ಒಂದಷ್ಟು ಕಾರ್ಗಳ ಹಿಂಬದಿಯಲ್ಲಿ, ಬೈಕ್ಗಳಲ್ಲಿ ವರ್ಣರಂಜಿತ ಧ್ವಜ ಹಾಕಿರುವುದನ್ನು ನೀವು ಸಹ ಗಮನಿಸಿರುತ್ತೀರಿ ಅಲ್ವಾ. ಸಾಮಾನ್ಯವಾಗಿ ಲಾಂಗ್ ರೈಡ್ ಹೋಗುವಂತಹ ಬೈಕರ್ಸ್ ತಮ್ಮ ಬೈಕ್ಗಳಲ್ಲಿ ಈ ಐದು ಬಣ್ಣದ ಫ್ಲ್ಯಾಗ್ ಅನ್ನು ಹಾಕಿರುತ್ತಾರೆ. ಹೆಚ್ಚಿನವರು ಇದನ್ನು ಫ್ಯಾಶನ್ಗಾಗಿ, ಅಲಂಕಾರಕ್ಕಾಗಿ ಹಾಕಿರುತ್ತಾರೆ ಎಂದು ಭಾವಿಸುತ್ತಾರೆ, ಆದ್ರೆ ಹೀಗೆ ಬೈಕ್ಗಳಲ್ಲಿ ಈ ಫ್ಲ್ಯಾಗ್ ಹಾಕುವುದರ ಹಿಂದೆಯೂ ಒಂದು ಅರ್ಥವಿದೆ. ಇತ್ತೀಚಿನ ದಿನಗಳಲ್ಲಿ ಲಡಾಕ್ನಂತಹ ಹಿಲ್ ಸ್ಟೇಷನ್ಗಳಿ ಬೈಕ್ ರೈಡ್ ಹೋಗುವಂತಹದ್ದು ಟ್ರೆಂಡ್ ಆಗಿದೆ. ಯುವ ಜನರಂತೂ ರಜಾ ದಿನಗಳಲ್ಲಿ ಬ್ಯಾಗ್ ಪ್ಯಾಕ್ ಮಾಡಿ ಈ ರೀತಿ ರೈಡ್ಗಳಿಗೆ ಹೋಗುತ್ತಿರುತ್ತಾರೆ. ಹೀಗೆ ದೂರದೂರುಗಳಿಗೆ ರೈಡ್ ಹೋಗುವವರು ತಮ್ಮ ಬೈಕ್ಗಳಲ್ಲಿ ಐದು ಬಣ್ಣಗಳಿಂದ ಕೂಡಿದ ಟಿಬೆಟಿಯನ್ ಫ್ಲ್ಯಾಗ್ ಒಂದನ್ನು ನೇತು ಹಾಕಿರುತ್ತಾರೆ. ಬಹುಶಃ ನೀವು ಕೂಡ ಇದನ್ನು ಗಮನಿಸಿರುತ್ತೀರಿ ಅಲ್ವಾ. ಸಾಕಷ್ಟು ಮಂದಿ ಇದನ್ನು ಫ್ಯಾಶನ್ ಮತ್ತು ಅಲಂಕಾರಕ್ಕಾಗಿ ಹಾಕಿರುತ್ತಾರೆ ಎಂದು ಭಾವಿಸುತ್ತಾರೆ. ಬೌದ್ಧ ಸಂಪ್ರದಾಯದ ಸಂಕೇತ ಈ ಧ್ವಜ: ಬೈಕ್ಗಳಲ್ಲಿ ಹಾಕಿರುವಂತಹ ಈ ಫ್ಲ್ಯಾಗ್ಗಳನ್ನು ಟಿಬೆಟಿಯನ್...
ಮಹಾಬಲಾದ್ರಿ ಬೆಟ್ಟವೇ ಚಾಮುಂಡಿ ಬೆಟ್ಟ
ಮೈಸೂರಿನ ಚಾಮುಂಡಿ ಬೆಟ್ಟವು ಹಿಂದೆ ‘ಮಹಾಬಲಾದ್ರಿ’ ಅಥವಾ ‘ಮಹಾಬಲ ಬೆಟ್ಟ’ ಎಂದು ಕರೆಯಲ್ಪಡುತ್ತಿತ್ತು. ಇದರ ಮೂಲ ದೇವರು ಚಾಮುಂಡೇಶ್ವರಿ ಅಲ್ಲ, ಬದಲಿಗೆ ಮಹಾಬಲೇಶ್ವರ (ಶಿವ) ಎಂದು ಕ್ರಿ.ಶ. ೯೫೦ರ ಶಾಸನಗಳು ದೃಢಪಡಿಸುತ್ತವೆ. ಯದುವಂಶದ ಅರಸರು ಚಾಮುಂಡೇಶ್ವರಿಯನ್ನು ಕುಲದೇವತೆಯಾಗಿ ಸ್ವೀಕರಿಸಿದ ನಂತರ ಆಕೆಯ ಮಹಿಮೆ ಹೆಚ್ಚಾಯಿತು. ಮಹಾಬಲೇಶ್ವರ ದೇವಸ್ಥಾನವು ಚಾಮುಂಡಿ ಬೆಟ್ಟದ ಅತ್ಯಂತ ಹಳೆಯ ದೇವಾಲಯವಾಗಿದೆ. ಮೈಸೂರಿನ ಚಾಮುಂಡಿ ಬೆಟ್ಟ ಇಂದು ವಿಶ್ವಪ್ರಸಿದ್ಧ ಪ್ರವಾಸಿ ತಾಣ ಹಾಗೂ ಧಾರ್ಮಿಕ ಕೇಂದ್ರ. ಆದರೆ ಸಾವಿರಾರು ವರ್ಷಗಳ ಹಿಂದೆ ಈ ಬೆಟ್ಟವನ್ನು ‘ಮಹಾಬಲಾದ್ರಿ’ ಅಥವಾ ‘ಮಹಾಬಲ ಬೆಟ್ಟ’ ಎಂದು ಕರೆಯಲಾಗುತ್ತಿತ್ತು. ಇಲ್ಲಿನ ಮೂಲ ದೇವರು ಚಾಮುಂಡೇಶ್ವರಿಯಲ್ಲ, ಬದಲಾಗಿ ಮಹಾಬಲೇಶ್ವರ (ಶಿವ) ಕ್ರಿ.ಶ. ೯೫೦ರ ಸುಮಾರಿನ ಶಾಸನಗಳ ಪ್ರಕಾರ, ಈ ಬೆಟ್ಟದ ಪ್ರಮುಖ ದೇವರು ಮಹಾಬಲೇಶ್ವರ ಸ್ವಾಮಿ. ಚಾಮುಂಡೇಶ್ವರಿ ದೇವಿಯನ್ನು ಆಗ ‘ಮಬ್ಬಲದ ದೇವಿ’ ಅಥವಾ ‘ಮಹಾಲಕ್ಷ್ಮಿ’ ಎಂದು ಕರೆಯಲಾಗುತ್ತಿತ್ತು ಮತ್ತು ಆಕೆ ಈ ಶಿವನ ದೇವಸ್ಥಾನದ ಪಾರ್ಶ್ವದೇವತೆಯಾಗಿದ್ದಳು. ಯದುವಂಶದ ಅರಸರು (ಮೈಸೂರು ಒಡೆಯರು) ಚಾಮುಂಡೇಶ್ವರಿ ದೇವಿಯನ್ನು...
ತಕ್ಷಣ ಬರುವ ತೀವ್ರ ತಲೆನೋವು ಮತ್ತು ಆತಂಕ ಮೆದುಳಿನ ಅಸ್ವಸ್ಥತೆಯ ಲಕ್ಷಣವೇ?
ತೀವ್ರ ತಲೆನೋವಿನ ಜೊತೆಗೆ ಆತಂಕವಾಗುತ್ತಿದ್ದರೆ ಅದನ್ನು ನಿರ್ಲಕ್ಷಿಸುವುದು ಒಳ್ಳೆಯದಲ್ಲ. ಏಕೆಂದರೆ ಕೆಲವು ಸಂದರ್ಭಗಳಲ್ಲಿ ಇದು ಮಾನಸಿಕ ಅಸ್ವಸ್ಥತೆಯ ಸಂಕೇತವಾಗಿರಬಹುದು. ಈ ಬಗ್ಗೆ ಸರಿಯಾಗಿ ತಿಳಿದುಕೊಳ್ಳುವುದರಿಂದ ಅನಗತ್ಯ ಭಯವನ್ನು ಕಡಿಮೆ ಮಾಡಬಹುದು. ಹಾಗಾಗಿ ಇಂತಹ ಸಂದರ್ಭದಲ್ಲಿ, ಈ ಸ್ಥಿತಿ ಎಷ್ಟು ಗಂಭೀರವಾಗಬಹುದು, ಅದನ್ನು ಹೇಗೆ ತಡೆಯುವುದು ಮತ್ತು ಯಾವಾಗ ವೈದ್ಯರನ್ನು ಸಂಪರ್ಕಿಸುವುದು ಎಂಬುದರ ಬಗ್ಗೆ ತಿಳಿದಿದ್ದಲ್ಲಿ ಇಂತಹ ಸಮಸ್ಯೆಗಳನ್ನು ಸರಿಯಾದ ರೀತಿಯಲ್ಲಿ ನಿಭಾಯಿಸಬಹುದು. ವ್ಯಕ್ತಿಯಲ್ಲಿ ಆತಂಕ ಉಂಟುಮಾಡಿ, ವಿಚಲಿತಗೊಳಿಸಿ, ಭಯಭೀತರನ್ನಾಗಿ ಮಾಡುತ್ತವೆ. ಆದರೆ ಈ ರೀತಿ ಬರುವ ಎಲ್ಲಾ ತಲೆನೋವು ಅಥವಾ ಆತಂಕ ಮೆದುಳಿನ ಕಾಯಿಲೆಯನ್ನು ಸೂಚಿಸುವುದಿಲ್ಲ, ಆದರೆ ಅದನ್ನು ನಿರ್ಲಕ್ಷಿಸುವುದು ಸಹ ಸೂಕ್ತವಲ್ಲ. ಈ ಬಗ್ಗೆ ಸರಿಯಾಗಿ ತಿಳಿದುಕೊಳ್ಳುವುದರಿಂದ ಅನಗತ್ಯ ಭಯವನ್ನು ಕಡಿಮೆ ಮಾಡಬಹುದು. ಇಂತಹ ಸಂದರ್ಭದಲ್ಲಿ, ಈ ಸ್ಥಿತಿ ಎಷ್ಟು ಗಂಭೀರವಾಗಬಹುದು, ಅದನ್ನು ಹೇಗೆ ತಡೆಯುವುದು ಮತ್ತು ಯಾವಾಗ ವೈದ್ಯರನ್ನು ಸಂಪರ್ಕಿಸುವುದು ಎಂಬುದರ ಬಗ್ಗೆ ತಿಳಿದಿದ್ದಲ್ಲಿ ಇಂತಹ ಸಮಸ್ಯೆಗಳನ್ನು ಸರಿಯಾದ ರೀತಿಯಲ್ಲಿ ನಿಭಾಯಿಸಬಹುದು. ದೆಹಲಿಯ ನರವಿಜ್ಞಾನಿ ಡಾ. ರಾಜೇಶ್ ಕುಮಾರ್...
ಹೊಸ ಪಕ್ಷ ಸ್ಥಾಪಿಸುವೆ: ಜಯಲಲಿತಾ ಆಪ್ತೆ ಶಶಿಕಲಾ
ತಮಿಳುನಾಡಿನ ಮಾಜಿ ಸಿಎಂ ದಿ. ಜಯಲಲಿತಾ ಅವರ ಗೆಳತಿ ವಿ.ಕೆ. ಶಶಿಕಲಾ ಅವರು ಹೊಸ ರಾಜಕೀಯ ಪಕ್ಷ ಸ್ಥಾಪಿಸುವುದಾಗಿ ಘೋಷಿಸಿದ್ದಾರೆ. ರಾಜ್ಯದಲ್ಲಿ ಏಪ್ರಿಲ್ನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಅದರಲ್ಲಿ ಇವರು ಸ್ಪರ್ಧಿಸುವ ಸಾಧ್ಯತೆಯಿದೆ. ತಮಿಳುನಾಡಿನ ಮಾಜಿ ಸಿಎಂ ದಿ. ಜಯಲಲಿತಾ ಅವರ ಗೆಳತಿ ವಿ.ಕೆ. ಶಶಿಕಲಾ ಅವರು ಹೊಸ ರಾಜಕೀಯ ಪಕ್ಷ ಸ್ಥಾಪಿಸುವುದಾಗಿ ಘೋಷಿಸಿದ್ದಾರೆ. ರಾಜ್ಯದಲ್ಲಿ ಏಪ್ರಿಲ್ನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಅದರಲ್ಲಿ ಇವರು ಸ್ಪರ್ಧಿಸುವ ಸಾಧ್ಯತೆಯಿದೆ. ಜಯಲಲಿತಾರ ಜನ್ಮದಿನಾಚರಣೆಯಲ್ಲಿ ಮಾತನಾಡಿದ ಅವರು, ‘ನನ್ನ ಹೊಸ ಪಕ್ಷದ ಹೆಸರನ್ನು ಆದಷ್ಟು ಬೇಗ ಘೋಷಿಸುತ್ತೇನೆ. ಅದು ವಿರೋಧಿಗಳು ಮತ್ತು ದ್ರೋಹಿಗಳನ್ನು ಸೋಲಿಸುವ ಪಕ್ಷವಾಗಿ ಹೊರಹೊಮ್ಮಲಿದೆ’ ಎಂದು ಘೋಷಿಸಿದ್ದಾರೆ. ಇದೇ ವೇಳೆ ಪಕ್ಷದ ಧ್ವಜವನ್ನು ಅನಾವರಣಗೊಳಿಸಿದ್ದಾರೆ. ಕಪ್ಪು, ಬಿಳಿ, ಕೆಂಪು ಬಣ್ಣದ ಬಾವುಟದ ನಡುವಲ್ಲಿ ದ್ರಾವಿಡ ಐಕಾನ್ ಕರುಣಾನಿಧಿ, ಅಣ್ಣಾಡಿಎಂಕೆ ಸ್ಥಾಪಕ ರಾಮಚಂದ್ರನ್ ಮತ್ತು ಜಯಲಲಿತಾರ ಚಿತ್ರವಿದೆ.ಉಸಿರಾಟದ ತೊಂದರೆ ಕಾಣಬಹುದು. ಕೆಲವರಿಗೆ ಯಾವುದೇ ಲಕ್ಷಣಗಳಿಲ್ಲ
ಹೆಚ್ಚು ಎಣ್ಣೆಯುಕ್ತ ಆಹಾರ ಸೇವನೆಯಿಂದ ಹೃದಯದಲ್ಲಿ ಬ್ಲಾಕೇಜ್
ಹೆಚ್ಚಿನ ಪ್ರಮಾಣದ ಸ್ಯಾಚುರೇಟೆಡ್ ಮತ್ತು ಟ್ರಾನ್ಸ್ ಕೊಬ್ಬನ್ನು ಒಳಗೊಂಡಿರುವ ಅತಿಯಾದ ಎಣ್ಣೆಯುಕ್ತ ಮತ್ತು ಹುರಿದ ಆಹಾರಗಳು ಕಾಲಾನಂತರದಲ್ಲಿ ಹೃದಯಾಘಾತದ ಅಪಾಯವನ್ನು ಹೆಚ್ಚಿಸಬಹುದು. ಆದರೆ ಎಣ್ಣೆ ರಾತ್ರೋರಾತ್ರಿ ಅಡಚಣೆಗೆ ಕಾರಣವಾಗುವುದಿಲ್ಲ, ಕಳಪೆ ಆಹಾರ, ವ್ಯಾಯಾಮದ ಕೊರತೆ ಮತ್ತು ಜೀವನಶೈಲಿಯ ಅಭ್ಯಾಸಗಳ ಸಂಯೋಜನೆಯ ಮೂಲಕವೂ ಹೃದಯ ಕಾಯಿಲೆ ಹೆಚ್ಚುತ್ತದೆ. ಹೆಚ್ಚು ಎಣ್ಣೆಯುಕ್ತ ಆಹಾರವನ್ನು ಸೇವಿಸೋದ್ರಿಂದ ಹೃದಯಘಾತವಾಗುತ್ತಾ ಅಥವಾ ಹೃದಯದಲ್ಲಿ ಬ್ಲಾಕೇಜ್ ಆಗುತ್ತಾ ಎನ್ನುವುದಕ್ಕೆ ಸರಳವಾದ ಉತ್ತರವೆಂದರೆ ಎಣ್ಣೆಯೊಂದೇ ಕಾರಣ ಎನ್ನಲು ಸಾಧ್ಯವಿಲ್ಲ. ವೈದ್ಯಕೀಯವಾಗಿ ಪರಿಧಮನಿಯ ಅಪಧಮನಿ ಕಾಯಿಲೆ ಎಂದು ಕರೆಯಲ್ಪಡುವ ಹೃದಯಾಘಾತವು ಆಹಾರ, ಜೀವನಶೈಲಿ, ತಳಿಶಾಸ್ತ್ರ ಮತ್ತು ಚಯಾಪಚಯ ಆರೋಗ್ಯದ ಸಂಕೀರ್ಣ ಮಿಶ್ರಣದಿಂದಾಗಿ ಹೆಚ್ಚುತ್ತದೆ . ವಿಶೇಷವಾಗಿ ಎಣ್ಣೆಯ ಪ್ರಕಾರ ಮತ್ತು ಅಡುಗೆ ವಿಧಾನವನ್ನು ಅವಲಂಬಿಸಿ ಎಣ್ಣೆ ಪ್ರಮುಖ ಪಾತ್ರ ವಹಿಸುತ್ತದೆ. “ಹೃದಯದ ಬ್ಲಾಕೇಜ್” : ಪರಿಧಮನಿಯ ಅಪಧಮನಿಗಳ ಒಳಗೆ ಕೊಬ್ಬಿನ ನಿಕ್ಷೇಪಗಳು, ಕೊಲೆಸ್ಟ್ರಾಲ್, ಉರಿಯೂತದ ಕೋಶಗಳು ಮತ್ತು ಇತರ ವಸ್ತುಗಳು ಸಂಗ್ರಹವಾದಾಗ ಹೃದಯದಲ್ಲಿ ಅಡಚಣೆ ಸಾಮಾನ್ಯವಾಗಿ ಸಂಭವಿಸುತ್ತದೆ. ಈ ಪ್ರಕ್ರಿಯೆಯನ್ನು ಅಪಧಮನಿಕಾಠಿಣ್ಯ ಎಂದೂ...
ವಿಶ್ವ ಭೂಮಿ ದಿನ ಏ. ೨೨
ಭೂಮಿ ರಕ್ಷಣೆ ನಮ್ಮ ಹೊಣೆ ಹವಾಮಾನ ಏರಿಕೆಯ ಪರಿಣಾಮಗಳನ್ನು ದಿನದಿನವೂ ನೋಡುತ್ತಿದ್ದೇವೆ. ಎಲ್ಲರನ್ನೂ ಪೊರೆಯುವ ತಾಯಿ ಎನಿಸಿರುವ ಭೂಮಿ ಮುನಿಸಿಕೊಂಡಿದ್ದಾಳೆ. ಮಾನವ ಕುಲ ಭೂತಾಯಿಯನ್ನು ನಿರ್ದಾಕ್ಷಿಣ್ಯವಾಗಿ ಕಠಿಣವಾಗಿ ನಡೆಸಿಕೊಂಡ ಪರಿಣಾಮವೇ ಹವಾಮಾನ ಏರಿಕೆ. ಭೂಗ್ರಹದ ವ್ಯವಸ್ಥೆಯಲ್ಲಿ ಚೂರೇ ಚೂರು ವ್ಯತ್ಯಾಸವಾದರೂ ಎಲ್ಲರೂ ಏರುಪೇರಾಗುತ್ತದೆ. ಭೂಮಿಯೆಂದರೆ ಬೇರೆಯಲ್ಲ, ಸಕಲ ನೈಸರ್ಗಿಕ ವ್ಯವಸ್ಥೆಗಳು ಬೇರೆಯಲ್ಲ. ಅವೆಲ್ಲ ಚೆನ್ನಾಗಿದ್ದರೆ ಮಾತ್ರ ಭೂಮಿ ಚೆನ್ನಾಗಿರುತ್ತದೆ. ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಭೂಮಿಯನ್ನು ಇಂಚಿಂಚೂ ಕಬಳಿಸಿದ್ದಾನೆ. ಹೀಗಾಗಿ, ವರ್ಷದಿಂದ ವರ್ಷಕ್ಕೆ ತಾಪಮಾನ ಏರಿಕೆ ಆಗುತ್ತಲೇ ಇದೆ. ಭೂಮಿಯನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಎಲ್ಲರನ್ನೂ ಜಾಗ್ರತಗೊಳಿಸಲು ಪ್ರತಿವರ್ಷ ಏಪ್ರಿಲ್ ೨೨ರಂದು ಭೂ ದಿನವನ್ನು ಆಚರಿಸಲಾಗುತ್ತದೆ. ಭೂಮಿಯನ್ನು ಸಹಜ ಸ್ಥಿತಿಗೆ ಮರಳಿಸುವುದು ಖಂಡಿತ ಮನುಷ್ಯನಿಂದಾಗ ಕೆಲಸ. ಆದರೆ, ಅದರ ಬಗ್ಗೆ ಪ್ರಯತ್ನವನ್ನಾದರೂ ಮಾಡಬಹುದು. ಇದೇ ವಿಶ್ವ ಭೂಮಿ ದಿನವನ್ನು ಆಚರಿಸುವ ಮುಖ್ಯ ಉದ್ದೇಶ. ಹವಾಮಾನ ಬದಲಾವಣೆ, ಜಾಗತಿಕ ತಾಪಮಾನ, ಮಾಲಿನ್ಯ ಮತ್ತು ಜೀವವೈವಿಧ್ಯತೆಯ ನಾಶ ಇವೆಲ್ಲವುಗಳ ತಡೆಗೆ ನಮ್ಮಿಂದಾದ ಕೊಡುಗೆ ನೀಡಬೇಕು. ಭೂಮಿಯ ಕೋಟ್ಯಂತರ...
ವಿಶ್ವ ಆರೋಗ್ಯ ದಿನದ ಇತಿಹಾಸ
ವಿಶ್ವ ಆರೋಗ್ಯ ದಿನದ ಬಗ್ಗೆ ಮಾತನಾಡಲು, ನಾವು ಒಟ್ಟಾರೆಯಾಗಿ ವಿಶ್ವ ಆರೋಗ್ಯ ಸಂಸ್ಥೆಯ ರಚನೆಯ ಬಗ್ಗೆ ಮಾತನಾಡಬೇಕು. ಡಿಸೆಂಬರ್ ೧೯೪೫ ರಲ್ಲಿ, ಬ್ರೆಜಿಲ್ ಮತ್ತು ಚೀನಾದ ಅಧಿಕಾರಿಗಳು ಅಂತರರಾಷ್ಟ್ರೀಯ ಆರೋಗ್ಯ ಸಂಸ್ಥೆಯ ರಚನೆಯನ್ನು ಪ್ರಸ್ತಾಪಿಸಿದರು, ಅದು ಸರ್ವವ್ಯಾಪಿ ಮತ್ತು ಯಾವುದೇ ಸರ್ಕಾರಿ ಅಧಿಕಾರಗಳಿಂದ ಸಂಪೂರ್ಣವಾಗಿ ಸ್ವತಂತ್ರವಾಗಿದೆ. ಅರ್ಧ ವರ್ಷದ ನಂತರ, ನ್ಯೂಯಾರ್ಕ್ನಲ್ಲಿ, ಜುಲೈ ೧೯೪೬ ರಲ್ಲಿ, ವಿಶ್ವ ಆರೋಗ್ಯ ಸಂಸ್ಥೆಯ ಸಂವಿಧಾನವನ್ನು ಅಂಗೀಕರಿಸಲಾಯಿತು. ಈ ಸಂವಿಧಾನವು ಏಪ್ರಿಲ್ ೭, ೧೯೪೮ ರಂದು ಜಾರಿಗೆ ಬಂದಿತು, ೬೧ ದೇಶಗಳು ಓಉಔ ಸ್ಥಾಪನೆಗೆ ಒಪ್ಪಂದಕ್ಕೆ ಸಹಿ ಹಾಕಿದವು. WHO ಯ ಮೊದಲ ಅಧಿಕೃತ ಕಾರ್ಯಗಳಲ್ಲಿ ಒಂದಾಗಿ, ಅವರು ವಿಶ್ವ ಆರೋಗ್ಯ ದಿನದ ಆಚರಣೆಯನ್ನು ರಚಿಸಿದರು. ಇದನ್ನು ಮೊದಲು ಜುಲೈ ೨೨, ೧೯೪೯ ರಂದು ಆಚರಿಸಲಾಯಿತು, ಆದರೆ ನಂತರ ವಿದ್ಯಾರ್ಥಿಗಳ ಭಾಗವಹಿಸುವಿಕೆಯನ್ನು ಉತ್ತೇಜಿಸಲು ದಿನಾಂಕವನ್ನು WHO ಸ್ಥಾಪನೆಯಾದ ಏಪ್ರಿಲ್ ೭ಕ್ಕೆ ಬದಲಾಯಿಸಲಾಯಿತು. ೧೯೫೦ರಿಂದ ವರ್ಲ್ಡ ಹೆಲ್ತ್ ಡೇ ಪ್ರತಿ ವರ್ಷವೂ ಸದಸ್ಯ ಸರ್ಕಾರಗಳು ಮತ್ತು ಸಿಬ್ಬಂದಿಗಳ...
ಕಾರ್ಬೋಹೈಡ್ರೇಟ್ ಮತ್ತು ಕೊಬ್ಬು: ಇವರಡರಲ್ಲಿ ಆರೋಗ್ಯಕ್ಕೆ ಯಾವುದು ಹೆಚ್ಚು ಹಾನಿಕಾರಕ
ಕಾರ್ಬೋಹೈಡ್ರೇಟ್ ಹೆಚ್ಚಿರುವ ಆಹಾರದಿಂದ ತೂಕ ಹೆಚ್ಚಾಗುತ್ತದೆ. ಮಧುಮೇಹ, ಹೃದಯ ಸಂಬಂಧಿತ ಸಮಸ್ಯೆಗಳಿಗೆ ಕಾರಣವಾಗಬಹುದು. ಕಾರ್ಬೋಹೈಡ್ರೇಟ್ ದೇಹಕ್ಕೆ ಗ್ಲೂಕೋಸ್ ಒದಗಿಸುತ್ತವೆ. ಗ್ಲೂಕೋಸ್ ಹೆಚ್ಚಿರುವುದು ಹಾನಿಕಾರಕವಾಗಿದೆ ಎಂದು ಆರೋಗ್ಯ ತಜ್ಞರು ತಿಳಿಸಿದ್ದಾರೆ. ಆರೋಗ್ಯಕರ ದೇಹವನ್ನು ಕಾಪಾಡಿಕೊಳ್ಳಲು ಪೌಷ್ಟಿಕ ಆಹಾರ ಅವಶ್ಯವಾಗಿದೆ. ಪ್ರತಿಯೊಬ್ಬರೂ ಸಾಕಷ್ಟು ಹಸಿರು ತರಕಾರಿಗಳು ಮತ್ತು ಹಣ್ಣುಗಳನ್ನು ಸೇವಿಸುವುದು ಒಳ್ಳೆಯದು ಎಂದು ಆರೋಗ್ಯ ತಜ್ಞರು ಸಲಹೆ ನೀಡಿದ್ದಾರೆ. ಸಾಮಾನ್ಯವಾಗಿ ಫಿಟ್ನೆಸ್ಗೆ ಹೆಚ್ಚು ಒತ್ತು ನೀಡುವವರು ತಮ್ಮ ಆಹಾರದಿಂದ ಕಾರ್ಬೋಹೈಡ್ರೇಟ್ಗಳನ್ನು ತೆಗೆದುಹಾಕುವುದನ್ನು ಹೆಚ್ಚಾಗಿ ಕಾಣಬಹುದು. ಆದರೆ, ಕಾರ್ಬೋಹೈಡ್ರೇಟ್ಗಳು ನಿಜವಾಗಿಯೂ ಹಾನಿಕಾರಕವೇ? ತೂಕ ಹೆಚ್ಚಾಗುವುದು, ಫಿಟ್ನೆಸ್ ಸಂಬಂಧಿತ ಸಮಸ್ಯೆಗಳಿಗೆ ಕಾರ್ಬೋಹೈಡ್ರೇಟ್ಗಳು ಮಾತ್ರ ಕಾರಣವೇ? ಪ್ರತಿಯೊಬ್ಬರೂ ತಮ್ಮ ಆಹಾರದಲ್ಲಿ ಕಾರ್ಬೋಹೈಡ್ರೇಟ್ಗಳ ಪ್ರಮಾಣವನ್ನು ಕಡಿಮೆ ಮಾಡಬೇಕೇ? ಆಹಾರದ ವಿಷಯಕ್ಕೆ ಬಂದರೆ ವಿವಿಧ ಪ್ರಕಾರದ ಗೊಂದಲಗಳು ಎದುರಾಗುತ್ತವೆ ಎಂದು ಪೌಷ್ಟಿಕ ತಜ್ಞರು ಗಮನಿಸುತ್ತಾರೆ. ನಿಮ್ಮ ಆಹಾರದಲ್ಲಿ ಕಾರ್ಬೋಹೈಡ್ರೇಟ್ಗಳ ಸೇವನೆಗೂ ಕೂಡ ಅನ್ವಯಿಸುತ್ತದೆ. ಇತರ ಪೋಷಕಾಂಶಗಳಂತೆ ನಮ್ಮ ದೇಹಕ್ಕೆ ಕಾರ್ಬೋಹೈಡ್ರೇಟ್ಗಳು ಸಹ ಬೇಕಾಗುತ್ತವೆ. ಆಹಾರದಿಂದ ಅವುಗಳನ್ನು ಸಂಪೂರ್ಣವಾಗಿ ತೆಗೆದುಹಾಕುವುದರಿಂದ ಗಂಭೀರ ಆರೋಗ್ಯ...
ಐಪಿಎಲ್ನಲ್ಲಿ ಟೂರ್ನಿಯಲ್ಲಿ ಇಂದಿಗೂ ಕೊಹ್ಲಿಯೇ ಕಿಂಗ್
ಮಾರ್ಚ್ ೨೮ರಿಂದ ಆರಂಭವಾಗಿರುವ ವಿಶ್ವದ ಶ್ರೀಮಂತ ಕ್ರಿಕೆಟ್ ಟೂರ್ನಿಯತ್ತ ಎಲ್ಲರ ಚಿತ್ತ ನೆಟ್ಟಿದೆ. ಟೂರ್ನಿಯಲ್ಲಿ ಮೊದಲಿನಿಂದಲೂ ಬ್ಯಾಟರ್ಗಳ ಅಬ್ಬರ ಜೋರಾಗಿದೆ. ಹಾಗಿದ್ದರೆ ಒಟ್ಟಾರೆ ಲೀಗ್ನಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಬ್ಯಾಟರ್ ಯಾರು ಗೊತ್ತೇ?. ಟಿ೨೦ ಫಾರ್ಮೆಟ್ಗೆ ಹೊಸ ಹೊಳಪು ನೀಡಿದ್ದು ಐಪಿಎಲ್ (IPL 2026). ಈ ಲೀಗ್ ಆರಂಭವಾದಾಗ ಇಷ್ಟು ದೊಡ್ಡದಾಗಿ ಬೆಳೆಯುತ್ತದೆ ಎಂದು ಯಾರೊಬ್ಬರೂ ಊಹಿಸಿರಲು ಸಾಧ್ಯವೇ ಇರಲಿಲ್ಲ. ಆದರೆ ಕಳೆದ ೧೯ ವರ್ಷಗಳಲ್ಲಿ ಈ ಲೀಗ್ ಬೆಳೆದು ನಿಂತ ಪರಿ ಅಮೋಘ. ಈ ಲೀಗ್ನಲ್ಲಿ ಬ್ಯಾಟರ್ ಅಬ್ಬರ ಜೋರಾಗಿರುತ್ತದೆ. ಬೌಲರ್ಗಳ ರಣ ತಂತ್ರವನ್ನು ಬುಡಮೇಲು ಮಾಡಿ ರನ್ ವೇಗಕ್ಕೆ ಚುರುಕು ಮುಟ್ಟಿಸುವ ಬ್ಯಾಟರ್ಗಳು, ತಮ್ಮ ಅಭಿಮಾನಿಗಳ ಮನದಲ್ಲಿ ಶಾಶ್ವತ ಸ್ಥಾನವನ್ನು ಪಡೆದಿದ್ದಾರೆ. ಇಂದಿಗೂ ಕೊಹ್ಲಿಯೇ ಕಿಂಗ್ ಐಪಿಎಲ್ನಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಆಟಗಾರರ ಪಟ್ಟಿಯನ್ನು ಒಮ್ಮೆ ನೋಡಿದಾಗ, ಈ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿ ವಿರಾಟ್ ಕೊಹ್ಲಿ ಕಾಣಿಸಿಕೊಳ್ಳುತ್ತಾರೆ. ಇವರು ಈಗಾಗಲೇ ೧೮ ಆವೃತ್ತಿಗಳನ್ನು ಒಂದೇ ತಂಡದ...
ಬೆಂಗಳೂರು ಕರಗ ವಿಶೇಷತೆ
ಬೆಂಗಳೂರು ಕರಗ ಉತ್ಸವ ಜನಪ್ರಿಯ ಕಾರ್ಯಕ್ರಮಗಳಲ್ಲಿ ಒಂದು. ಬೆಂಗಳೂರು ಕರಗವು ೮ ಶತಮಾನಗಳ ಇತಿಹಾಸವನ್ನ ಹೊಂದಿದೆ. ಆದಿ ಶಕ್ತಿ ಸ್ವರೂಪಿಣಿಯಾದ ದ್ರೌಪದಿ ಆರಾಧನೆಗಾಗಿ ಮೀಸಲಿಡಲಾಗಿದೆ. ಕರಗವನ್ನು ಬೆಂಗಳೂರಿನ ಗ್ರಾಮ ಉತ್ಸವ ಎಂದು ಸಹ ಕರೆಯಲಾಗುತ್ತದೆ. ಹಿಂದೂ ಮತ್ತು ಮುಸ್ಲಿಂರ ಏಕತೆಯನ್ನು ಪ್ರದರ್ಶಿಸಲು ಕರಗ ಆಚರಣೆ ಮಾಡಲಾಗುತ್ತದೆ. ಪ್ರತಿ ವರ್ಷ ಚೈತ್ರ ಶುದ್ಧ ಸಪ್ತಮಿಯ ದಿನದಿಂದ ಉತ್ಸವ ಆರಂಭವಾಗುತ್ತದೆ. ಕರಗದ ಹಿಂದಿನ ದಿನದಿಂದಲೇ ಧರ್ಮರಾಯಸ್ವಾಮಿ ದೇಗುಲದಲ್ಲಿ ಪೂಜೆ ನಡೆಯುತ್ತೆ. ಕರಗದ ಅರ್ಥ ಕರಗ ಎಂಬ ಮಾತಿಗೆ ‘ಕುಂಭ’ ಎನ್ನುವ ಅರ್ಥವೂ ಇದೆ. ಕರಗದ ಒಂದೊAದು ಅಕ್ಷರ ಒಂದೊAದು ಸಂಕೇತ ಹೊಂದಿವೆ. ಕ-ಕೈಯಿಂದ ಮುಟ್ಟದೆ, ರ-ರುಂಡದ ಮೇಲೆ ಧರಿಸಿ, ಗ-ಗತಿಸುವುದು. ಕರಗ ಪೂಜೆ ತಮಿಳುನಾಡಿನಲ್ಲಿ ಬಹು ಹಿಂದಿನಿAದಲೂ ಇದೆ. ಬೆಂಗಳೂರು ಮಾತ್ರವಲ್ಲದೆ ಅನೇಕ ಕಡೆ ಕರಗ ಆಚರಣೆ ರೂಢಿಯಲ್ಲಿದೆ. ಮಲ್ಲಿಗೆ ಹೂವಿನ ಕರಗವನ್ನು ತಲೆ ಮೇಲೆ ಹೊತ್ತ ಪೂಜಾರಿ ನೃತ್ಯ ಮಾಡುತ್ತಾ ದೇಗುಲದಿಂದ ಹೊರ ಬರ್ತಾರೆ. ಅನೇಕ ದೇವಸ್ಥಾನಗಳಿಂದ ಕರಗ ವೇಷಧಾರಿಗಳು ಈ ದೇಗುಲಕ್ಕೆ...









