ವಿಶ್ವ ಭೂಮಿ ದಿನ ಏ. ೨೨

ವಿಶ್ವ ಭೂಮಿ ದಿನ ಏ. ೨೨

ಭೂಮಿ ರಕ್ಷಣೆ ನಮ್ಮ ಹೊಣೆ ಹವಾಮಾನ ಏರಿಕೆಯ ಪರಿಣಾಮಗಳನ್ನು ದಿನದಿನವೂ ನೋಡುತ್ತಿದ್ದೇವೆ. ಎಲ್ಲರನ್ನೂ ಪೊರೆಯುವ ತಾಯಿ ಎನಿಸಿರುವ ಭೂಮಿ ಮುನಿಸಿಕೊಂಡಿದ್ದಾಳೆ. ಮಾನವ ಕುಲ ಭೂತಾಯಿಯನ್ನು ನಿರ್ದಾಕ್ಷಿಣ್ಯವಾಗಿ ಕಠಿಣವಾಗಿ ನಡೆಸಿಕೊಂಡ ಪರಿಣಾಮವೇ ಹವಾಮಾನ ಏರಿಕೆ.  ಭೂಗ್ರಹದ ವ್ಯವಸ್ಥೆಯಲ್ಲಿ ಚೂರೇ ಚೂರು ವ್ಯತ್ಯಾಸವಾದರೂ ಎಲ್ಲರೂ ಏರುಪೇರಾಗುತ್ತದೆ. ಭೂಮಿಯೆಂದರೆ ಬೇರೆಯಲ್ಲ, ಸಕಲ ನೈಸರ್ಗಿಕ ವ್ಯವಸ್ಥೆಗಳು ಬೇರೆಯಲ್ಲ. ಅವೆಲ್ಲ ಚೆನ್ನಾಗಿದ್ದರೆ ಮಾತ್ರ ಭೂಮಿ ಚೆನ್ನಾಗಿರುತ್ತದೆ. ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಭೂಮಿಯನ್ನು ಇಂಚಿಂಚೂ ಕಬಳಿಸಿದ್ದಾನೆ. ಹೀಗಾಗಿ, ವರ್ಷದಿಂದ ವರ್ಷಕ್ಕೆ ತಾಪಮಾನ ಏರಿಕೆ ಆಗುತ್ತಲೇ ಇದೆ. ಭೂಮಿಯನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಎಲ್ಲರನ್ನೂ ಜಾಗ್ರತಗೊಳಿಸಲು ಪ್ರತಿವರ್ಷ ಏಪ್ರಿಲ್ ೨೨ರಂದು ಭೂ ದಿನವನ್ನು ಆಚರಿಸಲಾಗುತ್ತದೆ. ಭೂಮಿಯನ್ನು ಸಹಜ ಸ್ಥಿತಿಗೆ ಮರಳಿಸುವುದು ಖಂಡಿತ ಮನುಷ್ಯನಿಂದಾಗ ಕೆಲಸ. ಆದರೆ, ಅದರ ಬಗ್ಗೆ ಪ್ರಯತ್ನವನ್ನಾದರೂ ಮಾಡಬಹುದು. ಇದೇ ವಿಶ್ವ ಭೂಮಿ ದಿನವನ್ನು ಆಚರಿಸುವ ಮುಖ್ಯ ಉದ್ದೇಶ. ಹವಾಮಾನ ಬದಲಾವಣೆ, ಜಾಗತಿಕ ತಾಪಮಾನ, ಮಾಲಿನ್ಯ ಮತ್ತು ಜೀವವೈವಿಧ್ಯತೆಯ ನಾಶ ಇವೆಲ್ಲವುಗಳ ತಡೆಗೆ ನಮ್ಮಿಂದಾದ ಕೊಡುಗೆ ನೀಡಬೇಕು. ಭೂಮಿಯ ಕೋಟ್ಯಂತರ...

ವಿಶ್ವ ಆರೋಗ್ಯ ದಿನದ ಇತಿಹಾಸ

ವಿಶ್ವ ಆರೋಗ್ಯ ದಿನದ ಇತಿಹಾಸ

ವಿಶ್ವ ಆರೋಗ್ಯ ದಿನದ ಬಗ್ಗೆ ಮಾತನಾಡಲು, ನಾವು ಒಟ್ಟಾರೆಯಾಗಿ ವಿಶ್ವ ಆರೋಗ್ಯ ಸಂಸ್ಥೆಯ ರಚನೆಯ ಬಗ್ಗೆ ಮಾತನಾಡಬೇಕು. ಡಿಸೆಂಬರ್ ೧೯೪೫ ರಲ್ಲಿ, ಬ್ರೆಜಿಲ್ ಮತ್ತು ಚೀನಾದ ಅಧಿಕಾರಿಗಳು ಅಂತರರಾಷ್ಟ್ರೀಯ ಆರೋಗ್ಯ ಸಂಸ್ಥೆಯ ರಚನೆಯನ್ನು ಪ್ರಸ್ತಾಪಿಸಿದರು, ಅದು ಸರ್ವವ್ಯಾಪಿ ಮತ್ತು ಯಾವುದೇ ಸರ್ಕಾರಿ ಅಧಿಕಾರಗಳಿಂದ ಸಂಪೂರ್ಣವಾಗಿ ಸ್ವತಂತ್ರವಾಗಿದೆ. ಅರ್ಧ ವರ್ಷದ ನಂತರ, ನ್ಯೂಯಾರ್ಕ್ನಲ್ಲಿ, ಜುಲೈ ೧೯೪೬ ರಲ್ಲಿ, ವಿಶ್ವ ಆರೋಗ್ಯ ಸಂಸ್ಥೆಯ ಸಂವಿಧಾನವನ್ನು ಅಂಗೀಕರಿಸಲಾಯಿತು. ಈ ಸಂವಿಧಾನವು ಏಪ್ರಿಲ್ ೭, ೧೯೪೮ ರಂದು ಜಾರಿಗೆ ಬಂದಿತು, ೬೧ ದೇಶಗಳು ಓಉಔ ಸ್ಥಾಪನೆಗೆ ಒಪ್ಪಂದಕ್ಕೆ ಸಹಿ ಹಾಕಿದವು. WHO ಯ ಮೊದಲ ಅಧಿಕೃತ ಕಾರ್ಯಗಳಲ್ಲಿ ಒಂದಾಗಿ, ಅವರು ವಿಶ್ವ ಆರೋಗ್ಯ ದಿನದ ಆಚರಣೆಯನ್ನು ರಚಿಸಿದರು. ಇದನ್ನು ಮೊದಲು ಜುಲೈ ೨೨, ೧೯೪೯ ರಂದು ಆಚರಿಸಲಾಯಿತು, ಆದರೆ ನಂತರ ವಿದ್ಯಾರ್ಥಿಗಳ ಭಾಗವಹಿಸುವಿಕೆಯನ್ನು ಉತ್ತೇಜಿಸಲು ದಿನಾಂಕವನ್ನು WHO ಸ್ಥಾಪನೆಯಾದ ಏಪ್ರಿಲ್ ೭ಕ್ಕೆ ಬದಲಾಯಿಸಲಾಯಿತು. ೧೯೫೦ರಿಂದ ವರ್ಲ್ಡ ಹೆಲ್ತ್ ಡೇ ಪ್ರತಿ ವರ್ಷವೂ ಸದಸ್ಯ ಸರ್ಕಾರಗಳು ಮತ್ತು ಸಿಬ್ಬಂದಿಗಳ...

ಕಾರ್ಬೋಹೈಡ್ರೇಟ್ ಮತ್ತು ಕೊಬ್ಬು: ಇವರಡರಲ್ಲಿ ಆರೋಗ್ಯಕ್ಕೆ ಯಾವುದು ಹೆಚ್ಚು ಹಾನಿಕಾರಕ

ಕಾರ್ಬೋಹೈಡ್ರೇಟ್ ಮತ್ತು ಕೊಬ್ಬು: ಇವರಡರಲ್ಲಿ ಆರೋಗ್ಯಕ್ಕೆ ಯಾವುದು ಹೆಚ್ಚು ಹಾನಿಕಾರಕ

ಕಾರ್ಬೋಹೈಡ್ರೇಟ್ ಹೆಚ್ಚಿರುವ ಆಹಾರದಿಂದ ತೂಕ ಹೆಚ್ಚಾಗುತ್ತದೆ. ಮಧುಮೇಹ, ಹೃದಯ ಸಂಬಂಧಿತ ಸಮಸ್ಯೆಗಳಿಗೆ ಕಾರಣವಾಗಬಹುದು. ಕಾರ್ಬೋಹೈಡ್ರೇಟ್ ದೇಹಕ್ಕೆ ಗ್ಲೂಕೋಸ್ ಒದಗಿಸುತ್ತವೆ. ಗ್ಲೂಕೋಸ್ ಹೆಚ್ಚಿರುವುದು ಹಾನಿಕಾರಕವಾಗಿದೆ ಎಂದು ಆರೋಗ್ಯ ತಜ್ಞರು ತಿಳಿಸಿದ್ದಾರೆ. ಆರೋಗ್ಯಕರ ದೇಹವನ್ನು ಕಾಪಾಡಿಕೊಳ್ಳಲು ಪೌಷ್ಟಿಕ ಆಹಾರ ಅವಶ್ಯವಾಗಿದೆ. ಪ್ರತಿಯೊಬ್ಬರೂ ಸಾಕಷ್ಟು ಹಸಿರು ತರಕಾರಿಗಳು ಮತ್ತು ಹಣ್ಣುಗಳನ್ನು ಸೇವಿಸುವುದು ಒಳ್ಳೆಯದು ಎಂದು ಆರೋಗ್ಯ ತಜ್ಞರು ಸಲಹೆ ನೀಡಿದ್ದಾರೆ. ಸಾಮಾನ್ಯವಾಗಿ ಫಿಟ್‌ನೆಸ್‌ಗೆ ಹೆಚ್ಚು ಒತ್ತು ನೀಡುವವರು ತಮ್ಮ ಆಹಾರದಿಂದ ಕಾರ್ಬೋಹೈಡ್ರೇಟ್‌ಗಳನ್ನು ತೆಗೆದುಹಾಕುವುದನ್ನು ಹೆಚ್ಚಾಗಿ ಕಾಣಬಹುದು. ಆದರೆ, ಕಾರ್ಬೋಹೈಡ್ರೇಟ್‌ಗಳು ನಿಜವಾಗಿಯೂ ಹಾನಿಕಾರಕವೇ? ತೂಕ ಹೆಚ್ಚಾಗುವುದು, ಫಿಟ್‌ನೆಸ್ ಸಂಬಂಧಿತ ಸಮಸ್ಯೆಗಳಿಗೆ ಕಾರ್ಬೋಹೈಡ್ರೇಟ್‌ಗಳು ಮಾತ್ರ ಕಾರಣವೇ? ಪ್ರತಿಯೊಬ್ಬರೂ ತಮ್ಮ ಆಹಾರದಲ್ಲಿ ಕಾರ್ಬೋಹೈಡ್ರೇಟ್‌ಗಳ ಪ್ರಮಾಣವನ್ನು ಕಡಿಮೆ ಮಾಡಬೇಕೇ? ಆಹಾರದ ವಿಷಯಕ್ಕೆ ಬಂದರೆ ವಿವಿಧ ಪ್ರಕಾರದ ಗೊಂದಲಗಳು ಎದುರಾಗುತ್ತವೆ ಎಂದು ಪೌಷ್ಟಿಕ ತಜ್ಞರು ಗಮನಿಸುತ್ತಾರೆ. ನಿಮ್ಮ ಆಹಾರದಲ್ಲಿ ಕಾರ್ಬೋಹೈಡ್ರೇಟ್‌ಗಳ ಸೇವನೆಗೂ ಕೂಡ ಅನ್ವಯಿಸುತ್ತದೆ. ಇತರ ಪೋಷಕಾಂಶಗಳಂತೆ ನಮ್ಮ ದೇಹಕ್ಕೆ ಕಾರ್ಬೋಹೈಡ್ರೇಟ್‌ಗಳು ಸಹ ಬೇಕಾಗುತ್ತವೆ. ಆಹಾರದಿಂದ ಅವುಗಳನ್ನು ಸಂಪೂರ್ಣವಾಗಿ ತೆಗೆದುಹಾಕುವುದರಿಂದ ಗಂಭೀರ ಆರೋಗ್ಯ...

ಐಪಿಎಲ್‌ನಲ್ಲಿ ಟೂರ್ನಿಯಲ್ಲಿ ಇಂದಿಗೂ ಕೊಹ್ಲಿಯೇ ಕಿಂಗ್

ಐಪಿಎಲ್‌ನಲ್ಲಿ ಟೂರ್ನಿಯಲ್ಲಿ ಇಂದಿಗೂ ಕೊಹ್ಲಿಯೇ ಕಿಂಗ್

ಮಾರ್ಚ್ ೨೮ರಿಂದ ಆರಂಭವಾಗಿರುವ ವಿಶ್ವದ ಶ್ರೀಮಂತ ಕ್ರಿಕೆಟ್ ಟೂರ್ನಿಯತ್ತ ಎಲ್ಲರ ಚಿತ್ತ ನೆಟ್ಟಿದೆ. ಟೂರ್ನಿಯಲ್ಲಿ ಮೊದಲಿನಿಂದಲೂ ಬ್ಯಾಟರ್‌ಗಳ ಅಬ್ಬರ ಜೋರಾಗಿದೆ. ಹಾಗಿದ್ದರೆ ಒಟ್ಟಾರೆ ಲೀಗ್‌ನಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಬ್ಯಾಟರ್ ಯಾರು ಗೊತ್ತೇ?. ಟಿ೨೦ ಫಾರ್ಮೆಟ್‌ಗೆ ಹೊಸ ಹೊಳಪು ನೀಡಿದ್ದು ಐಪಿಎಲ್ (IPL 2026). ಈ ಲೀಗ್ ಆರಂಭವಾದಾಗ ಇಷ್ಟು ದೊಡ್ಡದಾಗಿ ಬೆಳೆಯುತ್ತದೆ ಎಂದು ಯಾರೊಬ್ಬರೂ ಊಹಿಸಿರಲು ಸಾಧ್ಯವೇ ಇರಲಿಲ್ಲ. ಆದರೆ ಕಳೆದ ೧೯ ವರ್ಷಗಳಲ್ಲಿ ಈ ಲೀಗ್ ಬೆಳೆದು ನಿಂತ ಪರಿ ಅಮೋಘ. ಈ ಲೀಗ್‌ನಲ್ಲಿ ಬ್ಯಾಟರ್ ಅಬ್ಬರ ಜೋರಾಗಿರುತ್ತದೆ. ಬೌಲರ್‌ಗಳ ರಣ ತಂತ್ರವನ್ನು ಬುಡಮೇಲು ಮಾಡಿ ರನ್ ವೇಗಕ್ಕೆ ಚುರುಕು ಮುಟ್ಟಿಸುವ ಬ್ಯಾಟರ್‌ಗಳು, ತಮ್ಮ ಅಭಿಮಾನಿಗಳ ಮನದಲ್ಲಿ ಶಾಶ್ವತ ಸ್ಥಾನವನ್ನು ಪಡೆದಿದ್ದಾರೆ. ಇಂದಿಗೂ ಕೊಹ್ಲಿಯೇ ಕಿಂಗ್ ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಆಟಗಾರರ ಪಟ್ಟಿಯನ್ನು ಒಮ್ಮೆ ನೋಡಿದಾಗ, ಈ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿ ವಿರಾಟ್ ಕೊಹ್ಲಿ ಕಾಣಿಸಿಕೊಳ್ಳುತ್ತಾರೆ. ಇವರು ಈಗಾಗಲೇ ೧೮ ಆವೃತ್ತಿಗಳನ್ನು ಒಂದೇ ತಂಡದ...

ಬೆಂಗಳೂರು ಕರಗ ವಿಶೇಷತೆ

ಬೆಂಗಳೂರು ಕರಗ ವಿಶೇಷತೆ

ಬೆಂಗಳೂರು ಕರಗ ಉತ್ಸವ ಜನಪ್ರಿಯ ಕಾರ್ಯಕ್ರಮಗಳಲ್ಲಿ ಒಂದು. ಬೆಂಗಳೂರು ಕರಗವು ೮ ಶತಮಾನಗಳ ಇತಿಹಾಸವನ್ನ ಹೊಂದಿದೆ. ಆದಿ ಶಕ್ತಿ ಸ್ವರೂಪಿಣಿಯಾದ ದ್ರೌಪದಿ ಆರಾಧನೆಗಾಗಿ ಮೀಸಲಿಡಲಾಗಿದೆ. ಕರಗವನ್ನು ಬೆಂಗಳೂರಿನ ಗ್ರಾಮ ಉತ್ಸವ ಎಂದು ಸಹ ಕರೆಯಲಾಗುತ್ತದೆ. ಹಿಂದೂ ಮತ್ತು ಮುಸ್ಲಿಂರ ಏಕತೆಯನ್ನು ಪ್ರದರ್ಶಿಸಲು ಕರಗ ಆಚರಣೆ ಮಾಡಲಾಗುತ್ತದೆ. ಪ್ರತಿ ವರ್ಷ ಚೈತ್ರ ಶುದ್ಧ ಸಪ್ತಮಿಯ ದಿನದಿಂದ ಉತ್ಸವ ಆರಂಭವಾಗುತ್ತದೆ. ಕರಗದ ಹಿಂದಿನ ದಿನದಿಂದಲೇ ಧರ್ಮರಾಯಸ್ವಾಮಿ ದೇಗುಲದಲ್ಲಿ ಪೂಜೆ ನಡೆಯುತ್ತೆ. ಕರಗದ ಅರ್ಥ ಕರಗ ಎಂಬ ಮಾತಿಗೆ ‘ಕುಂಭ’ ಎನ್ನುವ ಅರ್ಥವೂ ಇದೆ. ಕರಗದ ಒಂದೊAದು ಅಕ್ಷರ ಒಂದೊAದು ಸಂಕೇತ ಹೊಂದಿವೆ. ಕ-ಕೈಯಿಂದ ಮುಟ್ಟದೆ, ರ-ರುಂಡದ ಮೇಲೆ ಧರಿಸಿ, ಗ-ಗತಿಸುವುದು. ಕರಗ ಪೂಜೆ ತಮಿಳುನಾಡಿನಲ್ಲಿ ಬಹು ಹಿಂದಿನಿAದಲೂ ಇದೆ. ಬೆಂಗಳೂರು ಮಾತ್ರವಲ್ಲದೆ ಅನೇಕ ಕಡೆ ಕರಗ ಆಚರಣೆ ರೂಢಿಯಲ್ಲಿದೆ.  ಮಲ್ಲಿಗೆ ಹೂವಿನ ಕರಗವನ್ನು ತಲೆ ಮೇಲೆ ಹೊತ್ತ ಪೂಜಾರಿ ನೃತ್ಯ ಮಾಡುತ್ತಾ ದೇಗುಲದಿಂದ ಹೊರ ಬರ್ತಾರೆ. ಅನೇಕ ದೇವಸ್ಥಾನಗಳಿಂದ ಕರಗ ವೇಷಧಾರಿಗಳು ಈ ದೇಗುಲಕ್ಕೆ...

ಸಂಪತ್ತು, ಆರೋಗ್ಯ, ಶಾಂತಿಗೆ ಫೆಂಗ್‌ಶುಯಿ ಬಿದಿ

ಸಂಪತ್ತು, ಆರೋಗ್ಯ, ಶಾಂತಿಗೆ ಫೆಂಗ್‌ಶುಯಿ ಬಿದಿ

ವಾಸ್ತು ಪ್ರಕಾರ ಬಿದಿರು ಗಿಡವನ್ನು ಮನೆಯಲ್ಲಿ ಇಡುವುದು ಶುಭದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇದು ಕೇವಲ ಅಲಂಕಾರಿಕ ಸಸ್ಯವಷ್ಟೇ ಅಲ್ಲ, ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಿಸಿ, ನಕಾರಾತ್ಮಕತೆಯನ್ನು ಕಡಿಮೆ ಮಾಡುತ್ತದೆ ಎಂಬ ನಂಬಿಕೆ ಇದೆ. ಬಿದಿರು ಗಿಡವು ದೌರ್ಭಾಗ್ಯವನ್ನು ದೂರ ಮಾಡಿ, ಯಶಸ್ಸು, ಕೀರ್ತಿ, ಆರೋಗ್ಯ ಮತ್ತು ಸಮೃದ್ಧಿಯನ್ನು ಆಕರ್ಷಿಸುತ್ತದೆ ಎಂದು ಹೇಳಲಾಗುತ್ತದೆ. ಜೊತೆಗೆ ಕುಟುಂಬದ ಸದಸ್ಯರ ನಡುವಿನ ಬಾಂಧವ್ಯವನ್ನು ಗಟ್ಟಿಗೊಳಿಸಿ, ಮನೆಯಲ್ಲಿ ಸಂತೋಷದ ವಾತಾವರಣವನ್ನು ನಿರ್ಮಿಸುತ್ತದೆ. ವಾಸ್ತು ಪ್ರಕಾರ ಬಿದಿರು ಗಿಡವನ್ನು ಇಡುವುದಕ್ಕೆ ಅತ್ಯುತ್ತಮ ದಿಕ್ಕು ಪೂರ್ವ ದಿಕ್ಕು. ಈ ದಿಕ್ಕು ಆರೋಗ್ಯ ಮತ್ತು ಬೆಳವಣಿಗೆಗೆ ಸಂಬಂಧಿಸಿದೆ ಎಂದು ನಂಬಲಾಗುತ್ತದೆ. ಪೂರ್ವದಲ್ಲಿ ಇಟ್ಟರೆ ಮನೆಯಲ್ಲಿ ಶಾಂತಿ, ಸಮತೋಲನ ಮತ್ತು ಆರ್ಥಿಕ ಪ್ರಗತಿ ಕಂಡುಬರುತ್ತದೆ. ಕಚೇರಿಯಲ್ಲಿ ಇಟ್ಟರೆ ನಿಮ್ಮ ವೃತ್ತಿಜೀವನದಲ್ಲಿ ಬೆಳವಣಿಗೆ ಮತ್ತು ಹೊಸ ಅವಕಾಶಗಳನ್ನು ತರುತ್ತದೆ. ೨–೩ ಅಡಿ ಎತ್ತರದ ಗಿಡಗಳನ್ನು ಇಡುವುದು ಉತ್ತಮ. ಬಿದಿರಿನ ೨ ಕಾಂಡಗಳು – ದಾಂಪತ್ಯ ಪ್ರೀತಿ ಮತ್ತು ಸಂಬಂಧ ಬಲಪಡಿಸಲು, ೩ ಕಾಂಡಗಳು –...

ಮನೆಯಲ್ಲಿ ಬಿದಿರು ಗಿಡ ಇಟ್ಟರೆ ಅದೃಷ್ಟ ಹೆಚ್ಚಳ! ಈ ವಾಸ್ತು ನಿಯಮ ಪಾಲಿಸಿದರೆಮಾತ್ರ

ಮನೆಯಲ್ಲಿ ಬಿದಿರು ಗಿಡ ಇಟ್ಟರೆ ಅದೃಷ್ಟ ಹೆಚ್ಚಳ! ಈ ವಾಸ್ತು ನಿಯಮ ಪಾಲಿಸಿದರೆಮಾತ್ರ

ವಾಸ್ತು ಪ್ರಕಾರ ಬಿದಿರು ಗಿಡವನ್ನು ಮನೆಯಲ್ಲಿ ಇಡುವುದು ಶುಭಕರ. ಇದು ನಕಾರಾತ್ಮಕ ಶಕ್ತಿಯನ್ನು ದೂರ ಮಾಡಿ, ಆರೋಗ್ಯ, ಸಂಪತ್ತು ಮತ್ತು ಸಂತೋಷವನ್ನು ಹೆಚ್ಚಿಸುತ್ತದೆ. ವಿಶೇಷವಾಗಿ ಪೂರ್ವ ದಿಕ್ಕಿನಲ್ಲಿ ಇಟ್ಟರೆ ಉತ್ತಮ ಫಲ ಸಿಗುತ್ತದೆ. ಇದರ ಸಂಪೂರ್ಣ ಮಾಹಿತಿ ಇಲ್ಲಿದೆ.

2 ನಿಮಿಷದಲ್ಲಿ ಸಿಲಿಂಡರ್ ತುಂಬುವ ಎಲ್ಪಿಜಿ ಎಟಿಎಂ!

2 ನಿಮಿಷದಲ್ಲಿ ಸಿಲಿಂಡರ್ ತುಂಬುವ ಎಲ್ಪಿಜಿ ಎಟಿಎಂ!

ಅನಿಲ ಕೊರತೆಯಿಂದಾಗಿ ಜನ ಸಿಲಿಂಡರ್ ಹಿಡಿದು ಗ್ಯಾಸ್ ಏಜೆನ್ಸಿಗಳೆದುರು ಸಾಲಲ್ಲಿ ನಿಲ್ಲುತ್ತಿರುವುದು ಸರ್ವೇಸಾಮಾನ್ಯವಾಗಿರುವ ನಡುವೆ, ಹರ್ಯಾಣದ ಗುರುಗ್ರಾಮದಲ್ಲಿ ೨-೩ ನಿಮಿಷದಲ್ಲಿ ಎಲ್‌ಪಿಜಿ ಅನಿಲ ಕೊಡುವ ಎಟಿಎಂ ಅನ್ನು ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿ.(ಬಿಪಿಸಿಎಲ್) ಸ್ಥಾಪಿಸಿದೆ. ಅನಿಲ ಕೊರತೆಯಿಂದಾಗಿ ಜನ ಸಿಲಿಂಡರ್ ಹಿಡಿದು ಗ್ಯಾಸ್ ಏಜೆನ್ಸಿಗಳೆದುರು ಸಾಲಲ್ಲಿ ನಿಲ್ಲುತ್ತಿರುವುದು ಸರ್ವೇಸಾಮಾನ್ಯವಾಗಿರುವ ನಡುವೆ, ಹರ್ಯಾಣದ ಗುರುಗ್ರಾಮದಲ್ಲಿ ೨-೩ ನಿಮಿಷದಲ್ಲಿ ಎಲ್‌ಪಿಜಿ ಅನಿಲ ಕೊಡುವ ಎಟಿಎಂ ಅನ್ನು ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿ.(ಬಿಪಿಸಿಎಲ್) ಸ್ಥಾಪಿಸಿದೆ. ಇದು ಪ್ರಾಯೋಗಿಕವಾಗಿ ಜಾರಿಯಲ್ಲಿದ್ದು, ಯಶಸ್ವಿಯಾದರೆ ದೇಶದ ಇತರ ಭಾಗಗಳಿಗೆ ವಿಸ್ತರಿಸುವ ಉದ್ದೇಶವಿದೆ. ಸೋಹ್ನಾ ಪ್ರದೇಶದಲ್ಲಿರುವ ಇದು ಇಡೀ ದಿನ ತೆರೆದಿರಲಿದೆ. ಇಲ್ಲಿ ಸಾಂಪ್ರದಾಯಿಕ ಕಬ್ಬಿಣದ ಸಿಲಿಂಡರ್‌ಗಳ ಬದಲು ಅದರ ಅರ್ಧದಷ್ಟು ತೂಕದ (೧೫ ಕಿ.ಮೀ.), ಫೈಬರ್‌ನಿಂದ ಮಾಡಲ್ಪಟ್ಟ ಕಾಂಪೊಸಿಟ್ ಸಿಲಿಂಡರ್‌ಗಳಲ್ಲಿ ಅನಿಲ ಕೊಡಲಾಗುವುದು. ಸದ್ಯ ಈ ಎಟಿಎಂನಲ್ಲಿ ೧೦ ಕೆ.ಜಿ. ಅನಿಲ ತುಂಬಿದ ೧೦ ಸಿಲಿಂಡರ್‌ಗಳು ಇವೆ. ಇವುಗಳನ್ನು ಜನರು ನೇರವಾಗಿ ಹೋಗಿ ಪಡೆಯಬಹುದು. ಎಟಿಎಂನಲ್ಲಿ ೧೦ ಸಿಲಿಂಡರ್ ಭರ್ತಿ...

ಅಮೆರಿಕದ ೨೫೦ನೇ ವರ್ಷಾಚರಣೆಗೆ ಟ್ರಂಪ್ ಚಿತ್ರವುಳ್ಳ ನಾಣ್ಯ!

ಅಮೆರಿಕದ ೨೫೦ನೇ ವರ್ಷಾಚರಣೆಗೆ ಟ್ರಂಪ್ ಚಿತ್ರವುಳ್ಳ ನಾಣ್ಯ!

ಅಮೆರಿಕ ದೇಶ ರಚನೆಯಾಗಿ ಜು.೪ಕ್ಕೆ ೨೫೦ನೇ ವರ್ಷಕ್ಕೆ ಕಾಲಿಡುತ್ತಿರುವ ಹಿನ್ನೆಲೆ ಅಲ್ಲಿನ ಸರ್ಕಾರ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭಾವಚಿತ್ರವುಳ್ಳ ಚಿನ್ನದ ನಾಣ್ಯವನ್ನು ಬಿಡುಗಡೆ ಮಾಡುವುದಕ್ಕೆ ಮುಂದಾಗಿದೆ.ಅಮೆರಿಕದ ಕಾನೂನು ಪ್ರಕಾರ ಅಧ್ಯಕ್ಷರು ಬದುಕಿರುವಾಗಲೇ ನಾಣ್ಯದಲ್ಲಿ ಅವರ ಫೋಟೋ ಬಳಸುವಂತಿಲ್ಲ. ಆದರೆ ಇದು ಸ್ಮರಣಾರ್ಥ ನಾಣ್ಯವಾಗಿರುವ ಕಾರಣ, ಚಲಾವಣೆಯಲ್ಲಿರುವ ಕರೆನ್ಸಿಗಿಂತ ಭಿನ್ನ. ಹೀಗಾಗಿ ಟ್ರಂಪ್ ಫೋಟೋ ಬಳಕೆಯಾಗಿದೆ. ೨೪ ಕ್ಯಾರೆಟ್ ಚಿನ್ನದ ನಾಣ್ಯದಲ್ಲಿ ಟ್ರಂಪ್ ಮುಷ್ಟಿ ಹಿಡಿದು ರೆಸಲ್ಯೂಟ್ ಮೇಜಿನ ಮೇಲೆ ಒರಗಿರುವುದನ್ನು ನೋಡಬಹುದು. ಅಮೆರಿಕದಲ್ಲಿ ಹಾಲಿ ಅಧ್ಯಕ್ಷರ ಫೋಟೋ ನಾಣ್ಯದ ಮೇಲೆ ಕಾಣಿಸಿಕೊಂಡಿರುವುದು ಇದು ಎರಡನೇ ಬಾರಿ. ಇದಕ್ಕೂ ಮೊದಲು ಅಮೆರಿಕದ ೩೦ನೇ ಅಧ್ಯಕ್ಷ ಕ್ಯಾಲ್ವಿನ್ ಕೂಲಿಡ್ಜ್ ಅವರ ಚಿತ್ರವು ಅಮೆರಿಕಕ್ಕೆ ಸ್ವಾತಂತ್ರ‍್ಯ ದೊರೆತ ೧೫೦ನೇ ವರ್ಷಾಚರಣೆಗಾಗಿ ೧೯೨೬ರಲ್ಲಿ ಬಿಡುಗಡೆಗೊಳಿಸಲಾಗಿತ್ತು.

ಭಾವನಾ ರಾಮಣ್ಣ ಮಗಳ ಹೆಸರು ರುಕ್ಮಿಣಿ-ತನ್ನ ಅಜ್ಜಿಯ  ಹೆಸರನ್ನೇ ಪುತ್ರಿಗಿಟ್ಟ ನಟಿ

ಭಾವನಾ ರಾಮಣ್ಣ ಮಗಳ ಹೆಸರು ರುಕ್ಮಿಣಿ-ತನ್ನ ಅಜ್ಜಿಯ ಹೆಸರನ್ನೇ ಪುತ್ರಿಗಿಟ್ಟ ನಟಿ

ಐವಿಎಫ್ ಮೂಲಕ ಕಳೆದ ಆಗಸ್ಟ್ನಲ್ಲಿ ಹೆಣ್ಣುಮಗುವಿಗೆ ಜನ್ಮನೀಡಿದ್ದ ನಟಿ ಭಾವನಾ ರಾಮಣ್ಣ ಇದೀಗ ಮಗಳಿಗೆ ನಾಮಕರಣ ಶಾಸ್ತ್ರ ಮಾಡಿದ್ದಾರೆ. ಈ ವೇಳೆ ಮಗಳಿಗೆ ತನ್ನ ಅಜ್ಜಿ ರುಕ್ಮಿಣಿ ಹೆಸರನ್ನೇ ಇಟ್ಟಿದ್ದಾರೆ. ಕುಟುಂಬಸ್ಥರು, ಸ್ನೇಹಿತರು ಹಾಗೂ ಆಪ್ತರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ವಿವಾಹವಾಗದೇ ಸಿಂಗಲ್ ಮದರ್ ಆಗಿ ಮಗಳನ್ನು ಬೆಳೆಸುವುದಾಗಿ ತಿಳಿಸಿರುವ ಭಾವನಾ ಸದ್ಯ ಮಗಳ ಪಾಲನೆಯಲ್ಲಿ ತೊಡಗಿಸಿಕೊಂಡಿದ್ದಾರೆ.

  • 1
  • 2
  • 9