ತಂತ್ರಜ್ಞಾನ ಬೆಳೆದಂತೆ ಪ್ರತಿಯೊಂದು ಕ್ಷೇತ್ರದಲ್ಲೂ ವಿಭಿನ್ನ ರೀತಿಯ ಬದಲಾವಣೆಗಳಾಗುತ್ತಿವೆ. ಸ್ವತಂತ್ರ ಪೂರ್ವದಲ್ಲಿ ರೇಡಿಯೋ, ಟಿವಿ ಹೀಗೆ ಒಂದಾದ ಮೇಲೊಂದರಂತೆ ಹೊಸ ಹೊಸ ವಸ್ತುಗಳು ಆವಿಷ್ಕಾರವಾದವು. ಅವುಗಳನ್ನೇ ಇಟ್ಟುಕೊಂಡು ಅದರಲ್ಲಿ ವಿಭಿನ್ನ ತಂತ್ರಜ್ಞಾನಗಳ ಅಳವಡಿಕೆ ಶುರುವಾಯಿತು. ಅಲ್ಲಿಂದ ಆರಂಭವಾದ ತಂತ್ರಜ್ಞಾನ ಯುಗ ಪ್ರಸ್ತುತ ಎಲ್ಲಾ ಕ್ಷೇತ್ರಗಳಲ್ಲಿಯೂ ಅನಿವಾರ್ಯವಾಗಿಬಿಟ್ಟಿದೆ. ಇದೀಗ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದಂತೆಯೇ ಎಲ್ಲಾ ಕ್ಷೇತ್ರಗಳಲ್ಲಿಯೂ ವಿಭಿನ್ನವಾಗಿ ಕಾರ್ಯನಿರ್ವಹಿಸುತ್ತಿದೆ. ಆರಂಭದಲ್ಲಿ ಕೇವಲ ಮಾಹಿತಿ ಕೊಡುವ ಉದ್ದೇಶದಿಂದ ಕಾಲಿಟ್ಟ ಕೃತಕ ಬುದ್ಧಿಮತ್ತೆ ಈಗ ಹಂತ ಹಂತವಾಗಿ ಬದಲಾಗುತ್ತಿದೆ. ಇದೀಗ...
Author: Leader Judgement (Leader Judgement)
ವಸಂತರಾಜ ಬಂದ
ವಸಂತರಾಜ ಬಂದ ತಾಜಾ ಮನಸಿನೊಂದಿಗೆ ಬಂದ ಉತ್ಸಾಹದಿ ವಸಂತ ರಮ್ಯಕಾಲದಲಿ ಶಿಶಿರದ ವೇದನೆಗೆ ತೇಪೆ ಹಾಕಲು ಓಡೋಡಿ ಬಂದ ನೇಸರನ ಹೊಂಗಿರಣಗಳಿAದ ಕ್ಷಿಪ್ರತೆಯ ನೋವು ನಿವಾರಿಸಿದ ಅಳುಕಿನ ಮನಸಿಗೆ ಬೆಳಕಿನ ಸಮ್ಮಿಶ್ರ ನೆರಳಿನ ನೋಟ ಸಣ್ಣನೆಯ ನರಳಿಕೆಗೆ ತಣ್ಣನೆಯ ತಂಗಾಳಿ ಬೀಸಿ ನೆನಯದಂತೆ, ನೊಂದು ನೆನೆಗುದಿಕೆ ಬೀಳದಂತೆ ಭರವಸೆಯಾಗಿ ಮತ್ತೆ ಬಂದು ಹೊಸತೇನೋ ಹೊತ್ತು ತಂದು ಸುವೃಷ್ಟಿಯ ವಸಂತರಾಜ
ಪ್ರಕೃತಿಯಲ್ಲಿ ಚಿಗುರೆಲೆಗಳ ಹೊಸತನದ ಹಸಿರು ಯುಗಾದಿ ಹಬ್ಬ
-ಹನುಮಂತ.ಮ.ದೇಶಕುಲಕರ್ಣಿ. ಪ್ರಕೃತಿಯಲ್ಲಿ ಚಿಗುರೆಲೆಗಳ ಹೊಸತನದ ಹಸಿರು ಕಾಣಿಸಿಕೊಂಡು ಅವು ನವಜೀವನವನ್ನು ಪಡೆದುಕೊಳ್ಳುವುದರ ಮೂಲಕ ವಸಂತಾಗಮನವನ್ನು ಸಾರುತ್ತವೆ. ಹಿಂದೂ ಧರ್ಮದ ಪ್ರಕಾರ, ಸೃಷ್ಟಿಕರ್ತನಾದ ಬ್ರಹ್ಮ ತನ್ನ ಸೃಷ್ಟಿಕಾರ್ಯವನ್ನು ಚೈತ್ರಮಾಸದ ತಿಂಗಳಿನಲ್ಲಿ ಆರಂಭಿಸಿದನೆಂದು ನಂಬಲಾಗಿದೆ. ಮರಗಿಡಗಳು ಹಣ್ಣು ಹೂವುಗಳನ್ನು ನೀಡಲು ಪ್ರಾರಂಭಿಸಿದಂತೆ ಹೊಸ ಜೀವನದ ಆರಂಭಕ್ಕೆ ಯುಗಾದಿ ಕಾರಣವಾಗಿದೆ. ಈ ಹಬ್ಬವು ದಕ್ಷಿಣ ಭಾರತದ ರಾಜ್ಯಗಳಾದ ಆಂಧ್ರಪ್ರದೇಶ ಹಾಗೂ ಕರ್ನಾಟಕ ರಾಜ್ಯಗಳ ಜನರ ಪಾಲಿಗೆ ಈ ಹಬ್ಬವು ಅತ್ಯಂತ ಮಹತ್ತರ ಹಬ್ಬವಾಗಿರುತ್ತದೆ. ಆಂಧ್ರಪ್ರದೇಶ ಹಾಗೂ ಕರ್ನಾಟಕ ರಾಜ್ಯಗಳ ಜನರು...
ಕಾಂಗ್ರೆಸ್–ಬಿಜೆಪಿ ನಡುವೆ ಜಾಹೀರಾತು ಸಮರ
ಕಾಂಗ್ರೆಸ್ ಹಾಗೂ ಬಿಜೆಪಿ ನಡುವಿನ ರಾಜಕೀಯ ಜಾಹೀರಾತು ಸಮರ ತೀವ್ರಗೊಂಡಿದ್ದು, ವಿಬಿ–ಜಿ ರಾಮ್ ಜಿ ಯೋಜನೆ ಜಾಹೀರಾತಿನ ಮೂಲಕ ಬಿಜೆಪಿ ಕಾಂಗ್ರೆಸ್ಗೆ ತಿರುಗೇಟು ನೀಡಿದೆ. ಈ ಹಿಂದೆ ಕಾಂಗ್ರೆಸ್ ಸರ್ಕಾರ ಮನ್ರೇಗಾ ಯೋಜನೆ ಕುರಿತಾಗಿ ಜಾಹೀರಾತುಗಳನ್ನು ಬಿಡುಗಡೆ ಮಾಡಿದ್ದು, ಅದಕ್ಕೆ ಪ್ರತಿಯಾಗಿ ಬಿಜೆಪಿ ಇದೀಗ ಕೇಂದ್ರ ಸರ್ಕಾರದ ವಿಬಿ–ಜಿ ರಾಮ್ ಜಿ ಕಾಯಿದೆಯನ್ನು ಮುಂದಿಟ್ಟುಕೊAಡು ಪ್ರಚಾರಕ್ಕೆ ಇಳಿದಿದೆ. ಶ್ರಮಿಕರ ಬದುಕಿಗೆ ಭರವಸೆಯ ಯೋಜನೆಯಾಗಿ ವಿಬಿ–ಜಿ ರಾಮ್ ಜಿ ಕಾಯಿದೆಯನ್ನು ಬಿಂಬಿಸಿರುವ ಬಿಜೆಪಿ, ಈ ಜಾಹೀರಾತಿನಲ್ಲಿ ಕಾರ್ಮಿಕರ ಕಲ್ಯಾಣ...
ವಿಶ್ವ ಭೂಮಿ ದಿನ ಏ. ೨೨
ಭೂಮಿ ರಕ್ಷಣೆ ನಮ್ಮ ಹೊಣೆ ಹವಾಮಾನ ಏರಿಕೆಯ ಪರಿಣಾಮಗಳನ್ನು ದಿನದಿನವೂ ನೋಡುತ್ತಿದ್ದೇವೆ. ಎಲ್ಲರನ್ನೂ ಪೊರೆಯುವ ತಾಯಿ ಎನಿಸಿರುವ ಭೂಮಿ ಮುನಿಸಿಕೊಂಡಿದ್ದಾಳೆ. ಮಾನವ ಕುಲ ಭೂತಾಯಿಯನ್ನು ನಿರ್ದಾಕ್ಷಿಣ್ಯವಾಗಿ ಕಠಿಣವಾಗಿ ನಡೆಸಿಕೊಂಡ ಪರಿಣಾಮವೇ ಹವಾಮಾನ ಏರಿಕೆ. ಭೂಗ್ರಹದ ವ್ಯವಸ್ಥೆಯಲ್ಲಿ ಚೂರೇ ಚೂರು ವ್ಯತ್ಯಾಸವಾದರೂ ಎಲ್ಲರೂ ಏರುಪೇರಾಗುತ್ತದೆ. ಭೂಮಿಯೆಂದರೆ ಬೇರೆಯಲ್ಲ, ಸಕಲ ನೈಸರ್ಗಿಕ ವ್ಯವಸ್ಥೆಗಳು ಬೇರೆಯಲ್ಲ. ಅವೆಲ್ಲ ಚೆನ್ನಾಗಿದ್ದರೆ ಮಾತ್ರ ಭೂಮಿ ಚೆನ್ನಾಗಿರುತ್ತದೆ. ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಭೂಮಿಯನ್ನು ಇಂಚಿಂಚೂ ಕಬಳಿಸಿದ್ದಾನೆ. ಹೀಗಾಗಿ, ವರ್ಷದಿಂದ ವರ್ಷಕ್ಕೆ ತಾಪಮಾನ ಏರಿಕೆ ಆಗುತ್ತಲೇ ಇದೆ....
ವಿಶ್ವ ಆರೋಗ್ಯ ದಿನದ ಇತಿಹಾಸ
ವಿಶ್ವ ಆರೋಗ್ಯ ದಿನದ ಬಗ್ಗೆ ಮಾತನಾಡಲು, ನಾವು ಒಟ್ಟಾರೆಯಾಗಿ ವಿಶ್ವ ಆರೋಗ್ಯ ಸಂಸ್ಥೆಯ ರಚನೆಯ ಬಗ್ಗೆ ಮಾತನಾಡಬೇಕು. ಡಿಸೆಂಬರ್ ೧೯೪೫ ರಲ್ಲಿ, ಬ್ರೆಜಿಲ್ ಮತ್ತು ಚೀನಾದ ಅಧಿಕಾರಿಗಳು ಅಂತರರಾಷ್ಟ್ರೀಯ ಆರೋಗ್ಯ ಸಂಸ್ಥೆಯ ರಚನೆಯನ್ನು ಪ್ರಸ್ತಾಪಿಸಿದರು, ಅದು ಸರ್ವವ್ಯಾಪಿ ಮತ್ತು ಯಾವುದೇ ಸರ್ಕಾರಿ ಅಧಿಕಾರಗಳಿಂದ ಸಂಪೂರ್ಣವಾಗಿ ಸ್ವತಂತ್ರವಾಗಿದೆ. ಅರ್ಧ ವರ್ಷದ ನಂತರ, ನ್ಯೂಯಾರ್ಕ್ನಲ್ಲಿ, ಜುಲೈ ೧೯೪೬ ರಲ್ಲಿ, ವಿಶ್ವ ಆರೋಗ್ಯ ಸಂಸ್ಥೆಯ ಸಂವಿಧಾನವನ್ನು ಅಂಗೀಕರಿಸಲಾಯಿತು. ಈ ಸಂವಿಧಾನವು ಏಪ್ರಿಲ್ ೭, ೧೯೪೮ ರಂದು ಜಾರಿಗೆ ಬಂದಿತು, ೬೧ ದೇಶಗಳು...
ಕಾರ್ಬೋಹೈಡ್ರೇಟ್ ಮತ್ತು ಕೊಬ್ಬು: ಇವರಡರಲ್ಲಿ ಆರೋಗ್ಯಕ್ಕೆ ಯಾವುದು ಹೆಚ್ಚು ಹಾನಿಕಾರಕ
ಕಾರ್ಬೋಹೈಡ್ರೇಟ್ ಹೆಚ್ಚಿರುವ ಆಹಾರದಿಂದ ತೂಕ ಹೆಚ್ಚಾಗುತ್ತದೆ. ಮಧುಮೇಹ, ಹೃದಯ ಸಂಬಂಧಿತ ಸಮಸ್ಯೆಗಳಿಗೆ ಕಾರಣವಾಗಬಹುದು. ಕಾರ್ಬೋಹೈಡ್ರೇಟ್ ದೇಹಕ್ಕೆ ಗ್ಲೂಕೋಸ್ ಒದಗಿಸುತ್ತವೆ. ಗ್ಲೂಕೋಸ್ ಹೆಚ್ಚಿರುವುದು ಹಾನಿಕಾರಕವಾಗಿದೆ ಎಂದು ಆರೋಗ್ಯ ತಜ್ಞರು ತಿಳಿಸಿದ್ದಾರೆ. ಆರೋಗ್ಯಕರ ದೇಹವನ್ನು ಕಾಪಾಡಿಕೊಳ್ಳಲು ಪೌಷ್ಟಿಕ ಆಹಾರ ಅವಶ್ಯವಾಗಿದೆ. ಪ್ರತಿಯೊಬ್ಬರೂ ಸಾಕಷ್ಟು ಹಸಿರು ತರಕಾರಿಗಳು ಮತ್ತು ಹಣ್ಣುಗಳನ್ನು ಸೇವಿಸುವುದು ಒಳ್ಳೆಯದು ಎಂದು ಆರೋಗ್ಯ ತಜ್ಞರು ಸಲಹೆ ನೀಡಿದ್ದಾರೆ. ಸಾಮಾನ್ಯವಾಗಿ ಫಿಟ್ನೆಸ್ಗೆ ಹೆಚ್ಚು ಒತ್ತು ನೀಡುವವರು ತಮ್ಮ ಆಹಾರದಿಂದ ಕಾರ್ಬೋಹೈಡ್ರೇಟ್ಗಳನ್ನು ತೆಗೆದುಹಾಕುವುದನ್ನು ಹೆಚ್ಚಾಗಿ ಕಾಣಬಹುದು. ಆದರೆ, ಕಾರ್ಬೋಹೈಡ್ರೇಟ್ಗಳು ನಿಜವಾಗಿಯೂ ಹಾನಿಕಾರಕವೇ?...
ಐಪಿಎಲ್ನಲ್ಲಿ ಟೂರ್ನಿಯಲ್ಲಿ ಇಂದಿಗೂ ಕೊಹ್ಲಿಯೇ ಕಿಂಗ್
ಮಾರ್ಚ್ ೨೮ರಿಂದ ಆರಂಭವಾಗಿರುವ ವಿಶ್ವದ ಶ್ರೀಮಂತ ಕ್ರಿಕೆಟ್ ಟೂರ್ನಿಯತ್ತ ಎಲ್ಲರ ಚಿತ್ತ ನೆಟ್ಟಿದೆ. ಟೂರ್ನಿಯಲ್ಲಿ ಮೊದಲಿನಿಂದಲೂ ಬ್ಯಾಟರ್ಗಳ ಅಬ್ಬರ ಜೋರಾಗಿದೆ. ಹಾಗಿದ್ದರೆ ಒಟ್ಟಾರೆ ಲೀಗ್ನಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಬ್ಯಾಟರ್ ಯಾರು ಗೊತ್ತೇ?. ಟಿ೨೦ ಫಾರ್ಮೆಟ್ಗೆ ಹೊಸ ಹೊಳಪು ನೀಡಿದ್ದು ಐಪಿಎಲ್ (IPL 2026). ಈ ಲೀಗ್ ಆರಂಭವಾದಾಗ ಇಷ್ಟು ದೊಡ್ಡದಾಗಿ ಬೆಳೆಯುತ್ತದೆ ಎಂದು ಯಾರೊಬ್ಬರೂ ಊಹಿಸಿರಲು ಸಾಧ್ಯವೇ ಇರಲಿಲ್ಲ. ಆದರೆ ಕಳೆದ ೧೯ ವರ್ಷಗಳಲ್ಲಿ ಈ ಲೀಗ್ ಬೆಳೆದು ನಿಂತ ಪರಿ ಅಮೋಘ. ಈ...
ಬೆಂಗಳೂರು ಕರಗ ವಿಶೇಷತೆ
ಬೆಂಗಳೂರು ಕರಗ ಉತ್ಸವ ಜನಪ್ರಿಯ ಕಾರ್ಯಕ್ರಮಗಳಲ್ಲಿ ಒಂದು. ಬೆಂಗಳೂರು ಕರಗವು ೮ ಶತಮಾನಗಳ ಇತಿಹಾಸವನ್ನ ಹೊಂದಿದೆ. ಆದಿ ಶಕ್ತಿ ಸ್ವರೂಪಿಣಿಯಾದ ದ್ರೌಪದಿ ಆರಾಧನೆಗಾಗಿ ಮೀಸಲಿಡಲಾಗಿದೆ. ಕರಗವನ್ನು ಬೆಂಗಳೂರಿನ ಗ್ರಾಮ ಉತ್ಸವ ಎಂದು ಸಹ ಕರೆಯಲಾಗುತ್ತದೆ. ಹಿಂದೂ ಮತ್ತು ಮುಸ್ಲಿಂರ ಏಕತೆಯನ್ನು ಪ್ರದರ್ಶಿಸಲು ಕರಗ ಆಚರಣೆ ಮಾಡಲಾಗುತ್ತದೆ. ಪ್ರತಿ ವರ್ಷ ಚೈತ್ರ ಶುದ್ಧ ಸಪ್ತಮಿಯ ದಿನದಿಂದ ಉತ್ಸವ ಆರಂಭವಾಗುತ್ತದೆ. ಕರಗದ ಹಿಂದಿನ ದಿನದಿಂದಲೇ ಧರ್ಮರಾಯಸ್ವಾಮಿ ದೇಗುಲದಲ್ಲಿ ಪೂಜೆ ನಡೆಯುತ್ತೆ. ಕರಗದ ಅರ್ಥ ಕರಗ ಎಂಬ ಮಾತಿಗೆ ‘ಕುಂಭ’ ಎನ್ನುವ...
ಸಂಪತ್ತು, ಆರೋಗ್ಯ, ಶಾಂತಿಗೆ ಫೆಂಗ್ಶುಯಿ ಬಿದಿ
ವಾಸ್ತು ಪ್ರಕಾರ ಬಿದಿರು ಗಿಡವನ್ನು ಮನೆಯಲ್ಲಿ ಇಡುವುದು ಶುಭದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇದು ಕೇವಲ ಅಲಂಕಾರಿಕ ಸಸ್ಯವಷ್ಟೇ ಅಲ್ಲ, ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಿಸಿ, ನಕಾರಾತ್ಮಕತೆಯನ್ನು ಕಡಿಮೆ ಮಾಡುತ್ತದೆ ಎಂಬ ನಂಬಿಕೆ ಇದೆ. ಬಿದಿರು ಗಿಡವು ದೌರ್ಭಾಗ್ಯವನ್ನು ದೂರ ಮಾಡಿ, ಯಶಸ್ಸು, ಕೀರ್ತಿ, ಆರೋಗ್ಯ ಮತ್ತು ಸಮೃದ್ಧಿಯನ್ನು ಆಕರ್ಷಿಸುತ್ತದೆ ಎಂದು ಹೇಳಲಾಗುತ್ತದೆ. ಜೊತೆಗೆ ಕುಟುಂಬದ ಸದಸ್ಯರ ನಡುವಿನ ಬಾಂಧವ್ಯವನ್ನು ಗಟ್ಟಿಗೊಳಿಸಿ, ಮನೆಯಲ್ಲಿ ಸಂತೋಷದ ವಾತಾವರಣವನ್ನು ನಿರ್ಮಿಸುತ್ತದೆ. ವಾಸ್ತು ಪ್ರಕಾರ ಬಿದಿರು ಗಿಡವನ್ನು ಇಡುವುದಕ್ಕೆ ಅತ್ಯುತ್ತಮ ದಿಕ್ಕು ಪೂರ್ವ...









