ಐಪಿಎಲ್‌ನಲ್ಲಿ ಟೂರ್ನಿಯಲ್ಲಿ ಇಂದಿಗೂ ಕೊಹ್ಲಿಯೇ ಕಿಂಗ್

ಐಪಿಎಲ್‌ನಲ್ಲಿ ಟೂರ್ನಿಯಲ್ಲಿ ಇಂದಿಗೂ ಕೊಹ್ಲಿಯೇ ಕಿಂಗ್

ಮಾರ್ಚ್ ೨೮ರಿಂದ ಆರಂಭವಾಗಿರುವ ವಿಶ್ವದ ಶ್ರೀಮಂತ ಕ್ರಿಕೆಟ್ ಟೂರ್ನಿಯತ್ತ ಎಲ್ಲರ ಚಿತ್ತ ನೆಟ್ಟಿದೆ. ಟೂರ್ನಿಯಲ್ಲಿ ಮೊದಲಿನಿಂದಲೂ ಬ್ಯಾಟರ್‌ಗಳ ಅಬ್ಬರ ಜೋರಾಗಿದೆ. ಹಾಗಿದ್ದರೆ ಒಟ್ಟಾರೆ ಲೀಗ್‌ನಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಬ್ಯಾಟರ್ ಯಾರು ಗೊತ್ತೇ?. ಟಿ೨೦ ಫಾರ್ಮೆಟ್‌ಗೆ ಹೊಸ ಹೊಳಪು ನೀಡಿದ್ದು ಐಪಿಎಲ್ (IPL 2026). ಈ ಲೀಗ್ ಆರಂಭವಾದಾಗ ಇಷ್ಟು ದೊಡ್ಡದಾಗಿ ಬೆಳೆಯುತ್ತದೆ ಎಂದು ಯಾರೊಬ್ಬರೂ ಊಹಿಸಿರಲು ಸಾಧ್ಯವೇ ಇರಲಿಲ್ಲ. ಆದರೆ ಕಳೆದ ೧೯ ವರ್ಷಗಳಲ್ಲಿ ಈ ಲೀಗ್ ಬೆಳೆದು ನಿಂತ ಪರಿ ಅಮೋಘ. ಈ ಲೀಗ್‌ನಲ್ಲಿ ಬ್ಯಾಟರ್ ಅಬ್ಬರ ಜೋರಾಗಿರುತ್ತದೆ. ಬೌಲರ್‌ಗಳ ರಣ ತಂತ್ರವನ್ನು ಬುಡಮೇಲು ಮಾಡಿ ರನ್ ವೇಗಕ್ಕೆ ಚುರುಕು ಮುಟ್ಟಿಸುವ ಬ್ಯಾಟರ್‌ಗಳು, ತಮ್ಮ ಅಭಿಮಾನಿಗಳ ಮನದಲ್ಲಿ ಶಾಶ್ವತ ಸ್ಥಾನವನ್ನು ಪಡೆದಿದ್ದಾರೆ. ಇಂದಿಗೂ ಕೊಹ್ಲಿಯೇ ಕಿಂಗ್ ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಆಟಗಾರರ ಪಟ್ಟಿಯನ್ನು ಒಮ್ಮೆ ನೋಡಿದಾಗ, ಈ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿ ವಿರಾಟ್ ಕೊಹ್ಲಿ ಕಾಣಿಸಿಕೊಳ್ಳುತ್ತಾರೆ. ಇವರು ಈಗಾಗಲೇ ೧೮ ಆವೃತ್ತಿಗಳನ್ನು ಒಂದೇ ತಂಡದ...

ಬೆಂಗಳೂರು ಕರಗ ವಿಶೇಷತೆ

ಬೆಂಗಳೂರು ಕರಗ ವಿಶೇಷತೆ

ಬೆಂಗಳೂರು ಕರಗ ಉತ್ಸವ ಜನಪ್ರಿಯ ಕಾರ್ಯಕ್ರಮಗಳಲ್ಲಿ ಒಂದು. ಬೆಂಗಳೂರು ಕರಗವು ೮ ಶತಮಾನಗಳ ಇತಿಹಾಸವನ್ನ ಹೊಂದಿದೆ. ಆದಿ ಶಕ್ತಿ ಸ್ವರೂಪಿಣಿಯಾದ ದ್ರೌಪದಿ ಆರಾಧನೆಗಾಗಿ ಮೀಸಲಿಡಲಾಗಿದೆ. ಕರಗವನ್ನು ಬೆಂಗಳೂರಿನ ಗ್ರಾಮ ಉತ್ಸವ ಎಂದು ಸಹ ಕರೆಯಲಾಗುತ್ತದೆ. ಹಿಂದೂ ಮತ್ತು ಮುಸ್ಲಿಂರ ಏಕತೆಯನ್ನು ಪ್ರದರ್ಶಿಸಲು ಕರಗ ಆಚರಣೆ ಮಾಡಲಾಗುತ್ತದೆ. ಪ್ರತಿ ವರ್ಷ ಚೈತ್ರ ಶುದ್ಧ ಸಪ್ತಮಿಯ ದಿನದಿಂದ ಉತ್ಸವ ಆರಂಭವಾಗುತ್ತದೆ. ಕರಗದ ಹಿಂದಿನ ದಿನದಿಂದಲೇ ಧರ್ಮರಾಯಸ್ವಾಮಿ ದೇಗುಲದಲ್ಲಿ ಪೂಜೆ ನಡೆಯುತ್ತೆ. ಕರಗದ ಅರ್ಥ ಕರಗ ಎಂಬ ಮಾತಿಗೆ ‘ಕುಂಭ’ ಎನ್ನುವ ಅರ್ಥವೂ ಇದೆ. ಕರಗದ ಒಂದೊAದು ಅಕ್ಷರ ಒಂದೊAದು ಸಂಕೇತ ಹೊಂದಿವೆ. ಕ-ಕೈಯಿಂದ ಮುಟ್ಟದೆ, ರ-ರುಂಡದ ಮೇಲೆ ಧರಿಸಿ, ಗ-ಗತಿಸುವುದು. ಕರಗ ಪೂಜೆ ತಮಿಳುನಾಡಿನಲ್ಲಿ ಬಹು ಹಿಂದಿನಿAದಲೂ ಇದೆ. ಬೆಂಗಳೂರು ಮಾತ್ರವಲ್ಲದೆ ಅನೇಕ ಕಡೆ ಕರಗ ಆಚರಣೆ ರೂಢಿಯಲ್ಲಿದೆ.  ಮಲ್ಲಿಗೆ ಹೂವಿನ ಕರಗವನ್ನು ತಲೆ ಮೇಲೆ ಹೊತ್ತ ಪೂಜಾರಿ ನೃತ್ಯ ಮಾಡುತ್ತಾ ದೇಗುಲದಿಂದ ಹೊರ ಬರ್ತಾರೆ. ಅನೇಕ ದೇವಸ್ಥಾನಗಳಿಂದ ಕರಗ ವೇಷಧಾರಿಗಳು ಈ ದೇಗುಲಕ್ಕೆ...

ಸಂಪತ್ತು, ಆರೋಗ್ಯ, ಶಾಂತಿಗೆ ಫೆಂಗ್‌ಶುಯಿ ಬಿದಿ

ಸಂಪತ್ತು, ಆರೋಗ್ಯ, ಶಾಂತಿಗೆ ಫೆಂಗ್‌ಶುಯಿ ಬಿದಿ

ವಾಸ್ತು ಪ್ರಕಾರ ಬಿದಿರು ಗಿಡವನ್ನು ಮನೆಯಲ್ಲಿ ಇಡುವುದು ಶುಭದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇದು ಕೇವಲ ಅಲಂಕಾರಿಕ ಸಸ್ಯವಷ್ಟೇ ಅಲ್ಲ, ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಿಸಿ, ನಕಾರಾತ್ಮಕತೆಯನ್ನು ಕಡಿಮೆ ಮಾಡುತ್ತದೆ ಎಂಬ ನಂಬಿಕೆ ಇದೆ. ಬಿದಿರು ಗಿಡವು ದೌರ್ಭಾಗ್ಯವನ್ನು ದೂರ ಮಾಡಿ, ಯಶಸ್ಸು, ಕೀರ್ತಿ, ಆರೋಗ್ಯ ಮತ್ತು ಸಮೃದ್ಧಿಯನ್ನು ಆಕರ್ಷಿಸುತ್ತದೆ ಎಂದು ಹೇಳಲಾಗುತ್ತದೆ. ಜೊತೆಗೆ ಕುಟುಂಬದ ಸದಸ್ಯರ ನಡುವಿನ ಬಾಂಧವ್ಯವನ್ನು ಗಟ್ಟಿಗೊಳಿಸಿ, ಮನೆಯಲ್ಲಿ ಸಂತೋಷದ ವಾತಾವರಣವನ್ನು ನಿರ್ಮಿಸುತ್ತದೆ. ವಾಸ್ತು ಪ್ರಕಾರ ಬಿದಿರು ಗಿಡವನ್ನು ಇಡುವುದಕ್ಕೆ ಅತ್ಯುತ್ತಮ ದಿಕ್ಕು ಪೂರ್ವ ದಿಕ್ಕು. ಈ ದಿಕ್ಕು ಆರೋಗ್ಯ ಮತ್ತು ಬೆಳವಣಿಗೆಗೆ ಸಂಬಂಧಿಸಿದೆ ಎಂದು ನಂಬಲಾಗುತ್ತದೆ. ಪೂರ್ವದಲ್ಲಿ ಇಟ್ಟರೆ ಮನೆಯಲ್ಲಿ ಶಾಂತಿ, ಸಮತೋಲನ ಮತ್ತು ಆರ್ಥಿಕ ಪ್ರಗತಿ ಕಂಡುಬರುತ್ತದೆ. ಕಚೇರಿಯಲ್ಲಿ ಇಟ್ಟರೆ ನಿಮ್ಮ ವೃತ್ತಿಜೀವನದಲ್ಲಿ ಬೆಳವಣಿಗೆ ಮತ್ತು ಹೊಸ ಅವಕಾಶಗಳನ್ನು ತರುತ್ತದೆ. ೨–೩ ಅಡಿ ಎತ್ತರದ ಗಿಡಗಳನ್ನು ಇಡುವುದು ಉತ್ತಮ. ಬಿದಿರಿನ ೨ ಕಾಂಡಗಳು – ದಾಂಪತ್ಯ ಪ್ರೀತಿ ಮತ್ತು ಸಂಬಂಧ ಬಲಪಡಿಸಲು, ೩ ಕಾಂಡಗಳು –...

ಮನೆಯಲ್ಲಿ ಬಿದಿರು ಗಿಡ ಇಟ್ಟರೆ ಅದೃಷ್ಟ ಹೆಚ್ಚಳ! ಈ ವಾಸ್ತು ನಿಯಮ ಪಾಲಿಸಿದರೆಮಾತ್ರ

ಮನೆಯಲ್ಲಿ ಬಿದಿರು ಗಿಡ ಇಟ್ಟರೆ ಅದೃಷ್ಟ ಹೆಚ್ಚಳ! ಈ ವಾಸ್ತು ನಿಯಮ ಪಾಲಿಸಿದರೆಮಾತ್ರ

ವಾಸ್ತು ಪ್ರಕಾರ ಬಿದಿರು ಗಿಡವನ್ನು ಮನೆಯಲ್ಲಿ ಇಡುವುದು ಶುಭಕರ. ಇದು ನಕಾರಾತ್ಮಕ ಶಕ್ತಿಯನ್ನು ದೂರ ಮಾಡಿ, ಆರೋಗ್ಯ, ಸಂಪತ್ತು ಮತ್ತು ಸಂತೋಷವನ್ನು ಹೆಚ್ಚಿಸುತ್ತದೆ. ವಿಶೇಷವಾಗಿ ಪೂರ್ವ ದಿಕ್ಕಿನಲ್ಲಿ ಇಟ್ಟರೆ ಉತ್ತಮ ಫಲ ಸಿಗುತ್ತದೆ. ಇದರ ಸಂಪೂರ್ಣ ಮಾಹಿತಿ ಇಲ್ಲಿದೆ.

2 ನಿಮಿಷದಲ್ಲಿ ಸಿಲಿಂಡರ್ ತುಂಬುವ ಎಲ್ಪಿಜಿ ಎಟಿಎಂ!

2 ನಿಮಿಷದಲ್ಲಿ ಸಿಲಿಂಡರ್ ತುಂಬುವ ಎಲ್ಪಿಜಿ ಎಟಿಎಂ!

ಅನಿಲ ಕೊರತೆಯಿಂದಾಗಿ ಜನ ಸಿಲಿಂಡರ್ ಹಿಡಿದು ಗ್ಯಾಸ್ ಏಜೆನ್ಸಿಗಳೆದುರು ಸಾಲಲ್ಲಿ ನಿಲ್ಲುತ್ತಿರುವುದು ಸರ್ವೇಸಾಮಾನ್ಯವಾಗಿರುವ ನಡುವೆ, ಹರ್ಯಾಣದ ಗುರುಗ್ರಾಮದಲ್ಲಿ ೨-೩ ನಿಮಿಷದಲ್ಲಿ ಎಲ್‌ಪಿಜಿ ಅನಿಲ ಕೊಡುವ ಎಟಿಎಂ ಅನ್ನು ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿ.(ಬಿಪಿಸಿಎಲ್) ಸ್ಥಾಪಿಸಿದೆ. ಅನಿಲ ಕೊರತೆಯಿಂದಾಗಿ ಜನ ಸಿಲಿಂಡರ್ ಹಿಡಿದು ಗ್ಯಾಸ್ ಏಜೆನ್ಸಿಗಳೆದುರು ಸಾಲಲ್ಲಿ ನಿಲ್ಲುತ್ತಿರುವುದು ಸರ್ವೇಸಾಮಾನ್ಯವಾಗಿರುವ ನಡುವೆ, ಹರ್ಯಾಣದ ಗುರುಗ್ರಾಮದಲ್ಲಿ ೨-೩ ನಿಮಿಷದಲ್ಲಿ ಎಲ್‌ಪಿಜಿ ಅನಿಲ ಕೊಡುವ ಎಟಿಎಂ ಅನ್ನು ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿ.(ಬಿಪಿಸಿಎಲ್) ಸ್ಥಾಪಿಸಿದೆ. ಇದು ಪ್ರಾಯೋಗಿಕವಾಗಿ ಜಾರಿಯಲ್ಲಿದ್ದು, ಯಶಸ್ವಿಯಾದರೆ ದೇಶದ ಇತರ ಭಾಗಗಳಿಗೆ ವಿಸ್ತರಿಸುವ ಉದ್ದೇಶವಿದೆ. ಸೋಹ್ನಾ ಪ್ರದೇಶದಲ್ಲಿರುವ ಇದು ಇಡೀ ದಿನ ತೆರೆದಿರಲಿದೆ. ಇಲ್ಲಿ ಸಾಂಪ್ರದಾಯಿಕ ಕಬ್ಬಿಣದ ಸಿಲಿಂಡರ್‌ಗಳ ಬದಲು ಅದರ ಅರ್ಧದಷ್ಟು ತೂಕದ (೧೫ ಕಿ.ಮೀ.), ಫೈಬರ್‌ನಿಂದ ಮಾಡಲ್ಪಟ್ಟ ಕಾಂಪೊಸಿಟ್ ಸಿಲಿಂಡರ್‌ಗಳಲ್ಲಿ ಅನಿಲ ಕೊಡಲಾಗುವುದು. ಸದ್ಯ ಈ ಎಟಿಎಂನಲ್ಲಿ ೧೦ ಕೆ.ಜಿ. ಅನಿಲ ತುಂಬಿದ ೧೦ ಸಿಲಿಂಡರ್‌ಗಳು ಇವೆ. ಇವುಗಳನ್ನು ಜನರು ನೇರವಾಗಿ ಹೋಗಿ ಪಡೆಯಬಹುದು. ಎಟಿಎಂನಲ್ಲಿ ೧೦ ಸಿಲಿಂಡರ್ ಭರ್ತಿ...

ಅಮೆರಿಕದ ೨೫೦ನೇ ವರ್ಷಾಚರಣೆಗೆ ಟ್ರಂಪ್ ಚಿತ್ರವುಳ್ಳ ನಾಣ್ಯ!

ಅಮೆರಿಕದ ೨೫೦ನೇ ವರ್ಷಾಚರಣೆಗೆ ಟ್ರಂಪ್ ಚಿತ್ರವುಳ್ಳ ನಾಣ್ಯ!

ಅಮೆರಿಕ ದೇಶ ರಚನೆಯಾಗಿ ಜು.೪ಕ್ಕೆ ೨೫೦ನೇ ವರ್ಷಕ್ಕೆ ಕಾಲಿಡುತ್ತಿರುವ ಹಿನ್ನೆಲೆ ಅಲ್ಲಿನ ಸರ್ಕಾರ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭಾವಚಿತ್ರವುಳ್ಳ ಚಿನ್ನದ ನಾಣ್ಯವನ್ನು ಬಿಡುಗಡೆ ಮಾಡುವುದಕ್ಕೆ ಮುಂದಾಗಿದೆ.ಅಮೆರಿಕದ ಕಾನೂನು ಪ್ರಕಾರ ಅಧ್ಯಕ್ಷರು ಬದುಕಿರುವಾಗಲೇ ನಾಣ್ಯದಲ್ಲಿ ಅವರ ಫೋಟೋ ಬಳಸುವಂತಿಲ್ಲ. ಆದರೆ ಇದು ಸ್ಮರಣಾರ್ಥ ನಾಣ್ಯವಾಗಿರುವ ಕಾರಣ, ಚಲಾವಣೆಯಲ್ಲಿರುವ ಕರೆನ್ಸಿಗಿಂತ ಭಿನ್ನ. ಹೀಗಾಗಿ ಟ್ರಂಪ್ ಫೋಟೋ ಬಳಕೆಯಾಗಿದೆ. ೨೪ ಕ್ಯಾರೆಟ್ ಚಿನ್ನದ ನಾಣ್ಯದಲ್ಲಿ ಟ್ರಂಪ್ ಮುಷ್ಟಿ ಹಿಡಿದು ರೆಸಲ್ಯೂಟ್ ಮೇಜಿನ ಮೇಲೆ ಒರಗಿರುವುದನ್ನು ನೋಡಬಹುದು. ಅಮೆರಿಕದಲ್ಲಿ ಹಾಲಿ ಅಧ್ಯಕ್ಷರ ಫೋಟೋ ನಾಣ್ಯದ ಮೇಲೆ ಕಾಣಿಸಿಕೊಂಡಿರುವುದು ಇದು ಎರಡನೇ ಬಾರಿ. ಇದಕ್ಕೂ ಮೊದಲು ಅಮೆರಿಕದ ೩೦ನೇ ಅಧ್ಯಕ್ಷ ಕ್ಯಾಲ್ವಿನ್ ಕೂಲಿಡ್ಜ್ ಅವರ ಚಿತ್ರವು ಅಮೆರಿಕಕ್ಕೆ ಸ್ವಾತಂತ್ರ‍್ಯ ದೊರೆತ ೧೫೦ನೇ ವರ್ಷಾಚರಣೆಗಾಗಿ ೧೯೨೬ರಲ್ಲಿ ಬಿಡುಗಡೆಗೊಳಿಸಲಾಗಿತ್ತು.

ಭಾವನಾ ರಾಮಣ್ಣ ಮಗಳ ಹೆಸರು ರುಕ್ಮಿಣಿ-ತನ್ನ ಅಜ್ಜಿಯ  ಹೆಸರನ್ನೇ ಪುತ್ರಿಗಿಟ್ಟ ನಟಿ

ಭಾವನಾ ರಾಮಣ್ಣ ಮಗಳ ಹೆಸರು ರುಕ್ಮಿಣಿ-ತನ್ನ ಅಜ್ಜಿಯ ಹೆಸರನ್ನೇ ಪುತ್ರಿಗಿಟ್ಟ ನಟಿ

ಐವಿಎಫ್ ಮೂಲಕ ಕಳೆದ ಆಗಸ್ಟ್ನಲ್ಲಿ ಹೆಣ್ಣುಮಗುವಿಗೆ ಜನ್ಮನೀಡಿದ್ದ ನಟಿ ಭಾವನಾ ರಾಮಣ್ಣ ಇದೀಗ ಮಗಳಿಗೆ ನಾಮಕರಣ ಶಾಸ್ತ್ರ ಮಾಡಿದ್ದಾರೆ. ಈ ವೇಳೆ ಮಗಳಿಗೆ ತನ್ನ ಅಜ್ಜಿ ರುಕ್ಮಿಣಿ ಹೆಸರನ್ನೇ ಇಟ್ಟಿದ್ದಾರೆ. ಕುಟುಂಬಸ್ಥರು, ಸ್ನೇಹಿತರು ಹಾಗೂ ಆಪ್ತರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ವಿವಾಹವಾಗದೇ ಸಿಂಗಲ್ ಮದರ್ ಆಗಿ ಮಗಳನ್ನು ಬೆಳೆಸುವುದಾಗಿ ತಿಳಿಸಿರುವ ಭಾವನಾ ಸದ್ಯ ಮಗಳ ಪಾಲನೆಯಲ್ಲಿ ತೊಡಗಿಸಿಕೊಂಡಿದ್ದಾರೆ.

2011ರ ಗಣತಿ ಆಧರಿಸಿ ಸಂಸತ್ತಲ್ಲಿ ಶೇ.೩೩ ಮಹಿಳಾ ಮೀಸಲು?

2011ರ ಗಣತಿ ಆಧರಿಸಿ ಸಂಸತ್ತಲ್ಲಿ ಶೇ.೩೩ ಮಹಿಳಾ ಮೀಸಲು?

ಸಂಸತ್ತು ಮತ್ತು ವಿಧಾನಮಂಡಲದಲ್ಲಿ ಮಹಿಳೆಯರಿಗೆ ಶೇ.೩೩ರಷ್ಟು ರಾಜಕೀಯ ಪ್ರಾತಿನಿಧ್ಯ ಕಲ್ಪಿಸುವ ಮಹತ್ವದ ಮಹಿಳಾ ಮೀಸಲಾತಿ ವಿಧೇಯಕವನ್ನು ಆದಷ್ಟು ಶೀಘ್ರ ಜಾರಿಗೆ ತರಲು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಸಿದ್ಧತೆ ಆರಂಭಿಸಿದೆ. ಹೊಸ ಜನಗಣತಿಗಾಗಿ ಕಾಯುವ ಬದಲು ೨೦೧೧ರ ಜನಗಣತಿ ಆಧಾರದ ಮೇಲೆಯೇ ಈ ಮೀಸಲಾತಿ ಜಾರಿಗೆ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ. ಮುಂಬರುವ ಕ್ಷೇತ್ರ ಮರುವಿಂಗಡಣೆಯ ವೇಳೆ ಒಟ್ಟು ಲೋಕಸಭಾ ಸ್ಥಾನಗಳ ಸಂಖ್ಯೆ ೫೪೩ರಿಂದ ೮೧೬ಕ್ಕೆ ಏರಿಕೆಯಾಗಲಿದೆ. ಇದರಲ್ಲಿ ೨೭೩ ಸ್ಥಾನಗಳನ್ನು ಮಹಿಳೆಯರಿಗಾಗಿಯೇ ಮೀಸಲಿಡಲು ನಿರ್ಧರಿಸಲಾಗಿದೆ. ಮೂಲ ಕಾಯ್ದೆ ಪ್ರಕಾರ ಮೀಸಲಾತಿಯು ಹೊಸ ಜನಗಣತಿ ಮತ್ತು ಕ್ಷೇತ್ರ ಮರುವಿಂಗಡಣೆ ನಂತರವೇ ಅನುಷ್ಠಾನಕ್ಕೆ ಬರಬೇಕು. ಆದರೆ, ಸರ್ಕಾರವು ಇದಕ್ಕಾಗಿ ಇನ್ನೂ ಹಲವು ವರ್ಷ ಕಾಯಬೇಕು. ಅದರ ಬದಲು ಆದಷ್ಟು ಶೀಘ್ರ ಮೀಸಲಾತಿ ಕಾನೂನು ಜಾರಿಗೆ ಸರ್ಕಾರ ಚಿಂತನೆ ನಡೆಸುತ್ತಿದ್ದು, ಇದರ ಭಾಗವಾಗಿ ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ವಿಸ್ತರಿಸುವ ತಿದ್ದುಪಡಿ ವಿಧೇಯಕವೊಂದನ್ನು ಈಗಾಗಲೇ ನಡೆಯುತ್ತಿರುವ ಸಂಸತ್ತಿನ ಬಜೆಟ್ ಅಧಿವೇಶನದಲ್ಲೇ ಮಂಡಿಸಲು ಸಿದ್ಧತೆ ಆರಂಭಿಸಿದೆ ಎಂದು...

ವಿಶ್ವದ ಯಾವುದೇ ಕ್ರಿಕೆಟಿಗರಿಗೂ ಸಾಧ್ಯವಾಗದ ದಾಖಲೆ ಬರೆದ ಅಮೆಲಿಯಾಕೆರ್!!

ವಿಶ್ವದ ಯಾವುದೇ ಕ್ರಿಕೆಟಿಗರಿಗೂ ಸಾಧ್ಯವಾಗದ ದಾಖಲೆ ಬರೆದ ಅಮೆಲಿಯಾಕೆರ್!!

ನ್ಯೂಜಿಲೆಂಡ್ ಮಹಿಳಾ ತಂಡದ ನಾಯಕಿ ಅಮೆಲಿಯಾ ಕೆರ್ ಅವರು ಟಿ೨೦ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇದುವರೆಗೆ ಯಾವುದೇ ಕ್ರಿಕೆಟರ್ಗೂ ಸಾಧ್ಯವಾಗದ ದಾಖಲೆಯನ್ನು ನಿರ್ಮಿಸಿದ್ದಾರೆ. ಅಮೆಲಿಯಾ ಈಗ ಟಿ೨೦ಐ ಇತಿಹಾಸದಲ್ಲಿ ಈ ಸಾಧನೆ ಮಾಡಿದ ಒಟ್ಟಾರೆ ಮೊದಲ ಕ್ರಿಕೆಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮಾರ್ಚ್ ೨೨, ೨೦೨೬ ರಂದು ದಕ್ಷಿಣ ಆಫ್ರಿಕಾ ವಿರುದ್ಧದ ನಾಲ್ಕನೇ ಖಿ೨೦I ನಲ್ಲಿ ಅಮೆಲಿಯಾ ಕೆರ್ ಈ ಗಮನಾರ್ಹ ಸಾಧನೆಯನ್ನು ಮಾಡಿದರು. ವೆಲ್ಲಿಂಗ್ಟನ್‌ನ ಸ್ಕೈ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಅವರು ೨೯ ಎಸೆತಗಳಲ್ಲಿ ೩೧ ರನ್ ಗಳಿಸಿದರು. ಇದು ಸಾಮಾನ್ಯ ಇನ್ನಿಂಗ್ಸ್ ಆಗಿದ್ದರೂ ಅವರ ಹೆಸರನ್ನೂ ದಾಖಲೆಯ ಪುಟಕ್ಕೆ ಸೇರಿಸಿತು. ಅಮೆಲಿಯಾ ಈಗ ಟಿ೨೦ಐ ಇತಿಹಾಸದಲ್ಲಿ ಸತತ ೧೦ ಇನ್ನಿಂಗ್ಸ್ಗಳಲ್ಲಿ ೩೦ ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದ ವಿಶ್ವದ ಮೊದಲ ಕ್ರಿಕೆಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಹಿಂದೆ, ಸತತ ಒಂಬತ್ತು ಪಂದ್ಯಗಳಲ್ಲಿ ೩೦+ ಸ್ಕೋರ್‌ಗಳನ್ನು ಕಲೆಹಾಕಿದ ದಾಖಲೆಯನ್ನು ಶ್ರೀಲಂಕಾದ ಚಾಮರಿ ಅಟಪಟ್ಟು ಮತ್ತು ರೊಮೇನಿಯಾದ ರೆಬೆಕ್ಕಾ...

ಮಕ್ಕಳಿಗೆ ಡಿಜಿಟಲ್ ಬಳಕೆ ಹೇಗೆ?

ಮಕ್ಕಳಿಗೆ ಡಿಜಿಟಲ್ ಬಳಕೆ ಹೇಗೆ?

ವಿದ್ಯಾರ್ಥಿಗಳಿಗೆ ಫೋನ್ ಬಳಕೆ ನಿರ್ಬಂಧದ ಬಗ್ಗೆ ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ನಿಮ್ಹಾನ್ಸ್ನಿಂದ ಡಿಜಿಟಲ್ ಬಳಕೆಯ ಪರಿಣಾಮ ಅನುಷ್ಠಾನ ಮಾರ್ಗಸೂಚಿ ರಿಲೀಸ್ ಆಗಿದೆ. ೧೬ ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ನಿಷೇಧ ಹೇರುವ ವಿಷಯ ಚರ್ಚೆ ಇರುವ ಬೆನ್ನಲ್ಲೇ ಮಕ್ಕಳು ಡಿಜಿಟಲ್ ಬಳಕೆ ಬಗ್ಗೆ ನಿಮಾನ್ಸ್ ತಜ್ಞರ ತಂಡ ಅಧ್ಯಯನ ನಡೆಸಿದೆ. ಮಕ್ಕಳು ಡಿಜಿಟಲ್ ಬಳಕೆ ಹೇಗಿರಬೇಕು? ಡಿಜಿಟಲ್ ಬಳಕೆಯಲ್ಲಿ ಪೋಷಕರು, ಶಿಕ್ಷಕರು, ಶಾಲೆಗಳು ಮತ್ತು ಶಿಕ್ಷಣ ಸಂಸ್ಥೆಗಳು ಆರೋಗ್ಯ ಇಲಾಖೆ ಪಾತ್ರ ಹೇಗಿರಬೇಕು ಅಂತಾ ಅಧ್ಯಯನ ನಡೆಸಿ ವರದಿ ಸಿದ್ಧಮಾಡಿದೆ. ೨೭ ಪುಟಗಳ ಒಳಗೊಂಡ ಅಧ್ಯಯನದ ವರದಿಯನ್ನ ನಿಮ್ಹಾನ್ಸ್ ಆರೋಗ್ಯ ಇಲಾಖೆಗೆ ಶಿಫಾರಸು ಮಾಡಿದೆ. ವಿದ್ಯಾರ್ಥಿಗಳಲ್ಲಿ ಜಾಗೃತಿ ಹಾಗೂ ಇನ್ಮುಂದೆ ಶಾಲೆಗಳಲ್ಲಿ ಕಡ್ಡಾಯ ಡಿಜಿಟಲ್ ವೆಲ್‌ನೆಸ್ ಕಮಿಟಿ ಇರಬೇಕು. ಪ್ರತಿ ಶಾಲೆಯಲ್ಲಿಯೂ ವಿದ್ಯಾರ್ಥಿಗಳ ಮಾನಸಿಕ ಸ್ಥಿತಿಗತಿ, ಫೋನ್ ಅಡಿಕ್ಷನ್ ಬಗ್ಗೆ ಗಮನಹರಿಸಲು ಒಬ್ಬ ಶಿಕ್ಷಕರಿಗೆ ಟ್ರೈನಿಂಗ್ ಕೊಡ್ಬೇಕು. ವಿದ್ಯಾರ್ಥಿಗಳ ಫೋನ್‌ಗಳಲ್ಲಿ ಆಡಿಯೋ ಮಾತ್ರ ಇರಬೇಕು. ಸಂಜೆ ೭ ಗಂಟೆಯ...