ನವದೆಹಲಿಯ ಭಾರತ ಮಂಟಪದಲ್ಲಿ ನಡೆಯುತ್ತಿರುವ ಎ.ಐ ಇಂಪ್ಯಾಕ್ಟ್ ಶೃಂಗದಲ್ಲಿ ಉದ್ಯಮಿ ಮುಕೇಶ್ ಅಂಬಾನಿ ಮಹತ್ವದ ಘೋಷಣೆ ಮಾಡಿದ್ದಾರೆ. ಕೃತಕ ಬುದ್ಧಿಮತ್ತೆ (Ai) ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಯನ್ನು ತರಲು ರಿಲಯನ್ಸ್ ಜಿಯೊ ಮುಂದಿನ ಏಳು ವರ್ಷಗಳಲ್ಲಿ ₹೧೦ ಲಕ್ಷ ಕೋಟಿ ಹೂಡಿಕೆ ಮಾಡುವುದಾಗಿ ಅವರು ತಿಳಿಸಿದ್ದಾರೆ. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅಂಬಾನಿ, “ಎ.ಐಯ ಅತ್ಯುತ್ತಮ ಹಂತ ಇನ್ನಷ್ಟೇ ಬರಬೇಕಿದೆ. ಇದು ಸೂಪರ್ ಸಮೃದ್ಧಿಯ ಜಗತ್ತನ್ನು ತೆರೆದುಕೊಳ್ಳಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮೊಬೈಲ್ ದತ್ತಾಂಶ ಕ್ಷೇತ್ರದಲ್ಲಿ ಜಿಯೊ ಮಾಡಿದ ಕ್ರಾಂತಿಯAತೆ, Ai ಕ್ಷೇತ್ರದಲ್ಲಿಯೂ ಅದೇ ಮಾದರಿಯ ಬದಲಾವಣೆ ತರಲಾಗುತ್ತದೆ ಎಂದು ಅವರು ಹೇಳಿದರು. ಕೈಗೆಟುಕುವ Ai – ಭಾರತದ ದೃಷ್ಟಿಕೋನ : AI ಕ್ಷೇತ್ರದಲ್ಲಿ ಜಗತ್ತು ಎರಡು ದಿಕ್ಕುಗಳಲ್ಲಿ ಸಾಗುತ್ತಿದೆ. ಒಂದು ದುಬಾರಿ ಹಾಗೂ ನಿಯಂತ್ರಿತ ದತ್ತಾಂಶ ಆಧಾರಿತ AI, ಇನ್ನೊಂದು ಸಾಮಾನ್ಯ ಜನತೆಗೆ ಕೈಗೆಟುಕುವ Ai. ಭಾರತ ಕೈಗೆಟುಕುವ, ಸಮಾನ ಅವಕಾಶಗಳನ್ನು ಒದಗಿಸುವ Ai ಮಾದರಿಯನ್ನು ಅಭಿವೃದ್ಧಿಪಡಿಸಲಿದೆ ಎಂದು ಅಂಬಾನಿ ತಿಳಿಸಿದರು. “ಈ...
ಕನ್ನಡ ಮುದ್ರಣೋದ್ಯಮಕ್ಕೆ ದ್ವಿಶತಕ ಸಂಭ್ರಮ
೧೫೫೬ರಲ್ಲಿ ಅನಿರೀಕ್ಷಿತವಾಗಿ ಮೊಟ್ಟಮೊದಲ ಮುದ್ರಣಯಂತ್ರ ಗೋವಾ ತಲುಪಿ ಮುದ್ರಣಕಾರ್ಯ ಆರಂಭ ಮಾಡಿತು. ಜಾನ್ ಹ್ಯಾಂಡ್ಸ್ನ ಸತತ ೭ ವರ್ಷಗಳ ಪ್ರಯತ್ನದ ಫಲವಾಗಿ ೧೮೨೬ರಲ್ಲಿ ಮುದ್ರಣಯಂತ್ರವು ಬಳ್ಳಾರಿಯನ್ನು ಸೇರಿತು ೧೫೫೬ರಲ್ಲಿ ಅನಿರೀಕ್ಷಿತವಾಗಿ ಮೊಟ್ಟಮೊದಲ ಮುದ್ರಣಯಂತ್ರ ಗೋವಾ ತಲುಪಿ ಮುದ್ರಣಕಾರ್ಯ ಆರಂಭ ಮಾಡಿತು. ಜಾನ್ ಹ್ಯಾಂಡ್ಸ್ನ ಸತತ ೭ ವರ್ಷಗಳ ಪ್ರಯತ್ನದ ಫಲವಾಗಿ ೧೮೨೬ರಲ್ಲಿ ಮುದ್ರಣಯಂತ್ರವು ಬಳ್ಳಾರಿಯನ್ನು ಸೇರಿತು. ಅನೇಕ ಅಡಚಣೆಗಳನ್ನು ದಾಟಿ ೧೮೨೮ರಿಂದ ಕನ್ನಡ ಮುದ್ರಣವನ್ನು ನಿಯಮಿತವಾಗಿ ಪ್ರಾರಂಭಿಸಲಾಯಿತು. ಈ ೨ ಶತಮಾನಗಳ ನಂತರವೂ ಹೊಸ ಹೊಸ ಆವಿಷ್ಕಾರ ನಡೆದು, ಹೊಸ ಯಂತ್ರಗಳು ಬರುತ್ತಲೇ ಇವೆ. ಮುದ್ರಣ ಲೋಕದ ಪಿತಾಮಹ ಗುಟೆನ್ಬರ್ಗ್ ಸ್ಮರಣಾರ್ಥ ಫೆ.೨೪ ಅನ್ನು ‘ಮುದ್ರಕರ ದಿನ’ವೆಂದು ಆಚರಿಸಿಕೊಂಡು ಬರಲಾಗುತ್ತಿದೆ. ಜರ್ಮನಿಯ ಅಕ್ಕಸಾಲಿಗ ಗುಟೆನ್ಬರ್ಗ್ ೧೪೫೪ರಲ್ಲಿ ಬಿಡಿ ಅಕ್ಷರಗಳ ಮೊಳೆಗಳನ್ನು ಕಂಡುಹಿಡಿದ ಮೇಲೆ ಮುದ್ರಣ ಕಲೆಯು ಫ್ರಾನ್ಸ್, ಇಟಲಿ, ಪೋರ್ಚುಗಲ್, ಹಾಲೆಂಡ್, ಇಂಗ್ಲೆAಡ್ ಮುಂತಾದ ರಾಷ್ಟ್ರಗಳಿಗೆ ಹಬ್ಬಿತು. ಇದಕ್ಕೂ ಮುಂಚೆ ಕ್ರಿ.ಶ.೮೬೮ರಲ್ಲಿ ಮುದ್ರಿತವಾದ ೬ ಹಾಳೆಯ ‘ಹಿರಕಸೂತ್ರ’ ಎಂಬ ಪುಸ್ತಕವು ಚೀನಾದ...
ಗಡಸು ನೀರು ಕೂದಲು ಉದುರುವಿಕೆಗೆ ಕಾರಣ
ಕೂದಲು ಉದುರುವ ಸಮಸ್ಯೆ ಪ್ರತಿಯೊಬ್ಬರನ್ನೂ ಕಾಡುತ್ತಿದೆ. ಕೆಲವರಂತೂ ಪೋಷಕಾಂಶ ಭರಿತ ಆಹಾರವನ್ನು ಸೇವಿಸಿದರೂ ಕೂದಲು ಉದುರುವುದು ಮಾತ್ರ ನಿಲ್ಲೋದಿಲ್ಲ. ಇದಕ್ಕೆ ಅವರು ನೀರನ್ನು ದೂರುತ್ತಾರೆ. ಗಡಸು ನೀರಿನ ಬಳಕೆಯಿಂದ ಕೂದಲು ಉದುರುತ್ತದೆ ಎನ್ನುತ್ತಾರೆ. ನಮ್ಮಲ್ಲಿ ಅನೇಕರು ಕೂದಲು ಉದುರುವುದಕ್ಕೆ ಗಡಸು ನೀರು ಕಾರಣ, ನೀರು ಸರಿಯಿಲ್ಲ ಎನ್ನುವುದನ್ನು ನೀವು ಕೇಳಿರಬಹುದು. ಗಡಸು ನೀರಿನಲ್ಲಿ ತಲೆಸ್ನಾನ ಮಾಡೋದರಿಂದ ಕೂದಲು ಉದುರಲು ಆರಂಭಿಸಿದೆ ಎನ್ನುತ್ತಾರೆ. ಆದರೆ ನಿಜಕ್ಕೂ ಕೂದಲು ಉದುರಲು ಗಡಸು ನೀರು ಕಾರಣವಾಗುತ್ತಾ ಎನ್ನುವ ಪ್ರಶ್ನೆ ಬಹುತೇಕರಲ್ಲಿದೆ. ತಲೆ ಕೂದಲು ಶಾಶ್ವತ ಬೋಳಾಗುವುದು ಹಾಗೂ ಕೂದಲು ಉದುರುವಿಕೆಗೆ ಗಡಸು ನೀರು ಕಾರಣವಾಗುವುದಿಲ್ಲ ಆದರೆ ಅದರ ಖನಿಜ ಅಂಶವು ಕೂದಲು ಮತ್ತು ನೆತ್ತಿಯ ಸಮಸ್ಯೆಗಳಿಗೆ ಕಾರಣವಾಗುತ್ತದೆ, ಇದು ಕೂದಲು ಉದುರುವಿಕೆಯನ್ನು ಇನ್ನಷ್ಟು ಹದಗೆಡಿಸುತ್ತದೆ ಎನ್ನುತ್ತಾರೆ ಅವರು. ಗಡಸು ನೀರಿನ ಖನಿಜ ಅಂಶವು ಗಣನೀಯ ಪ್ರಮಾಣದಲ್ಲಿ ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ ಅನ್ನು ಒಳಗೊಂಡಿರುತ್ತದೆ. ಗಡಸು ನೀರಿನಿಂದ ತೊಳೆಯುವ ಪ್ರಕ್ರಿಯೆಯು ನೆತ್ತಿ ಮತ್ತು ಕೂದಲಿನ ಬುಡ ಎರಡರಲ್ಲೂ...
ಭಾರತದಿಂದ ಕಣ್ಮರೆಯಾಗಲಿವೆಯೇ ಕಾಮನಬಿಲ್ಲುಗಳು:
ಹವಾಮಾನ ಬದಲಾವಣೆಯ ಎಫೆಕ್ಟ್! ನವದೆಹಲಿ: ಆಗಸದಲ್ಲಿ ವರ್ಣರಂಜಿತ ಕಾಮನಬಿಲ್ಲನ್ನು ನೋಡಿ ಮನಸೋತವರು ಯಾರಿಲ್ಲ? ಮಳೆ ಅಥವಾ ನೀರಿನ ಹನಿಗಳ ಮೇಲೆ ಸೂರ್ಯನ ಬೆಳಕು ಬಿದ್ದಾಗ ಆಗಸದಲ್ಲಿ ಮೂಡುವ ಈ ಸುಂದರ ಕಮಾನು ಪ್ರತಿಯೊಬ್ಬರ ಮನಸಿಗೂ ಮುದ ನೀಡುತ್ತದೆ. ಆದರೆ, ಭವಿಷ್ಯದಲ್ಲಿ ಈ ಕಾಮನಬಿಲ್ಲು ಎಂಬ ಪರಿಕಲ್ಪನೆಯೇ ಮಾಯವಾದರೆ? ಹೌದು, ಸೌಂದರ್ಯದ ಸಂಕೇತವಾಗಿರುವ ಕಾಮನಬಿಲ್ಲುಗಳು, ಹವಾಮಾನ ಬದಲಾವಣೆಯ ಪರಿಣಾಮವಾಗಿ ಭವಿಷ್ಯದಲ್ಲಿ ತಮ್ಮ ಗೋಚರಿಸುವಿಕೆಯ ಮಾದರಿಯನ್ನು ಬದಲಿಸಿಕೊಳ್ಳಲಿವೆ ಎಂಬ ಆತಂಕಕಾರಿ ವಿಷಯವನ್ನು ಹೊಸ ವೈಜ್ಞಾನಿಕ ಅಧ್ಯಯನವೊಂದು ಬಹಿರಂಗಪಡಿಸಿದೆ. ಜಾಗತಿಕವಾಗಿ ಮಳೆಯ ಮಾದರಿಗಳು ಮತ್ತು ಮೋಡದ ಹೊದಿಕೆಯನ್ನು ಬದಲಾಯಿಸುತ್ತಿರುವ ಹವಾಮಾನ ಬದಲಾವಣೆಯು, ಕಾಮನಬಿಲ್ಲುಗಳು ಎಲ್ಲಿ ಮತ್ತು ಯಾವಾಗ ಕಾಣಿಸಿಕೊಳ್ಳುತ್ತವೆ ಎಂಬುದರ ಮೇಲೂ ಪರಿಣಾಮ ಬೀರಲಿದೆ. ಕೆಲವು ಪ್ರದೇಶಗಳಲ್ಲಿ ಕಾಮನಬಿಲ್ಲುಗಳು ಹೆಚ್ಚಾಗಿ ಕಾಣಿಸಿಕೊಂಡರೆ, ಭಾರತದಂತಹ ಜನನಿಬಿಡ ಪ್ರದೇಶಗಳಲ್ಲಿ ಅವುಗಳ ಗೋಚರತೆ ಕಡಿಮೆಯಾಗಿ, ಮುಂದೊAದು ದಿನ ಸಂಪೂರ್ಣವಾಗಿ ಕಣ್ಮರೆಯಾಗುವ ಸಾಧ್ಯತೆಯಿದೆ ಎಂದು ಸಂಶೋಧನೆ ಎಚ್ಚರಿಸಿದೆ. ಸೂರ್ಯನ ಬೆಳಕು ವಾತಾವರಣದಲ್ಲಿನ ನೀರಿನ ಹನಿಗಳ ಮೂಲಕ ಹಾದುಹೋದಾಗ ಕಾಮನಬಿಲ್ಲುಗಳು ರೂಪುಗೊಳ್ಳುತ್ತವೆ. ಹೀಗಾಗಿ,...
ಹೂಡಿಕೆದಾರರಿಗೆಲೈಫ್ಸೈಕಲ್ಫಂಡ್ಎಷ್ಟುಪ್ರಯೋಜನಕಾರಿ
ಸಣ್ಣ ಹೂಡಿಕೆದಾರರು ಹೂಡಿಕೆ ಮಾಡುವ ಮ್ಯೂಚುವಲ್ ಫಂಡ್ ಸೇರಿದಂತೆ ಇತರ ಹೂಡಿಕೆ ಸಾಧನಗಳಲ್ಲಿ ಸೆಬಿ ಆಗಾಗ ಬದಲಾವಣೆ ಮಾಡುತ್ತದೆ. ಏಕೆಂದರೆ ಹೂಡಿಕೆದಾರರ ಬಂಡವಾಳ ರಕ್ಷಣೆ ಸೆಬಿಯ ಮುಖ್ಯ ಉದ್ದೇಶ. ಅಂತೆಯೇ ಇತ್ತೀಚೆಗೆ ಸೆಬಿ, “ಲೈಫ್ ಸೈಕಲ್ ಫಂಡ್” ಎಂದು ಕರೆಯಲ್ಪಡುವ ಹೊಸ ಮ್ಯೂಚುಯಲ್ ಫಂಡ್ಗಳನ್ನು ಪರಿಚಯಿಸಿದೆ. ಏನಿದು ಲೈಫ್ ಸೈಕಲ್ ಫಂಡ್? ಹೂಡಿಕೆದಾರರಿಗೆ ಎಷ್ಟರ ಮಟ್ಟಿಗೆ ಪ್ರಯೋಜನ ಎಂಬುದನ್ನು ನೋಡಬೇಕಿದೆ. ಸಾಂಪ್ರದಾಯಿಕ ಮ್ಯೂಚುವಲ್ ಫಂಡ್ಗಳಿಗೆ ಹೋಲಿಸಿದರೆ, ಲೈಫ್ ಸೈಕಲ್ ಫಂಡ್ಗಳು ಒಂದು ವಿಶಿಷ್ಟ ವಿಧಾನವನ್ನು ಅಳವಡಿಸಿಕೊಳ್ಳುತ್ತವೆ. ಮೂಲಭೂತವಾಗಿ, ಇವು ಓಪನ್ ಎಂಡೆಡ್ ಟಾರ್ಗೆಟ್ ಡೇಟ್ ಫಂಡ್ಗಳು. ಅಂದರೆ ಇವು ಪೂರ್ವನಿರ್ಧರಿತ ಮ್ಯಾಚುರಿಟಿ ದಿನಾಂಕದೊಂದಿಗೆ ಸಂಬಂಧ ಹೊಂದಿವೆ ಎಂದು ಸೂಚಿಸುತ್ತದೆ. ಈ ಫಂಡ್ ಸಾಮಾನ್ಯವಾಗಿ ೫ ವರ್ಷಗಳ ಅವಧಿಯನ್ನು ಹೊಂದಿರುತ್ತವೆ, ಆದರೂ ಕೆಲವು ಗರಿಷ್ಠ ೩೦ ವರ್ಷಗಳ ಅವಧಿಯವರೆಗೆ ವಿಸ್ತರಿಸಬಹುದು. ಮೆಚ್ಯುರಿಟಿ ದಿನಾಂಕ ಸಮೀಪಿಸುತ್ತಿದ್ದಂತೆ, ಸ್ವಯಂಚಾಲಿತವಾಗಿ ಫಂಡ್ ತನ್ನ ಹೂಡಿಕೆ ತಂತ್ರವನ್ನು ಬದಲಿಸುತ್ತದೆ. ಅಂದರೆ “ಗ್ಲೈಡ್ ಪಾತ್” ಎಂದು ಕರೆಯಲ್ಪಡುವ ಪೂರ್ವನಿರ್ಧರಿತ ಹೂಡಿಕೆ...
ಪುತ್ರಿ ಜೊತೆ ಯುದ್ಧ ಟ್ಯಾಂಕರ್ನಲ್ಲಿ ಸವಾರಿ ಮಾಡಿದ ಕಿಮ್
ಮಧ್ಯಪ್ರಾಚ್ಯ ಯುದ್ಧದ ನಡುವೆ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ (kim jong un) ಇದೀಗ ಪುತ್ರಿ ಜೊತೆ ಯುದ್ಧ ಟ್ಯಾಂಕರ್ನಲ್ಲಿ ಸವಾರಿ ಮಾಡಿದ್ದಾರೆ. ಹೌದು, ಇತ್ತೀಚಿಗಷ್ಟೇ ಪುತ್ರಿ ಜೊತೆ ಕ್ರೂಸ್ ಕ್ಷಿಪಣಿ ಪರೀಕ್ಷಿಸಿ, ಶೂಟಿಂಗ್ ಮಾಡಿದ್ದರು. ಇದೀಗ ಮತ್ತೆ ಹೊಸ ಪ್ರಯತ್ನ ಮಾಡಿದ್ದಾರೆ. ಪ್ಯೊಂಗ್ಯಾಂಗ್ ನಲ್ಲಿರುವ ೬೦ನೇ ತರಬೇತಿ ನೆಲೆಗೆ ಭೇಟಿ ನೀಡಿದಾಗ ಕಿಮ್ ಮತ್ತು ಜು ಏ ಸಮರಾಭ್ಯಾಸ ವೀಕ್ಷಿಸಿ, ಒಂದೇ ತರಹದ ಉಡುಗೆ ಧರಿಸಿ, ಯುದ್ಧ ಟ್ಯಾಂಕರ್ನಲ್ಲಿ ಸವಾರಿ ಮಾಡಿದ್ದಾರೆ. ಈ ಕುರಿತು ಉತ್ತರ ಕೊರಿಯಾದ ಅಧಿಕೃತ ಸುದ್ದಿಸಂಸ್ಥೆ `ಕೆಸಿಎನ್ಎ’ ಫೋಟೋಗಳನ್ನು ಬಿಡುಗಡೆ ಮಾಡಿದೆ. `ಕೆಸಿಎನ್ಎ’ ಪ್ರಕಾರ, ಯುದ್ಧ ಟ್ಯಾಂಕರ್ಗಳು ಕ್ಷಿಪಣಿ ಮತ್ತು ಡ್ರೋನ್ಗಳ ವಿರುದ್ಧ ರಕ್ಷಣೆ ಮಾಡುವುದು, ಫೈರ್ಪವರ್ ಮತ್ತು ರಕ್ಷಣಾತ್ಮಕ ವ್ಯವಸ್ಥೆಗಳನ್ನು ಹೊಂದಿದೆ. ಟ್ಯಾಂಕರ್ಗಳ ಚಲನಶೀಲತೆ, ಅವುಗಳು ಅಬ್ಬರಿಸುವ ರೀತಿ ಎಲ್ಲವನ್ನು ನೋಡಿದ ಕಿಮ್ ಜಾಂಗ್ ಉನ್ ಅವರು ಸಂತೋಷ ವ್ಯಕ್ತಪಡಿಸಿದ್ದಾರೆ. ಜೊತೆಗೆ ಟ್ಯಾಂಕರ್ಗಳ ಅದ್ಭುತ ಪ್ರದರ್ಶನವು ನಮ್ಮ ಸೈನ್ಯದ ಶೌರ್ಯವನ್ನು ಪ್ರತಿಬಿಂಬಿಸುತ್ತಿದೆ...
ದೇಶದಾದ್ಯಂತ ೩೨ ವಿಶ್ವವಿದ್ಯಾಲಯಗಳು ನಕಲಿ: ಕರ್ನಾಟಕದಲ್ಲೂ ೨ ಫೇಕ್ ಯೂನಿವರ್ಸಿಟಿ ಪತ್ತೆ!
ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ೧೨ ರಾಜ್ಯಗಳಲ್ಲಿ ಬರೋಬ್ಬರಿ ೩೨ ನಕಲಿ ವಿಶ್ವವಿದ್ಯಾಲಯಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ನಮ್ಮ ರಾಜ್ಯದಲ್ಲೂ ಎರಡು ನಕಲಿ ವಿಶ್ವವಿದ್ಯಾಲಯ ಪತ್ತೆಯಾಗಿವೆ. ಈ ನಕಲಿ ವಿಶ್ವವಿದ್ಯಾಲಯಗಳ ಪೈಕಿ ದೆಹಲಿ ೧ನೇ ಸ್ಥಾನದಲ್ಲಿದ್ದರೆ, ಉತ್ತರ ಪ್ರದೇಶ ಎರಡನೇ ಸ್ಥಾನದಲ್ಲಿದೆ. ಇಂತಹ ವಿಶ್ವವಿದ್ಯಾಲಯಗಳಲ್ಲಿ ದಾಖಲಾದ ನಂತರ ಪಡೆದ ಪದವಿಗಳು ನಿಷ್ಪ್ರಯೋಜಕವಾಗುತ್ತವೆ ಎಂದು ಯುಜಿಸಿ ಸ್ಪಷ್ಟವಾಗಿ ಎಚ್ಚರಿಸಿದೆ. ಜೊತೆಗೆ ಈ ವಿಶ್ವವಿದ್ಯಾಲಯಗಳಿಂದ ಪದವಿಗಳನ್ನು ಉದ್ಯೋಗಕ್ಕಾಗಿ ಮಾನ್ಯತೆ ನೀಡಬಾರದು ಎಂದಿದೆ. ಕೇಂದ್ರ ಸರ್ಕಾರವು ನಿರಂತರವಾಗಿ ನಕಲಿ ವಿಶ್ವವಿದ್ಯಾಲಯಗಳ ವಿರುದ್ಧ ಕ್ರಮ ಕೈಗೊಳ್ಳುತ್ತದೆ. ಇತ್ತೀಚೆಗೆ, ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ನಕಲಿ ವಿಶ್ವವಿದ್ಯಾಲಯಗಳ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಎರಡು ವರ್ಷಗಳ ಹಿಂದೆ, ಎಂಟು ರಾಜ್ಯಗಳಲ್ಲಿ ಸುಮಾರು ೨೦ ಇದ್ದವು, ಆದರೆ ಈಗ ಅವು ವಿಸ್ತರಿಸಿವೆ. ಕರ್ನಾಟಕದಲ್ಲಿ ಯಾವುದು? ನಕಲಿ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಕರ್ನಾಟಕದ ತುಮಕೂರಿನ ಸರ್ವ ಭಾರತಿ ಶಿಕ್ಷಾ ಪೀಠ, ಬೆಂಗಳೂರಿನ ಗ್ಲೋಬಲ್ ಹ್ಯೂಮನ್ ಪೀಸ್ ವಿಶ್ವವಿದ್ಯಾಲಯ ಕಂಡು ಬಂದಿದೆ. ದೆಹಲಿಯ ಆಲ್...
ಪುದೀನಾ ಸೊಂಪಾಗಿ ಬೆಳೆಯಬೇಕೇ?
ಪುದೀನಾ ಸಾಮಾನ್ಯವಾಗಿ ಸೂರ್ಯನ ಬೆಳಕನ್ನು ಇಷ್ಟಪಡುವ ಗಿಡ. ಆದರೆ ಬೇಸಿಗೆಯ ತೀವ್ರ ಬಿಸಿಲು ಇದಕ್ಕೆ ಮಾರಕವಾಗಬಹುದು. ಸರಿಯಾದ ಗೊಬ್ಬರ, ನೀರು ಮತ್ತು ಬಿಸಿಲಿನ ನಿರ್ವಹಣೆ ಮಾಡಿದರೆ ನಿಮ್ಮ ಮನೆಯ ಪುದೀನಾ ಗಿಡವು ವರ್ಷಪೂರ್ತಿ ತಾಜಾ ಎಲೆಗಳನ್ನು ನೀಡುತ್ತದೆ. ಮೇ ಮತ್ತು ಜೂನ್ ತಿಂಗಳಲ್ಲಿ ತಾಪಮಾನ ೪೦-೪೫ ಡಿಗ್ರಿ ತಲುಪಿದಾಗ, ಪುದೀನಾ ಗಿಡವನ್ನು ದಿನವಿಡೀ ಬಿಸಿಲಿನಲ್ಲಿ ಬಿಡಬೇಡಿ. ಬೆಳಗಿನ ೩-೪ ಗಂಟೆಗಳ ಕಾಲ ಮಾತ್ರ ಹಗುರವಾದ ಬಿಸಿಲು ತಗುಲುವಂತೆ ನೋಡಿಕೊಳ್ಳಿ. ಅತಿಯಾದ ಬಿಸಿಲು ಎಲೆಗಳನ್ನು ಸುಡುತ್ತದೆ ಮತ್ತು ಅವುಗಳ ಸುವಾಸನೆಯನ್ನು ಕಡಿಮೆ ಮಾಡುತ್ತದೆ. ಪಾಟ್: ನಿಮ್ಮ ಪುದೀನಾ ಪಾಟ್ನಲ್ಲಿದ್ದರೆ ಬಿಸಿಲು ಹೆಚ್ಚಾದಾಗ ಅದನ್ನು ಬಾಲ್ಕನಿ ಅಥವಾ ಕಿಟಕಿಯ ಹತ್ತಿರ ತಂಪಾದ ಜಾಗಕ್ಕೆ ಶಿಫ್ಟ್ ಮಾಡಿ. ಟೆರೇಸ್ ಗಾರ್ಡನ್: ಒಂದು ವೇಳೆ ನೀವು ಟೆರೇಸ್ ಗಾರ್ಡನ್ ಮಾಡುತ್ತಿದ್ದರೆ ಗಿಡದ ಮೇಲೆ ‘ಗ್ರೀನ್ ನೆಟ್’ಹಾಕುವುದರಿಂದ ಬಿಸಿಲಿನ ತಾಪವನ್ನು ೫೦% ಕಡಿಮೆ ಮಾಡಬಹುದು. ಪುದೀನಾ ವೇಗವಾಗಿ ಬೆಳೆಯಲು ಮಣ್ಣು ಸಡಿಲವಾಗಿರಬೇಕು. ಕುಂಡದಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಿ. ಅಂತಹ...
ಕುಂಭಮೇಳ ಮೊನಾಲಿಸಾ ಕಣ್ಣೀರು
ಕುಂಭಮೇಳದಲ್ಲಿ ‘ರುದ್ರಾಕ್ಷಿ ಲೇಡಿ’ ಎಂದು ವೈರಲ್ ಆಗಿದ್ದ ಮೊನಾಲಿಸಾ, ಮುಸ್ಲಿಂ ಯುವಕ ಫರ್ಮಾನ್ ಖಾನ್ ಅವರನ್ನು ವಿವಾಹವಾಗಿದ್ದು, ಇದು ‘ಲವ್ ಜಿಹಾದ್’ ಚರ್ಚೆಗೆ ಕಾರಣವಾಗಿದೆ. ಜೀವ ಬೆದರಿಕೆ ಎದುರಿಸುತ್ತಿರುವ ದಂಪತಿ ರಕ್ಷಣೆ ಕೋರಿದ್ದಾರೆ. ಕುಂಭಮೇಳದಲ್ಲಿ ರುದ್ರಾಕ್ಷಿ ಮಾರುತ್ತಾ ಕಣ್ಣುಗಳಿಂದಲೇ ವೈರಲ್ ಆಗಿ ಇಡೀ ದೇಶದಲ್ಲಿ ಹಲ್ಚಲ್ ಸೃಷ್ಟಿಸಿದ್ದ ಮೊನಾಲಿಸಾ ಇದೀಗ ಮತ್ತೊಮ್ಮೆ ಸದ್ದು ಮಾಡುತ್ತಿದ್ದಾರೆ. ಮುಸ್ಲಿಂ ಯುವಕನನ್ನು ಪ್ರೀತಿಸಿ ಮದುವೆಯಾಗಿರೋ ಮೋನಿ ಬಗ್ಗೆ ಇದಾಗಲೇ ವಾದ-ಪ್ರತಿವಾದ-ವಿವಾದ ಎಲ್ಲವೂ ಶುರುವಾಗಿಬಿಟ್ಟಿದೆ. ಫರ್ಮಾನ್ ಖಾನ್ ಎನ್ನುವ ನಟನನ್ನು ಪ್ರೀತಿಸಿ ಮದುವೆಯಾಗಿರುವ ಮೊನಾಲಿಸಾದ್ದು ಲವ್ ಜಿಹಾದ್ ಎಂದು ಬಹುದೊಡ್ಡ ಚರ್ಚೆಯಾಗುತ್ತಿದೆ. ಅಷ್ಟಕ್ಕೂ ಇದಾಗಲೇ ಈ ದಂಪತಿ ಈ ಬಗ್ಗೆ ಸ್ಪಷ್ಟಪಡಿಸಿದ್ದೂ ಆಗಿದೆ. ಮೊನಾಲಿಸಾ ತಾನೇ ಖುದ್ದಾಗಿ ಲವ್ ಮಾಡಿ, ಮದುವೆಗೆ ಒತ್ತಾಯಿಸಿದ್ದು, ಇದರಲ್ಲಿ ತಮ್ಮ ಪತಿಯ ತಪ್ಪಿಲ್ಲ ಎಂದಿದ್ದಾರೆ. ಇದೀಗ ಮದುವೆಯಾದ ವಾರದಲ್ಲಿಯೇ ಜೋಡಿ ಲೈವ್ಗೆ ಬಂದಿದೆ. ಮೊನಾಲಿಸಾ ಜೀವ ರಕ್ಷಣೆ ಕೋರಿದ್ದಾರೆ. ನಮ್ಮನ್ನು ಕಾಪಾಡಿ. ಸಾರ್ವಜನಿಕರಿಂದ ನಮಗೆ ಜೀವ ಭಯ ಉಂಟಾಗಿದೆ. ಸೋಷಿಯಲ್ ಮೀಡಿಯಾಗಳಲ್ಲಿ,...
ಕಿಮ್ ಪರ ೯೯.೯೩% ಮತ ಬಿದ್ದರೂ ೦.೦೭% ಹೋಗಿದ್ದು ಯಾರಿಗೆ
ಉತ್ತರ ಕೊರಿಯಾ ಸಂಸತ್ ಚುನಾವಣೆಯಲ್ಲಿ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅವರ ವರ್ಕರ್ಸ್ ಪಾರ್ಟಿ ಆಫ್ ಕೊರಿಯಾ ಮತ್ತು ಮಿತ್ರ ಗುಂಪುಗಳು ೯೯.೯೩% ಮತ ಪಡೆದು ಭರ್ಜರಿ ಜಯಗಳಿಸಿದ್ದರೂ ೦.೦೭% ಮತ ಹೋಗಿದ್ದು ಯಾರಿಗೆ? – ವಿಶ್ವಾದ್ಯಂತ ಭಾರೀ ಸದ್ದು ಮಾಡಿದ್ದ ಈ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಮಾರ್ಚ್ ೧೫ ರಂದು ೧೫ ನೇ ಸುಪ್ರೀಂ ಪೀಪಲ್ಸ್ ಅಸೆಂಬಿ ಸದಸ್ಯರನ್ನು ಆಯ್ಕೆ ಮಾಡಲು ನಡೆದ ಚುನಾವಣೆಯಲ್ಲಿ ಆಡಳಿತ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಪ್ರತಿಯೊಂದು ಸ್ಥಾನವನ್ನು ಗೆದ್ದಿದ್ದಾರೆ ಎಂದು ಸರ್ಕಾರಿ ಮಾಧ್ಯಮ ಕೊರಿಯನ್ ಸೆಂಟ್ರಲ್ ನ್ಯೂಸ್ ಏಜೆನ್ಸಿ ತಿಳಿಸಿದೆ. ನೋಂದಾಯಿತ ಮತದಾರರಲ್ಲಿ ಕೇವಲ ೦.೦೦೩೭ ಪ್ರತಿಶತದಷ್ಟು ಜನರು ವಿದೇಶದಲ್ಲಿ ಅಥವಾ ಸಮುದ್ರದಲ್ಲಿ ಕೆಲಸ ಮಾಡುತ್ತಿದ್ದರಿಂದ ಅವರಿಗೆ ಮತವನ್ನು ಚಲಾಯಿಸಲು ಸಾಧ್ಯವಾಗಲಿಲ್ಲ. ಆದರೆ ಅತ್ಯಂತ ಕಡಿಮೆ ಸಂಖ್ಯೆಯ ಸುಮಾರು ೦.೦೦೦೦೩ ಪ್ರತಿಶತದಷ್ಟು ಜನರು ಮತದಾನ ಪ್ರಕ್ರಿಯೆಯಿಂದ ದೂರವಿದ್ದರು ಎಂದು ಹೇಳಿಕೊಂಡಿದೆ. ಈ ಚುನಾವಣೆಯಲ್ಲಿ ಯಾವುದೇ ವಿರೋಧ ಪಕ್ಷದ ಅಭ್ಯರ್ಥಿಗಳು ಇರದ ಕಾರಣ ಪ್ರತಿಸ್ಪರ್ಧಿಗೆ...









