Home Leader Judgement

Author: Leader Judgement (Leader Judgement)

Post
ಆರ್‌ಸಿಬಿ Team ಗೆ ವಿರಾಟ್ ವಾರ್ನಿಂಗ್

ಆರ್‌ಸಿಬಿ Team ಗೆ ವಿರಾಟ್ ವಾರ್ನಿಂಗ್

ಐಪಿಎಲ್ ೨೦೨೬ ಸೀಸನ್ ಆರಂಭಕ್ಕೂ ಮುನ್ನವೇ ಆರ್‌ಸಿಬಿ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ (ತಂಡದ ಆಟಗಾರರಿಗೆ ಕಠಿಣ ಎಚ್ಚರಿಕೆ ನೀಡಿದ್ದಾರೆ. ತಂಡದ ತರಬೇತಿ ಶಿಬಿರದಲ್ಲಿ ಮಾತನಾಡಿದ ಕೊಹ್ಲಿ, ಈ ಸೀಸನ್ ಇನ್ನಷ್ಟು ಕಠಿಣವಾಗಲಿದೆ ಎಂದು ತಿಳಿಸಿದ್ದಾರೆ.  ಮಾರ್ಚ್ ೨೮ರಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಐಪಿಎಲ್ ೨೦೨೬ ಆರಂಭವಾಗಲಿದ್ದು, ಆರ್‌ಸಿಬಿ ಮೊದಲ ಪಂದ್ಯವನ್ನು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಆಡಲಿದೆ. ಈ ಹಿನ್ನೆಲೆ ಈಗಾಗಲೇ ತಂಡ ತಯಾರಿ ಆರಂಭಿಸಿದ್ದು, ಕೊಹ್ಲಿಯ ಭರ್ಜರಿ ಬ್ಯಾಟಿಂಗ್ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ....

Post
ಮೀನುಗಾರಿಕೆಗೂ ತಟ್ಟಿದ ಮಧ್ಯಪ್ರಾಚ್ಯ ಯುದ್ಧದ ಬಿಸಿ;

ಮೀನುಗಾರಿಕೆಗೂ ತಟ್ಟಿದ ಮಧ್ಯಪ್ರಾಚ್ಯ ಯುದ್ಧದ ಬಿಸಿ;

ಇಂಧನ ಸಂಕಷ್ಟ, ಆಳ ಸಮುದ್ರ ಮೀನುಗಾರಿಕೆಗೆ ಆತಂಕ ಕರಾವಳಿ ಆರ್ಥಕತೆ ಜೀವಾಳವೇ ಮೀನುಗಾರಿಕೆ. ಮಧ್ಯಪ್ರಾಚ್ಯದ ಯುದ್ಧದ ಬಿಸಿ ಮೀನುಗಾರಿಕೆಗೂ (fishing) ತಟ್ಟಿದೆ. ಕರಾವಳಿಯಲ್ಲಿ ಮೀನುಗಾರಿಕೆಗೆ ದೊಡ್ಡ ಸಂಕಷ್ಟ ಎದುರಾಗಿದೆ. ಡೀಸೆಲ್ ಕೊರತೆಯಿಂದಾಗಿ ಆಳ ಸಮುದ್ರ ಮೀನುಗಾರಿಕೆ ತೀವ್ರ ಆತಂಕಕ್ಕೆ ಒಳಗಾಗಿದೆ. ಪ್ರತಿದಿನ ಲಕ್ಷಾಂತರ ಲೀಟರ್ ಡೀಸೆಲ್ ಅವಲಂಬಿಸಿರುವ ಮೀನುಗಾರರು ಈಗ ಸಂಕಷ್ಟದ ಅಂಚಿನಲ್ಲಿದ್ದಾರೆ. ಕರಾವಳಿಯ ಆಳ ಸಮುದ್ರ ಮೀನುಗಾರಿಕೆ ಸಂಪೂರ್ಣವಾಗಿ ಡೀಸೆಲ್ ಪೂರೈಕೆಯನ್ನು ಅವಲಂಬಿಸಿದೆ. ಉಡುಪಿ-ಮಂಗಳೂರು ಭಾಗದಲ್ಲಿ ಪ್ರತಿದಿನ ೧೦ ರಿಂದ ೧೨ ಲಕ್ಷ ಲೀಟರ್ ಡೀಸೆಲ್...

Post
ವಿಶ್ವದ ಅತಿದೊಡ್ಡ LNG ಘಟಕದುರಸ್ತಿಗೆ ೫ ವರ್ಷಬೇಕು!

ವಿಶ್ವದ ಅತಿದೊಡ್ಡ LNG ಘಟಕದುರಸ್ತಿಗೆ ೫ ವರ್ಷಬೇಕು!

ಇರಾನ್ ಕ್ಷಿಪಣಿ ದಾಳಿಯಿಂದ ಹಾನಿಗೆ ಒಳಗಾಗಿರುವ ಕತಾರ್‌ನ ರಾಸ್ ಲಫಾನ್ ಘಟಕ ದುರಸ್ತಿಯಾಗಲು ೩ ರಿಂದ ೫ ವರ್ಷ ತಗಲುವ ಸಾಧ್ಯತೆಯಿದೆ. ಕತಾರ್‌ನ ಉತ್ತರ ದೋಹಾದಿಂದ ೮೦ ಕಿ.ಮೀ. ದೂರದ ರಾಸ್ ಲಫಾನ್ ಕೈಗಾರಿಕಾ ನಗರದಲ್ಲಿದ್ದ ಎಲ್‌ಎನ್‌ಜಿ ಘಟಕದ ಮೇಲೆ ಇರಾನ್ ಮಾರ್ಚ್ ೧೮, ೧೯ರಂದು ೨ ದಿನ ಬ್ಯಾಕ್ ಟು ಬ್ಯಾಕ್ ಮಿಸೈಲ್ ಅಟ್ಯಾಕ್ ಮಾಡಿದೆ. ಇದರಿಂದಾಗಿ ಆ ಪ್ರದೇಶದಲ್ಲಿ ಎಲ್‌ಎನ್‌ಜಿ (LNG) ಉತ್ಪಾದನೆ ಸ್ಥಗಿತವಾಗಿದ್ದು, ಜಾಗತಿಕ ಇಂಧನ ಪೂರೈಕೆಯಲ್ಲಿ ಭಾರಿ ವ್ಯತ್ಯಯ ಆಗಿದೆ. ಎಲ್‌ಎನ್‌ಜಿ...

Post
ಮಧ್ಯಪ್ರಾಚ್ಯ ಸಂಘರ್ಷ: ಭಾರತದ ಪ್ರವಾಸೋದ್ಯಮ, ವಿಮಾನಯಾನ ಕ್ಷೇತ್ರಕ್ಕೆ ಆತಂಕ

ಮಧ್ಯಪ್ರಾಚ್ಯ ಸಂಘರ್ಷ: ಭಾರತದ ಪ್ರವಾಸೋದ್ಯಮ, ವಿಮಾನಯಾನ ಕ್ಷೇತ್ರಕ್ಕೆ ಆತಂಕ

ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಇತ್ತೀಚಿನ ಯುದ್ಧ ಪರಿಸ್ಥಿತಿ ಮತ್ತು ಉದ್ವಿಗ್ನತೆ ಜಾಗತಿಕ ವಿಮಾನಯಾನ ಮತ್ತು ಪ್ರವಾಸೋದ್ಯಮ ಕ್ಷೇತ್ರದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಹಲವಾರು ದೇಶಗಳ ವಾಯುಪ್ರದೇಶಗಳಲ್ಲಿ ನಿರ್ಬಂಧಗಳು, ವಿಮಾನ ಮಾರ್ಗ ಬದಲಾವಣೆಗಳು ಹಾಗೂ ಅಚಾನಕ್ ವಿಮಾನ ರದ್ಧತಿಗಳು ಹೆಚ್ಚುತ್ತಿರುವುದರಿಂದ ಜಾಗತಿಕ ವಿಮಾನ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗಿದೆ. ಇದರ ಪರಿಣಾಮವಾಗಿ ಯುರೋಪ್, ಏಷ್ಯಾ ಮತ್ತು ಆಫ್ರಿಕಾ ನಡುವಿನ ಹಲವಾರು ವಿಮಾನ ಮಾರ್ಗಗಳಲ್ಲಿ ಪ್ರಯಾಣದ ವೆಚ್ಚವೂ ಗಣನೀಯವಾಗಿ ಏರಿಕೆಯಾಗಿದೆ. ಭಾರತದ ದೃಷ್ಟಿಯಿಂದ ಈ ಪರಿಸ್ಥಿತಿ ವಿಶೇಷವಾಗಿ ಗಂಭೀರವಾಗಿದೆ. ಭಾರತದಿಂದ ವಿಶ್ವದ...

Post
ಹಾರ್ಮುಜ್ ಜಲಸಂಧಿ  ಏಕೆ ಮುಖ್ಯ?

ಹಾರ್ಮುಜ್ ಜಲಸಂಧಿ ಏಕೆ ಮುಖ್ಯ?

ಇದರಿಂದಾಗಿ ಕೇವಲ ಹಾರ್ಮುಜ್ ಜಲಸಂಧಿಗಳು ಮಾತ್ರ ಮುಚ್ಚಿಲ್ಲ. ಈ ಪ್ರದೇಶದ ಪ್ರಮುಖ ರಸಗೊಬ್ಬರ ಉತ್ಪಾದನಾ ಘಟಕಗಳು ಉತ್ಪಾದನೆಯನ್ನು ಸ್ಥಗಿತಗೊಳಿಸಿವೆ. ವಿಶೇಷವಾಗಿ ಉತ್ತರ ದೇಶಗಳಲ್ಲಿನ ರೈತರು ತಮ್ಮ ಬೆಳೆಗಳನ್ನು ಬಿತ್ತಲು ಸಿದ್ಧರಾಗುತ್ತಿರುವ ಸಮಯದಲ್ಲಿ ಈ ಅಡಚಣೆ ಉಂಟಾಗಿದೆ. ಕತಾರ್‌ನಲ್ಲಿ ’ಕತಾರ್ ಎನರ್ಜಿ’ ನಡೆಸುತ್ತಿರುವ ವಿಶ್ವದ ಅತಿದೊಡ್ಡ ಏಕತಾಣ ಯೂರಿಯಾ ಸ್ಥಾವರವು ನೈಸರ್ಗಿಕ ಅನಿಲದ ಕೊರತೆಯಿಂದಾಗಿ ಉತ್ಪಾದನೆ ಸ್ಥಗಿತಗೊಳಿಸಿದೆ. ಈ ಪ್ರದೇಶದಲ್ಲಿನ ಅನೇಕ ನೈಸರ್ಗಿಕ ಅನಿಲ ಅಥವಾ ಎಲ್‌ಎನ್‌ಜಿ ಸ್ಥಾವರಗಳು ಸಹ ಹಾನಿಗೊಂಡಿದ್ದು, ಇದು ತೈಲ ಮತ್ತು ಅನಿಲ ಆರ್ಥಿಕತೆಯ...

Post
ಭಾರತೀಯ ಷೇರು ಮಾರು ಕಟ್ಟೆಗಳಲ್ಲಿ ತಲ್ಲಣ

ಭಾರತೀಯ ಷೇರು ಮಾರು ಕಟ್ಟೆಗಳಲ್ಲಿ ತಲ್ಲಣ

 ಭಾರತೀಯ ಷೇರುಪೇಟೆಯಲ್ಲಿ ಇಂದು ತೀವ್ರ ಕುಸಿತ ಕಂಡುಬAದಿದೆ. ಸೆನ್ಸೆಕ್ಸ್ ೧,೭೦೦ ಪಾಯಿಂಟ್ ಹಾಗೂ ನಿಫ್ಟಿ ಫಿಫ್ಟಿ ೪೧೨ ಪಾಯಿಂಟ್‌ಗಳ ಕುಸಿತ ಅನುಭವಿಸಿವೆ. ಎರಡು ದಿನಗಳ ರಜೆ ನಂತರ ಸೋಮವಾರ ಮಾರುಕಟ್ಟೆ ಓಪನ್ ಆಯಿತು. ಮಾರುಕಟ್ಟೆ ತೆರೆಯಲು ಬ್ಲಡ್ ಬಾತ್ ಮುಂದುವರಿದಿದೆ. ಸೆನ್ಸೆಕ್ಸ್ ೧,೭೮೬.೮೭ ಪಾಯಿಂಟ್ ಅಥವಾ ೨.೪೭% ಕುಸಿದು ೭೨,೭೨೨.೭೩ಕ್ಕೆ ತಲುಪಿದೆ. ನಿಫ್ಟಿ ೫೮೦.೫೫ ಪಾಯಿಂಟ್‌ಗಳು ಅಥವಾ ೨.೫೧% ಕುಸಿದು ೨೨,೫೩೦.೫೫ ಕ್ಕೆ ತಲುಪಿದೆ. ಆರಂಭಿಕ ವಹಿವಾಟಿನಲ್ಲಿ ಯುಎಸ್‌ಡಿ ಡಾಲರ್ ವಿರುದ್ಧ ರೂಪಾಯಿ ಮೌಲ್ಯ ೩೩ ಪೈಸೆ...

Post
ತೈಲ, ಎಲ್‌ಪಿಜಿ ಆಯ್ತು.. ಭಾರತಕ್ಕೀಗ ರಸಗೊಬ್ಬರ ಪೂರೈಕೆ, ಆಹಾರ ಭದ್ರತೆ ಮೇಲೆ ಎಫೆಕ್ಟ್ ಭೀತಿ

ತೈಲ, ಎಲ್‌ಪಿಜಿ ಆಯ್ತು.. ಭಾರತಕ್ಕೀಗ ರಸಗೊಬ್ಬರ ಪೂರೈಕೆ, ಆಹಾರ ಭದ್ರತೆ ಮೇಲೆ ಎಫೆಕ್ಟ್ ಭೀತಿ

ಬ್ರಿಟಿಷರ ಆಳ್ವಿಕೆಯಿಂದ ಸ್ವತಂತ್ರವಾದ ಭಾರತವನ್ನು ಮುನ್ನಡೆಸುವುದು ಆಗ ಸವಾಲಿನ ಸಂಗತಿಯಾಗಿತ್ತು. ಹೆಚ್ಚುತ್ತಿದ್ದ ಜನಸಂಖ್ಯೆಗೆ ಆಗ ಆಹಾರ ಭದ್ರತೆ ಒದಗಿಸುವುದು ಪ್ರಮುಖ ಉದ್ದೇಶವಾಗಿತ್ತು. ಬರಗಾಲ, ಕ್ಷಾಮ, ನಿಧಾನಗತಿಯ ನೈಸರ್ಗಿಕ ಕೃಷಿಯಿಂದ ದೇಶದಲ್ಲಿ ಆಹಾರ ಅಭದ್ರತೆ ಉಂಟಾಗಿತ್ತು. ಕೂಳಿಗಾಗಿ ಭಾರತೀಯರು ಪರಿತಪಿಸುವಂತಾಗಿತ್ತು. ದೇಶಕ್ಕೆ ಮೊದಲು ಆಹಾರ ಭದ್ರತೆ ಒದಗಿಸಬೇಕೆಂದು ‘ಹಸಿರು ಕ್ರಾಂತಿ’ ಜಾರಿಗೆ ಬಂತು. ದೇಶದ ಕೃಷಿಯಲ್ಲಿ ಸುಧಾರಣೆ ತರಲಾಯಿತು. ವೈಜ್ಞಾನಿಕ ಕೃಷಿ ಪದ್ಧತಿಯಲ್ಲಿ ರಸಗೊಬ್ಬರ ಬಳಕೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಯಿತು. ರಸಗೊಬ್ಬರಗಳು ಸಸ್ಯಗಳ ಬೆಳವಣಿಗೆಗೆ ಅಗತ್ಯವಾದ ಪೋಷಕಾಂಶಗಳನ್ನು (ಸಾರಜನಕ,...

Post
ಭಾರತ ಸ್ವತಂತ್ರ ಇಂಧನ ನೀತಿ ಬಗ್ಗೆ ಯೋಚಿಸಲು ಇದು ಸೂಕ್ತ ಸಮಯವೇ?

ಭಾರತ ಸ್ವತಂತ್ರ ಇಂಧನ ನೀತಿ ಬಗ್ಗೆ ಯೋಚಿಸಲು ಇದು ಸೂಕ್ತ ಸಮಯವೇ?

ಭಾರತವು ಪಳೆಯುಳಿಕೆ ಅನಿಲವಿಲ್ಲದ ಅಡುಗೆ ಇಂಧನ ವ್ಯವಸ್ಥೆಯನ್ನು ಮರುಕಲ್ಪಿಸಿಕೊಳ್ಳಬೇಕು ಮತ್ತು ಸಾಂಪ್ರದಾಯಿಕ ವಿಧಾನಗಳ ಮೇಲೆ ಹೆಚ್ಚು ಅವಲಂಬಿತವಾಗಬೇಕು ಎಂದು ಲೇಖಕ ಇಂದ್ರ ಶೇಖರ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ. ಅಡುಗೆ ಅನಿಲ ಸಿಲಿಂಡರ್‌ಗಾಗಿ ಸಮಸ್ಯೆ ಎದುರಿಸಬೇಕಾದ ಅಗತ್ಯವಿಲ್ಲ ಎಂದು ಸರ್ಕಾರ ಭರವಸೆ ನೀಡಿದ್ದರೂ, ಜನರು ಮಾತ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನತೆ ದೇಶದ ಎಲ್‌ಎನ್‌ಜಿ, ಎಲ್‌ಪಿಜಿ ಬಳಕೆದಾರರ ಮೇಲೆ ಗಂಭೀರ ಪರಿಣಾಮ ಬೀರಿದೆ. ಗ್ಯಾಸ್ ಬೆಲೆಗಳು ಗಗನಕ್ಕೇರುತ್ತಿವೆ, ದೇಶದ ವಿವಿಧೆಡೆ ಜನರು ಸಿಲಿಂಡರ್‌ಗಾಗಿ ಸರತಿ ಸಾಲುಗಳಲ್ಲಿ ನಿಲ್ಲುವಂತಾಗಿದೆ. ಕಳೆದ ಕೆಲವು...

Post
ಸಂಪಾದಕೀಯ

ಸಂಪಾದಕೀಯ

ಸಂಘರ್ಷದ ಎಫೆಕ್ಟ್; ರಸಗೊಬ್ಬರಗಳ ಬೆಲೆ ಗಗನಕ್ಕೆ ಏರುವ ಸಾಧ್ಯತೆ ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನತೆಯಿಂದಾಗಿ ಯೂರಿಯಾ ರಫ್ತು ಬೆಲೆಗಳು ಕಳೆದ ಶುಕ್ರವಾರ ಮೆಟ್ರಿಕ್ ಟನ್‌ಗೆ ಸುಮಾರು 40% ರಷ್ಟು ಏರಿಕೆಯಾಗಿವೆ. ಪ್ರಸ್ತುತ ಬೆಲೆಯು 700 ಡಾಲರ್‌ಗಿಂತ (ಅಂದಾಜು 58,000 ದಿಂದ 65,000 ರೂಪಾಯಿ) ಹೆಚ್ಚಾಗಿದೆ. ಯುದ್ಧ ಆರಂಭವಾಗುವ ಮೊದಲು ಇದು 500 ಡಾಲರ್‌ಗಿಂತ ಕಡಿಮೆ ಇತ್ತು. ಇರಾನ್ ವಲಯದಲ್ಲಿ ಸಂಘರ್ಷ ಪ್ರಾರಂಭವಾದಾಗಿನಿಂದ ಒಟ್ಟಾರೆ ರಸಗೊಬ್ಬರಗಳ ಬೆಲೆ 32% ರಷ್ಟು ಹೆಚ್ಚಾಗಿದೆ. ಯುದ್ಧ ಮುಂದುವರಿದರೆ ಯೂರಿಯಾದಂತಹ ಸಾರಜನಕ ಆಧಾರಿತ ರಸಗೊಬ್ಬರಗಳ ಬೆಲೆಗಳು...