿತಿಯನ್ನು ನಾವು ತೊಡೆದು ಹಾಕುತ್ತೇವೆ ಎನ್ನುತ್ತಿರುವ ಮೋದಿ ಸರ್ಕಾರ (ಮೋದಿ ಸರ್ಕಾರ) ಈ ಈಗ ರಾಷ್ಟ್ರಪತಿ ಭವನದಲ್ಲಿ ಸ್ವತಂತ್ರ ಭಾರತದ ಮೊದಲ ಗವರ್ನರ್ ಸಿ. ರಾಜಗೋಪಾಲಾಚಾರಿ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದೆ. ಅಶೋಕ್ ಮಂಟಪದ ಬಳಿಯ ಗ್ರ‍್ಯಾಂಡ್ ಓಪನ್ ಮೆಟ್ಟಿಲುಗಳ ಮೇಲೆ ಇಲ್ಲಿಯವರೆಗೆ ಬ್ರಿಟಿಷ್ ವಾಸ್ತುಶಿಲ್ಪಿ ಎಡ್ವಿನ್ ಲುಟ್ಯೆನ್ಸ್ (ಎಡ್ವಿನ್ ಲುಟ್ಯೆನ್ಸ್) ಅವರ ಪ್ರತಿಮೆ ಸ್ಥಾಪಿಸಲಾಗಿದೆ. ಈಗ ಲುಟೆನ್ಸ್ ಅವರ ಪ್ರತಿಮೆಯನ್ನು ಬದಲಿಸಿ ಆ ಜಾಗದಲ್ಲಿ ಸ್ವತಂತ್ರ ಭಾರತದ ಮೊದಲ ಗವರ್ನರ್ ಸಿ. ರಾಜಗೋಪಾಲಾಚಾರಿ ಅವರ ಪ್ರತಿಮೆ ಸ್ಥಾಪಿಸಲಾಗಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಸೋಮವಾರ ರಾಷ್ಟ್ರಪತಿ ಭವನದಲ್ಲಿ(ರಾಷ್ಟ್ರಪತಿ ಭವನ) ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಚಕ್ರವರ್ತಿ ರಾಜಗೋಪಾಲಾಚಾರಿ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದರು. ವಸಾಹತುಶಾಹಿ ಆಡಳಿತವು ಭಾರತೀಯರಲ್ಲಿ ಬೆಳೆಸಿದ್ದ ಗುಲಾಮಗಿರಿ ಆಧುನಿಕ ಸ್ವಾತಂತ್ರ‍್ಯದ ನಂತರವೂ ಮುಂದುವರಿದಿದೆ. ಇದು ಬದಲಾಗಬೇಕು ಎಂದು ಹಲವು ಕಾರ್ಯಕ್ರಮಗಳಲ್ಲಿ ಮೋದಿ ಹೇಳಿದರು. ಅದರಂತೆ...

ಟ್ರಂಪ್ ಹುಚ್ಚಾಟ

ಟ್ರಂಪ್ ಹುಚ್ಚಾಟ

ಅಮೆರಿಕ ಸುಪ್ರೀಂ ಕೋರ್ಟ್​ನಲ್ಲಿ ಟ್ರಂಪ್ ಸೊಕ್ಕು ಮುರಿಯಲು ಕಾರಣರಾಗಿದ್ದು ಭಾರತೀಯ ಮೂಲದ ವಕೀಲ ನೀಲ್ ಕತ್ಯಾಲ್? ಅಮೆರಿಕ ಸುಪ್ರೀಂ ಕೋರ್ಟ್ನಲ್ಲಿ ಟ್ರಂಪ್‌ನ ಸುಂಕ ನೀತಿಗಳಿಗೆ ಭಾರೀ ಹಿನ್ನಡೆಯಾಗಲು ಭಾರತೀಯ ಮೂಲದ ವಕೀಲ ನೀಲ್ ಕತ್ಯಾಲ್ ಕಾರಣರಾಗಿದ್ದಾರೆ. ಸಣ್ಣ ಉದ್ಯಮಿಗಳ ಪರವಾಗಿ ವಾದಿಸಿದ ಕತ್ಯಾಲ್ ೬-೩ ಅನುಪಾತದಲ್ಲಿ ಮಹತ್ವದ ತೀರ್ಪು ಪ್ರಕಟವಾಗಲು ಕಾರಣರಾದರು. ಇದು ಭಾರತ ಸೇರಿದಂತೆ ಹಲವು ದೇಶಗಳಿಗೆ ಅನುಕೂಲಕರವಾಗಿದೆ. ಭಾರತವೂ ಸೇರಿದಂತೆ ವಿವಿಧ ದೇಶಗಳ ಉತ್ಪನ್ನಗಳ ಆಮದಿನ ಮೇಲೆ ಯದ್ವಾತದ್ವಾ ಸುಂಕ ವಿಧಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ಗೆ ಅಲ್ಲಿನ ಸುಪ್ರೀಂ ಕೋರ್ಟ್ ತೀರ್ಪು ಭಾರೀ ಹಿನ್ನಡೆ ಉಂಟುಮಾಡಿದೆ. ಅಮೆರಿಕ ಸುಪ್ರೀಂ ಕೋರ್ಟ್ ತೀರ್ಪಿನಿಂದ ಸದ್ಯದ ಮಟ್ಟಿಗೆ ಭಾರತಕ್ಕೂ ಪ್ರಯೋಜನವಾಗಿದೆ. ಅಂದಹಾಗೆ, ಟ್ರಂಪ್ ಸೊಕ್ಕುಮುರಿಯುವಂತಹ ತೀರ್ಪು ಬರುವುದಕ್ಕೆ ಕಾರಣರಾಗಿದ್ದು ಕೂಡ ಭಾರತೀಯ ಮೂಲದವರೇ! ಸುಪ್ರೀಂ ಕೋರ್ಟ್​​ಮಲ್ಲಿ ೬-೩ ಅನುಪಾತದಲ್ಲಿ ಪ್ರಕಟವಾದ ತೀರ್ಪು ಅಮೆರಿಕದ ಹಾಗೂ ಜಾಗತಿಕ ಮಟ್ಟದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಈ ತೀರ್ಪು ಬರುವ ನಿಟ್ಟಿನಲ್ಲಿ ಪ್ರಮುಖ ಪಾತ್ರ...

ಉಚಿತ ಯೋಜನೆಗಳು ದೇಶದ ದೀರ್ಘಕಾಲೀನ ಅಭಿವೃದ್ಧಿಗೆ ತೊಡಕು: ಸುಪ್ರೀಂ

ಉಚಿತ ಯೋಜನೆಗಳು ದೇಶದ ದೀರ್ಘಕಾಲೀನ ಅಭಿವೃದ್ಧಿಗೆ ತೊಡಕು: ಸುಪ್ರೀಂ

ರಾಜ್ಯ ಸರ್ಕಾರಗಳು ಚುನಾವಣೆಗೂ ಮುನ್ನ `ಉಚಿತ ಯೋಜನೆಗಳು’ (ಫ್ರೀಬೀಸ್) ಘೋಷಿಸುವ ಪ್ರವೃತ್ತಿಯನ್ನು ಸುಪ್ರೀಂಕೋರ್ಟ್ ತೀವ್ರವಾಗಿ ಟೀಕಿಸಿದೆ. ಇದು ದೇಶದ ದೀರ್ಘಕಾಲೀನ ಅಭಿವೃದ್ಧಿಗೆ ತೊಡಕಾಗುತ್ತಿದೆ ಎಂದು ನ್ಯಾಯಾಲಯ ಆತಂಕ ವ್ಯಕ್ತಪಡಿಸಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಪೀಠ ತಮಿಳುನಾಡು ವಿದ್ಯುತ್ ವಿತರಣಾ ಕಂಪನಿಯ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದೆ. ರಾಜ್ಯದ ಹಣವನ್ನು ವಿತರಿಸುತ್ತಾ ಹೋದರೆ ದೇಶದ ಅಭಿವೃದ್ಧಿಗೆ ತೊಡಕಾಗುತ್ತದೆ. ಚುನಾವಣೆಗೂ ಮುನ್ನ ಯಾವಾಗಲೂ ಯೋಜನೆಗಳು ಘೋಷಣೆಯಾಗುತ್ತವೆ? ಇದು ಎಷ್ಟು ಕಾಲ ಮುಂದುವರಿಯುತ್ತದೆ? ಎಂದು ಪ್ರಶ್ನಿಸಿದರು. ಬಡವರು, ಅಗತ್ಯವಿರುವವರಿಗೆ ಸಹಾಯ ಮಾಡುವುದು ಸರಿ. ಆದರೆ ಎಲ್ಲರಿಗೂ ಉಚಿತವಾಗಿ ನೀಡುವುದು ಯಾವ ನ್ಯಾಯ? ಇದು ರಾಜಕೀಯ ಒಲೈಕೆ ಮಾಡುವ ನೀತಿಯಲ್ಲವೇ? ರಾಜ್ಯಗಳು ಆದಾಯದಲ್ಲಿ ಕೊರತೆ ಇದ್ದರೂ ಇಂತಹ ವಿತರಣೆ ಮಾಡುತ್ತಿವೆ. ಹಣ ಎಲ್ಲಿಂದ ಬರುತ್ತದೆ? ರಸ್ತೆಗಳು, ಆಸ್ಪತ್ರೆಗಳು, ಶಾಲೆಗಳ ಅಭಿವೃದ್ಧಿಗೆ ಖರ್ಚು ಮಾಡಬೇಕಲ್ಲವೇ? ಎಂದ ನಗದು ವರ್ಗಾವಣೆ ಬಗ್ಗೆಯೂ ಟೀಕಿಸಿದರು. ಬೆಳಗ್ಗೆಯಿಂದ ಸಂಜೆಯವರೆಗೆ ಉಚಿತ ಆಹಾರ, ಗ್ಯಾಸ್, ವಿದ್ಯುತ್, ನಗದು ಹಣ ನೀಡಿದರೆ...

ಕೂಡಲೇ ದೇಶ ತೊರೆಯಿರಿ – ಇರಾನ್‌ನಲ್ಲಿರೋ ಭಾರತೀಯ ಪ್ರಜೆಗಳಿಗೆ ವಾರ್ನಿಂಗ್

ಕೂಡಲೇ ದೇಶ ತೊರೆಯಿರಿ – ಇರಾನ್‌ನಲ್ಲಿರೋ ಭಾರತೀಯ ಪ್ರಜೆಗಳಿಗೆ ವಾರ್ನಿಂಗ್

ಮಧ್ಯಪ್ರಾಚ್ಯದಲ್ಲಿ ಮತ್ತೆ ಉದ್ವಿಗ್ನತೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆ ಇರಾನ್‌ನಲ್ಲಿರುವ ಭಾರತೀಯರು ಕೂಡಲೇ ದೇಶ ತೊರೆಯುವಂತೆ ಭಾರತೀಯ ರಾಯಭಾರ ಕಚೇರಿ ಸೂಚಿಸಿದೆ. ಇರಾನ್‌ನಲ್ಲಿರುವ ಎಲ್ಲಾ ವಿದ್ಯಾರ್ಥಿಗಳು, ಯಾತ್ರಿಕರು, ವ್ಯಾಪಾರಸ್ಥರು ಹಾಗೂ ಪ್ರವಾಸಿಗರು, ವಾಣಿಜ್ಯ ವಿಮಾನಗಳು ಸೇರಿದಂತೆ ಲಭ್ಯವಿರುವ ಯಾವುದೇ ಸಾರಿಗೆ ವ್ಯವಸ್ಥೆ ಬಳಸಿಕೊಂಡು ಕೂಡಲೇ ದೇಶ ತೊರೆಯುವಂತೆ ಎಚ್ಚರಿಕೆ ನೀಡಿದೆ. ಇರಾನ್‌ನಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ ಗಮನದಲ್ಲಿಟ್ಟುಕೊಂಡು ಭಾರತ ಸರ್ಕಾರ ಜ.೫ ರಂದು ಹೊರಡಿಸಿದ್ದ ಸಲಹೆಯ ಮುಂದುವರಿದ ಭಾಗವಾಗಿ ಸೂಚನೆ ಹೊರಡಿಸಿದೆ. ಎಲ್ಲಾ ಭಾರತೀಯರು ಹಾಗೂ ಭಾರತೀಯ ಮೂಲದವರು ಎಚ್ಚರಿಕೆ ವಹಿಸಬೇಕು. ಪ್ರತಿಭಟನೆಗಳು ನಡೆಯುವ ಸ್ಥಳಗಳಿಂದ ದೂರವಿರಬೇಕು, ಇರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿರಬೇಕೆಂದು ಸೂಚಿಸಿದೆ. ಅಲ್ಲದೇ ಬೆಳವಣಿಗೆ ತಿಳಿಯಲು ಸ್ಥಳೀಯ ಮಾಧ್ಯಮಗಳ ಮೇಲೆ ಗಮನ ಹರಿಸಿ. ಯಾವುದೇ ಕ್ಷಣದಲ್ಲೂ ನಿಮ್ಮ ಪಾಸ್‌ಪೋರ್ಟ್, ಇತರ ಪ್ರಯಾಣ ದಾಖಲೆಗಳನ್ನ ಸಿದ್ಧವಾಗಿಟ್ಟುಕೊಳ್ಳಿ. ಒಂದು ವೇಳೆ ರಾಯಭಾರ ಕಚೇರಿಯಲ್ಲಿ ನೋಂದಾಯಿಸದವರು ಆನ್‌ಲೈನ್ ಪೋರ್ಟಲ್ ಮೂಲಕ ನೋಂದಣಿ ಮಾಡಿಕೊಳ್ಳಬೇಕು ಎಂದು ತಿಳಿಸಿದೆ. ಇನ್ನೂ ಇರಾನ್‌ನಲ್ಲಿ ಉದ್ವಿಗ್ನತೆ ಹೆಚ್ಚುತ್ತಿದ್ದಂತೆ ಕೆಲವು...

ಹೋಮದ ಭಸ್ಮದ ಮಹತ್ವ

ಹೋಮದ ಭಸ್ಮದ ಮಹತ್ವ

-ಗುರುರಾಜ ಮ. ದೇಶಕುಲಕರ್ಣಿ ಹೋಮ ತಿಲಕಧಾರಣೆಯು ಹಿಂದೂ ಸಂಪ್ರದಾಯದಲ್ಲಿ ಮಹತ್ವಪೂರ್ಣವಾಗಿದೆ. ಹೋಮದ ಭಸ್ಮದಲ್ಲಿರುವ ಗಿಡಮೂಲಿಕೆಗಳ ಔಷಧೀಯ ಗುಣಗಳು ಮನಸ್ಸಿಗೆ ಶಾಂತಿ ಮತ್ತು ಧನಾತ್ಮಕ ಶಕ್ತಿಯನ್ನು ನೀಡುತ್ತವೆ. ಸೂರ್ಯ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೇಶಿಸುವ ತನಕ, ಅಂದರೆ ಸುಮಾರು ಒಂದು ತಿಂಗಳ ಕಾಲ, ಈ ತಿಲಕವನ್ನು ಧರಿಸಬಹುದು. ಹಿಂದೂ ಧಾರ್ಮಿಕ ಆಚರಣೆಗಳಲ್ಲಿ ಹೋಮಕ್ಕೆ ವಿಶಿಷ್ಟ ಸ್ಥಾನವಿದೆ. ಇಂತಹ ಹೋಮಗಳ ನಂತರ ದೊರೆಯುವ ತಿಲಕಧಾರಣೆಯು ಅನೇಕ ಶುಭಫಲಗಳನ್ನು ತರುತ್ತದೆ. ಅನೇಕರು ಹೋಮದ ತಿಲಕವನ್ನು ಹೋಮ ನಡೆದ ದಿನ ಮಾತ್ರ ಧರಿಸುತ್ತಾರೆ. ಯಾವುದೇ ಹೋಮದ ತಿಲಕವನ್ನು ಎಷ್ಟು ದಿನಗಳವರೆಗೆ ಇಟ್ಟುಕೊಳ್ಳಬಹುದು ಎಂಬ ಪ್ರಶ್ನೆಗೆ ಉತ್ತರವಾಗಿ, ಸೂರ್ಯನು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೇಶಿಸುವ ತನಕ ಅದನ್ನು ಇಟ್ಟುಕೊಳ್ಳಬಹುದು. ಸೂರ್ಯ ಭಗವಾನರು ಇಡೀ ಭೂಮಂಡಲ ಮತ್ತು ನಭೋಮಂಡಲದ ಜಗದ ಚಕ್ಷು ಆಗಿದ್ದು, ಪಂಚಭೂತಗಳನ್ನು ನಿರ್ವಹಣೆ ಮಾಡುವ ಶಕ್ತಿ. ಆದ್ದರಿಂದ, ಸೂರ್ಯ ಒಂದು ರಾಶಿಯಲ್ಲಿ ಇರುವ ಅವಧಿಯಾದ ಒಂದು ತಿಂಗಳ ಮಟ್ಟಿಗೆ ಈ ತಿಲಕವನ್ನು ಶೇಖರಣೆ ಮಾಡಿ...

ವರ್ಣರಂಜಿತ ಧ್ವಜ ಟಿಬೇಟ್‌ನವರ ಬೈಕ್‌ಗಳಲ್ಲಿ ಹಾಕುವುದೇಕೆ?

ವರ್ಣರಂಜಿತ ಧ್ವಜ ಟಿಬೇಟ್‌ನವರ ಬೈಕ್‌ಗಳಲ್ಲಿ ಹಾಕುವುದೇಕೆ?

ಒಂದಷ್ಟು ಕಾರ್‌ಗಳ ಹಿಂಬದಿಯಲ್ಲಿ, ಬೈಕ್‌ಗಳಲ್ಲಿ ವರ್ಣರಂಜಿತ ಧ್ವಜ ಹಾಕಿರುವುದನ್ನು ನೀವು ಸಹ ಗಮನಿಸಿರುತ್ತೀರಿ ಅಲ್ವಾ. ಸಾಮಾನ್ಯವಾಗಿ ಲಾಂಗ್ ರೈಡ್ ಹೋಗುವಂತಹ ಬೈಕರ್ಸ್ ತಮ್ಮ ಬೈಕ್‌ಗಳಲ್ಲಿ ಈ ಐದು ಬಣ್ಣದ ಫ್ಲ್ಯಾಗ್ ಅನ್ನು ಹಾಕಿರುತ್ತಾರೆ. ಹೆಚ್ಚಿನವರು ಇದನ್ನು ಫ್ಯಾಶನ್‌ಗಾಗಿ, ಅಲಂಕಾರಕ್ಕಾಗಿ ಹಾಕಿರುತ್ತಾರೆ ಎಂದು ಭಾವಿಸುತ್ತಾರೆ, ಆದ್ರೆ ಹೀಗೆ ಬೈಕ್‌ಗಳಲ್ಲಿ ಈ ಫ್ಲ್ಯಾಗ್ ಹಾಕುವುದರ ಹಿಂದೆಯೂ ಒಂದು ಅರ್ಥವಿದೆ. ಇತ್ತೀಚಿನ ದಿನಗಳಲ್ಲಿ ಲಡಾಕ್‌ನಂತಹ ಹಿಲ್ ಸ್ಟೇಷನ್‌ಗಳಿ ಬೈಕ್ ರೈಡ್ ಹೋಗುವಂತಹದ್ದು ಟ್ರೆಂಡ್ ಆಗಿದೆ. ಯುವ ಜನರಂತೂ ರಜಾ ದಿನಗಳಲ್ಲಿ ಬ್ಯಾಗ್ ಪ್ಯಾಕ್ ಮಾಡಿ ಈ ರೀತಿ ರೈಡ್‌ಗಳಿಗೆ ಹೋಗುತ್ತಿರುತ್ತಾರೆ. ಹೀಗೆ ದೂರದೂರುಗಳಿಗೆ ರೈಡ್ ಹೋಗುವವರು ತಮ್ಮ ಬೈಕ್‌ಗಳಲ್ಲಿ ಐದು ಬಣ್ಣಗಳಿಂದ ಕೂಡಿದ ಟಿಬೆಟಿಯನ್ ಫ್ಲ್ಯಾಗ್ ಒಂದನ್ನು ನೇತು ಹಾಕಿರುತ್ತಾರೆ. ಬಹುಶಃ ನೀವು ಕೂಡ ಇದನ್ನು ಗಮನಿಸಿರುತ್ತೀರಿ ಅಲ್ವಾ. ಸಾಕಷ್ಟು ಮಂದಿ ಇದನ್ನು ಫ್ಯಾಶನ್ ಮತ್ತು ಅಲಂಕಾರಕ್ಕಾಗಿ ಹಾಕಿರುತ್ತಾರೆ ಎಂದು ಭಾವಿಸುತ್ತಾರೆ. ಬೌದ್ಧ ಸಂಪ್ರದಾಯದ ಸಂಕೇತ ಈ ಧ್ವಜ: ಬೈಕ್‌ಗಳಲ್ಲಿ ಹಾಕಿರುವಂತಹ ಈ ಫ್ಲ್ಯಾಗ್‌ಗಳನ್ನು ಟಿಬೆಟಿಯನ್...